ಕನ್ನಡ ಭಾಷೆಯೊಂದಿಗೆ ಕೃಷಿ ಜ್ಞಾನ ಅಡಗಿದೆ
ಮೈಸೂರು

ಕನ್ನಡ ಭಾಷೆಯೊಂದಿಗೆ ಕೃಷಿ ಜ್ಞಾನ ಅಡಗಿದೆ

July 2, 2019

ಮೈಸೂರು, ಜು.1(ಎಂಟಿವೈ)- ಕನ್ನಡ ಭಾಷೆಯೊಳಗೆ ಜಾನಪದ ಭಾಷೆ ಸೇರಿ ರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆಯೊಳಗೆ ಕೃಷಿ ಜ್ಞಾನ ಅಡಗಿದೆ ಎಂದು ಬೆಂಗ ಳೂರು ವಿವಿ ಪ್ರಾಧ್ಯಾಪಕ ಪೆÇ್ರ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಸೋಮ ವಾರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಹಾಗೂ ಭಾರತೀಯ ಭಾಷಾ ಸಂಸ್ಥಾನದ ಸಂಯುಕ್ತಾಶ್ರಯದಲ್ಲಿ ಪದವಿ ಪೂರ್ವ ಉಪನ್ಯಾಸಕರಿಗಾಗಿ ಆಯೋಜಿ ಸಿದ್ದ `ಕನ್ನಡ ಪಠ್ಯ ಬೋಧನೆ ಮತ್ತು ತರ ಬೇತಿ’ ಕುರಿತ ಐದು ದಿನಗಳ ಕಾರ್ಯಾ ಗಾರಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಕನ್ನಡ ಭಾಷೆಯೊಳಗೆ ಹತ್ತು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಜಾನ ಪದ ಭಾಷೆಗಳು ಬೆರೆತಿವೆ. ಇದರಿಂದಾಗಿ ಕನ್ನಡ ಭಾಷೆ ಸಂಪದ್ಭರಿತವಾಗಿದೆ. ಅಲ್ಲದೆ ಕೃಷಿ ಜ್ಞಾನವೂ ಕನ್ನಡ ಭಾಷೆಯಲ್ಲಿ ಕಾಣ ಬಹುದಾಗಿದೆ. ಮೂರು ದಶಕಗಳ ಹಿಂದೆ ಸೆಂಡನ್ ಪಲಾಕ್ ಭಾರತದ ಅನೇಕ ಪ್ರಾಚೀನ ಪಠ್ಯಗಳನ್ನು ಮರುಜೀವಗೊಳಿಸುವ ಮತ್ತು ಭಾಷಾಂತರ ಮಾಡಲು ಬೆಂಗಳೂರಿಗೆ ಬಂದಿದ್ದರಲ್ಲದೆ, ಕರ್ನಾಟಕದುದ್ದಕ್ಕೂ ಎಲ್ಲಾ ವಿದ್ವಾಂಸರುಗಳನ್ನು ಭೇಟಿ ಮಾಡಿ, ಪಠ್ಯ ಗಳನ್ನು ಓದುವ, ವ್ಯಾಖ್ಯಾನಿಸುವ ವಿಧಾನ ದಲ್ಲಿನ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲಿದ್ದರು ಎಂದು ತಿಳಿಸಿದರು.

ಜಗತ್ತಿನ ಎಲ್ಲಾ ಭಾಷೆಗಳು ಭಾಷಾಂ ತರದ ಮೇಲೆ ಉಳಿದಿವೆ. ಶಾಸ್ತ್ರೀಯ ಅಧ್ಯ ಯನ ಮಾಡುತ್ತಿರುವ ಕಾರ್ಯಾಗಾರ ಅತ್ಯಂತ ಮಹತ್ವದ್ದಾಗಿದೆ. ಸಾಹಿತ್ಯದ ಅಧ್ಯಾ ಪಕರಿಗೆ ಉಳಿದವರಿಗಿಂತ ಹೆಚ್ಚಿನ ಜವಾಬ್ದಾರಿ ಇದೆ. ಎಲ್ಲಾ ವಿದ್ಯಾರ್ಥಿಗಳು ಸಾಹಿತ್ಯ ಎಂದರೆ ಪಠ್ಯವನ್ನು ಮೊದಲು ನೋಡುತ್ತಾರೆ. ಆದ್ದ ರಿಂದ ನಾವು ಸೃಜನಶೀಲ ಪಠ್ಯವನ್ನು ಹೊರ ತರುವ ಅಗತ್ಯವಿದೆ. ಇದು ವಿದ್ಯಾರ್ಥಿ ಗಳಲ್ಲಿರುವ ಸೃಜನಶೀಲತೆ ಮತ್ತು ವಿಮರ್ಶಾ ಮನೋಭಾವ ಹೊರ ತರಲು ಸಾಧ್ಯವಾ ಗುತ್ತದೆ. ಇದರಿಂದ ಭಾಷೆಯೊಳಗಿನ ಅನಂತ ಸಾಧಕರು ಜನ್ಮ ತಾಳುತ್ತಾರೆ ಎಂದರು.

ಇದೇ ವೇಳೆ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪೆÇ್ರ. ಡಿ.ಜಿ.ರಾವ್ ಮಾತನಾಡಿ, ಪ್ರಸ್ತುತ ಶಾಸ್ತ್ರೀಯ ಕನ್ನಡ ವನ್ನು ಅಧ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರ್ಯಾಗಾರ, ಕಮ್ಮಟಗಳ ಮೂಲಕ ಶಾಸ್ತ್ರೀಯ ಕನ್ನಡ ಅಧ್ಯಯನ ಮಾಡುವವರ ಸಂಖ್ಯೆ ಹೆಚ್ಚಿಸಬೇಕು. ಶಾಸ್ತ್ರೀಯ ಅಂಶಗಳನ್ನು ಬೆಳೆಸುವ ಮತ್ತು ಅರಿವು ಮೂಡಿಸುವ ಈ ಕಾರ್ಯಾಗಾರ ಮಹತ್ವ ಪಡೆದಿದೆ. ಕನ್ನಡ ವಿಭಾಗಗಳಿರುವ ವಿವಿ ಗಳಲ್ಲಿಯೂ ಇದರ ಬಗ್ಗೆ ಇದುವರೆಗೂ ಗಮನಹರಿಸಿಲ್ಲ. ಇದರಿಂದಾಗಿ ನಮಗೆ ಭಾಷೆಯ ಮೇಲಿನ ಹಿಡಿತ ಹಾಗೂ ಗುಣ ಮಟ್ಟ ಸಿಗುತ್ತಿಲ್ಲ. ಸ್ನಾತಕೋತ್ತರ ಹಾಗೂ ಸ್ನಾತಕಪೂರ್ವ ವಿದ್ಯಾರ್ಥಿಗಳು ಇದರ ಕಡೆಗೆ ಒಲವು ಮೂಡಿಸಲು ಬೇಕಾಗುವ ಪಠ್ಯಗಳನ್ನು ಒದಗಿಸಿದ್ದೇವೆ. ಸಂಶೋಧನೆ ಮಾಡುವವ ರಿಗೂ ಅಗತ್ಯ ಪರಿಕರಗಳನ್ನು ಸುಲಭವಾಗಿ ದೊರಕುವಂತೆ ಮಾಡಲು ಡಿಜಿಟಲೀಕರಣ ಮಾಡುತ್ತಿದ್ದೇವೆ. ಸಂಗ್ರಹ ಮಾಡಿದ ದತ್ತಾಂಶ ವನ್ನು ಎಲ್ಲರಿಗೂ ಕಲಿಕೆಗೆ ಅರ್ಥವಾಗು ವಂತೆ ಸರಳೀಕರಿಸಲಾಗುತ್ತಿದೆ ಎಂದರು. ಕಾರ್ಯಾಗಾರದಲ್ಲಿ ಯೋಜನಾ ಕೇಂದ್ರದ ನಿರ್ದೇಶಕ ಪೆÇ್ರ. ಕೆ.ಆರ್.ದುರ್ಗಾದಾಸ್, ಕಮ್ಮಟ ಸಂಚಾಲಕಿ ಡಾ.ರಾಧಾಮಣಿ ಉಪ ಸ್ಥಿತರಿದ್ದರು. ಇದೇ ವೇಳೆ ಪೆÇ್ರ.ರಾಮಲಿಂಗಪ್ಪ ಟಿ.ಬೇಗೂರು ಮತ್ತು ಪೆÇ್ರ. ತಿಮ್ಮಯ್ಯ ಗೋಷ್ಠಿಯಲ್ಲಿ ವಿಚಾರ ಮಂಡಿಸಿದರು.

Translate »