ಮೈಸೂರು,ಜು.1(ಎಸ್ಬಿಡಿ)- ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಮೈಸೂರು ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಎಸ್.ಎ.ರಾಮ ದಾಸ್ ಹಾಗೂ ತನ್ವೀರ್ ಸೇಠ್ ಹರಿಹಾಯ್ದ ಪ್ರಸಂಗ ಸೋಮವಾರ ನಡೆಯಿತು.
ನಗರೋತ್ಥಾನ ಅನುದಾನದಡಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಸಾರ್ವ ಜನಿಕ ಸಮಸ್ಯೆ ಪರಿಶೀಲನೆ ನಿಟ್ಟಿನಲ್ಲಿ ನಾಳೆ(ಜು.2) `ಮೈಸೂರು ನಗರ ಪ್ರದಕ್ಷಿಣೆ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಪಾಲಿಕೆಯ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಚಿವ ಜಿ.ಟಿ.ದೇವೇ ಗೌಡರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ ಕಾಮಗಾರಿಗಳ ಪ್ರಗತಿ, ಸ್ಥಿತಿಗತಿ, ಅನುದಾನ, ನಗರ ಪ್ರದ ಕ್ಷಿಣೆ ಮಾರ್ಗಸೂಚಿ ಸೇರಿದಂತೆ ಯಾವ ವಿಷಯದ ಬಗ್ಗೆಯೂ ಪಾಲಿಕೆ ಅಧಿಕಾರಿ ಗಳು ಸಭೆಗೆ ಸಮರ್ಪಕ ಮಾಹಿತಿ ನೀಡ ಲಿಲ್ಲ. ಇದರಿಂದ ಬೇಸರಗೊಂಡ ಜಿಟಿಡಿ, ಯಾವ ಅಧಿಕಾರಿಯೂ ತಯಾರಿ ಮಾಡಿ ಕೊಂಡು ಬಂದಿಲ್ಲ. ನಾಳಿನ ನಗರ ಪ್ರದ ಕ್ಷಿಣೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಯನ್ನೂ ತಿಳಿದುಕೊಂಡು ಬಂದಿಲ್ಲ. ನಾವು ಲೆಕ್ಕಕ್ಕಿಲ್ಲ ಎಂದು ತಿಳಿದಿದ್ದೀರಿ ಎಂದು ತರಾಟೆ ತೆಗೆದುಕೊಂಡರು.
ತನ್ವೀರ್ ಗರಂ: ಸಭೆ ಆರಂಭಕ್ಕೆ ಒಂದೆ ರಡು ಗಂಟೆ ಮುಂಚೆ ವಿಷಯ ತಿಳಿಸಿದ್ದನ್ನು ಪ್ರಸ್ತಾಪಿಸಿದ ಶಾಸಕ ತನ್ವೀರ್ ಸೇಠ್, ಶಿಸ್ತಿಲ್ಲದೆ ಸಭೆ ನಡೆಸುತ್ತೀರಿ. ಒಂದೆರಡು ಗಂಟೆ ಮುಂಚೆ ಸಭೆಗೆ ಆಹ್ವಾನಿಸುತ್ತೀರಿ. ಶಿಷ್ಟಾಚಾರ ಪಾಲಿಸಬೇಕೆಂಬ ಅರಿವಿಲ್ಲ. ಯಾರೋ ದಾಸಯ್ಯನಿಂದ ಫೋನ್ ಮಾಡಿಸಿದರೂ ನಾವು ಸಭೆಗೆ ಬರಬೇಕು. ಅದಿರಲಿ ಯಾವೊಬ್ಬ ಅಧಿಕಾರಿಗಳೂ ಸಭೆಗೆ ಬೇಕಾದ ಮಾಹಿತಿಯನ್ನೇ ತಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಸುವ ಮುನ್ನ ಕಾರ್ಯ ಸೂಚಿ ಸಿದ್ದಪಡಿಸಿಕೊಳ್ಳಬೇಕು. ನಾವು ಕೇಳಿದ ಮಾಹಿತಿಯೇ ನಿಮ್ಮ ಬಳಿ ಇಲ್ಲ. ಶಾಸಕರ ಬಗ್ಗೆ ನಿಮಗೆ ಗೌರವವಿಲ್ಲ. ನಗರ ಪ್ರದಕ್ಷಿಣೆಗೆ ಒಂದು ರೂಟ್ಮ್ಯಾಪ್ ಸಹ ಸಿದ್ದಪಡಿಸಿ ಕೊಂಡಿಲ್ಲ. ಇಷ್ಟೊಂದು ಬೇಜವಾಬ್ದಾರಿ ತೋರಿದರೆ ಸಭೆಯಲ್ಲಿ ಭಾಗವಹಿಸುವ ಅವಶ್ಯತೆ ಯಾದರೂ ಏನೆಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಎಚ್ಚರಿಕೆಯಿಂದ ಕೆಲಸ ಮಾಡಿ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆ ಯುವ ಸಭೆಯಲ್ಲಿ ಮಹತ್ವದ ನಿರ್ಣಯ ಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆದರೆ ಅಧಿಕಾರಿಗಳು ಯಾವುದೇ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿಲ್ಲ. ಒಂದು ಪ್ರಶ್ನೆಗೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ನಗರೋ ತ್ಥಾನ ಯೋಜನೆಯಡಿ ಪಾಲಿಕೆಗೆ ನೀಡಿ ರುವ 150 ಕೋಟಿ ರೂ. ಅನುದಾನದಲ್ಲಿ ಎಷ್ಟು ಹಣವನ್ನು ಯಾವ ವಿಭಾಗಕ್ಕೆ ಖರ್ಚು ಮಾಡಬೇಕೆಂದು ತಿಳಿಸುವ ಮಾರ್ಗಸೂಚಿಯನ್ನೇ ಸಭೆಗೆ ತಂದಿಲ್ಲ. ಸೂರ್ಯನಗರ ಮತ್ತು ಐಶ್ವರ್ಯ ಬಡಾವಣೆ ಯಲ್ಲಿ ಮಳೆಯಿಂದಾಗಿದ್ದ ಅವಾಂತರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಸೂಯೇಜ್ ಫಾರಂನ ಕಾಂಪೌಂಡ್ 4 ಕಡೆ ಮುರಿದು ಬಿದ್ದಿದೆ. ಹಣ ಪಡೆದು ನೂರಾರು ಹಸು ಗಳನ್ನು ಒಳ ಆವರಣದಲ್ಲಿ ಬಿಡಲಾಗು ತ್ತದೆ. 7 ಲಕ್ಷ ಟನ್ ಕಸದ ರಾಶಿ ಬಿದ್ದಿದೆ. ಗಿಡಗಳನ್ನು ನೆಡುವಂತೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. ಅಲ್ಲಿನ ಅಧಿಕಾರಿ ನಿತ್ಯ 2 ಸಾವಿರ ರೂ. ಪಿಗ್ಮಿ ಕಟ್ಟುತ್ತಾರೆ. ಅಲ್ಲಿನ ಅಕ್ರಮದ ಬಗ್ಗೆ ವೀಡಿಯೋ ಸಹಿತ ತಿಳಿಸಿ ದ್ದರೂ ಕ್ರಮ ಕೈಗೊಂಡಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ನಗರದ ಸಂಚಾರ ನಿರ್ವಹಣೆ ವ್ಯವಸ್ಥೆ ಉನ್ನತೀಕರ ಣಕ್ಕೆ 10 ಕೋಟಿ ರೂ. ಬಿಡುಗಡೆ ಮಾಡ ಲಾಗಿತ್ತು. ಆದರೆ ಯಾವುದೇ ಕೆಲಸ ವಾಗಿಲ್ಲ. ಇದೀಗ ಯೋಜನೆಯನ್ನೇ ರದ್ದುಮಾಡಿ, ಪೊಲೀಸ್ ಇಲಾಖೆಯಿಂದ ಉಳಿದ ಹಣವನ್ನು ಪಾಲಿಕೆ ವಾಪಸ್ಸು ಪಡೆಯಲು ಮುಂದಾಗಿದೆ. ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಬೇಕೆಂದು ಎಚ್ಚರಿಸಿದ್ದರಲ್ಲದೆ, ಯುಜಿಡಿ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನೂ ಕರೆಸಿ, ಪತ್ಯೇಕ ಸಭೆ ನಡೆಸಬೇಕೆಂದು ಸಚಿವ ಜಿಟಿಡಿ ಅವರಿಗೆ ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಲ್ಲಾ ಯೋಜನೆ ಗಳು, ವಿಚಾರಗಳ ಬಗ್ಗೆ ಪಾಲಿಕೆ ಆಯುಕ್ತ ರಾದ ಶಿಲ್ಪಾನಾಗ್ ಅವರು ಎಲ್ಲಾ ಮಾಹಿತಿ ಸಿದ್ದಪಡಿಸಿಕೊಂಡಿದ್ದರು. ಆದರೆ ಅನಾ ರೋಗ್ಯದಿಂದ ಸಭೆಗೆ ಪಾಲ್ಗೊಳ್ಳಲು ಸಾಧ್ಯ ವಾಗಿಲ್ಲ ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಷಫೀ ಅಹಮ್ಮದ್, ಮಾಜಿ ಮೇಯರ್ಗಳಾದ ಆರೀಫ್ ಹುಸೇನ್, ಅಯೂಬ್ಖಾನ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಶಾಂತಕುಮಾರಿ, ಬಿ.ವಿ.ಮಂಜುನಾಥ್, ಪ್ರೇಮಾಶಂಕರೇಗೌಡ ಸೇರಿದಂತೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕಾರ್ಪೊರೇಟರ್ಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸೇರಿದಂತೆ ಇನ್ನಿತರರು ಹಾಜರಿದ್ದರು.
ಬೀದಿದೀಪಕ್ಕಾಗಿ ಭಿಕ್ಷೆ ಬೇಡುವಂತಾಗಿದೆ…
ಬಿ.ವಿ.ಮಂಜುನಾಥ್, ಅಯೂಬ್ಖಾನ್, ಆರಿಫ್ ಹುಸೇನ್ ಇನ್ನಿತರ ಸದಸ್ಯರು ಬೀದಿ ದೀಪಕ್ಕಾಗಿ ಸರ್ಕಾರದ ಮುಂದೆ ಭಿಕ್ಷೆ ಬೇಡುವಂತಾಗಿದೆ ಎಂದರು. ಎಲ್ಇಡಿ ದೀಪಗಳ ಅಳವಡಿಸುವ ರಾಜ್ಯ ಸರ್ಕಾರ ಯೋಜನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ನಡೆಸಲಾಗಿರುವ ಸಮೀಕ್ಷೆ ಯಂತೆ ನಗರ ದಲ್ಲಿ 75 ಸಾವಿರ ವಿದ್ಯುತ್ ಕಂಬಗಳಿದ್ದು, 58 ಸಾವಿರ ಕಂಬಕ್ಕೆ ಬೀದಿ ದೀಪ ಅಳವಡಿಸ ಲಾಗಿದ್ದು, ಈ ಪೈಕಿ 2486 ಕೆಟ್ಟಿವೆ. ಇಷ್ಟು ಬೀದಿ ದೀಪ ದುರಸ್ತಿಗೆ ಸರ್ಕಾರದ ಅನು ಮತಿ ಪಡೆದು ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಅಕ್ಬರ ಮಂತ್ರಿ ಬೀರಬಲ್ಲನ ಕರೆದು ನಮ್ಮ ರಾಜ್ಯದಲ್ಲಿ ಎಷ್ಟು ಕಾಗೆಗಳಿವೆ ಎಂದು ಎಣಿಸುವಂತೆ ತಿಳಿಸಿದ್ದರಂತೆ. ಹಾಗಾ ಗಿದೆ ಪಾಲಿಕೆ ಅಧಿಕಾರಿಗಳ ಪರಿಸ್ಥಿತಿ. ಕೇವಲ 2486 ದೀಪಗಳು ಕೆಟ್ಟಿವೆ ಎಂದು ಗುರು ತಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಶಾಸಕ ರಾಮ ದಾಸ್ ಆರೋಪಿಸಿದರು. ಈ ಸಂಬಂಧ ಸಭೆ ನಡುವೆಯೇ ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡರು, ಬೀದಿ ದೀಪ ಅಳವಡಿಸಲು ಅನುಮತಿ ನೀಡುವಂತೆ ತಿಳಿಸಿದರು. ಅಲ್ಲದೆ ವಾರ್ಡ್ಗೆ ಕನಿಷ್ಟ 200ರಂತೆ ಹೊಸದಾಗಿ ಇನ್ನೊಂದು ಪ್ರಸ್ತಾವನೆ ಸಲ್ಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ದರು. ರಿಂಗ್ರಸ್ತೆ ವಿದ್ಯುತ್ ದೀಪಗಳ ದುರಸ್ತಿ, ಬದಲಾವಣೆ ಹಾಗೂ ನಿರ್ವಹಣೆಯನ್ನು ಪಾಲಿಕೆ ಪಾಲಿನ ಮೊತ್ತವನ್ನು ಪಡೆದು, ಸಂಪೂರ್ಣವಾಗಿ ಮುಡಾ ವತಿ ಯಿಂದಲೇ ನಿರ್ವಹಿಸುವಂತೆ ತಿಳಿಸಿದರು.
ಜು.4ರಂದು ಸಚಿವ ಜಿಟಿಡಿಯಿಂದ ಮೈಸೂರಲ್ಲಿ ಜನತಾ ದರ್ಶನ
ಮೈಸೂರು,ಜು.1(ಎಸ್ಬಿಡಿ)-ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಜು.4ರಂದು ನಗರ ಪಾಲಿಕೆ ವ್ಯಾಪ್ತಿಯ ಜನತಾ ದರ್ಶನ ಏರ್ಪಡಿಸಲಾಗಿದೆ.
ನಗರ ಪಾಲಿಕೆಯಲ್ಲಿ ಸೋಮವಾರ ನಗರ ಪ್ರದಕ್ಷಿಣೆ ಪೂರ್ವ ಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದ ಸಚಿವ ಜಿ.ಟಿ.ದೇವೇ ಗೌಡರು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳೂ ಸಿದ್ಧರಾಗಿರಬೇಕು. ಖಾತೆ, ಕಂದಾಯ, ಹಕ್ಕುಪತ್ರ, ಸರ್ಕಾರಿ ಸೌಲಭ್ಯ, ಟ್ರೇಡಿಂಗ್ ಲೈಸನ್ಸ್ ಇನ್ನಿತರ ಯಾವುದೇ ವಿಚಾರಗಳಿದ್ದರೂ ಇತ್ಯರ್ಥವಾಗ ಬೇಕು. ಸಮಸ್ಯೆಗಳನ್ನು ಹೊತ್ತು ಕಚೇರಿಯಿಂದ ಕಚೇರಿಗೆ ಅಲೆದಾಡಿ ಬೇಸತ್ತಿರುವ ಸಾಮಾನ್ಯರಿಗೆ ಅನುಕೂಲವಾಗಲೆಂದು ಈ ಜನತಾ ದರ್ಶನ ನಡೆಸಲಾಗುತ್ತಿದೆ. ಜು.4ರ ಬೆಳಿಗ್ಗೆ 7ರಿಂದ ಅಲ್ಲಿಗೆ ಬರುವ ಎಲ್ಲಾ ಸಾರ್ವಜನಿಕರ ಅಹವಾಲು ಆಲಿಸು ವವರೆಗೂ ಪಾಲಿಕೆ ಹಾಗೂ ಮುಡಾದ ಎಲ್ಲಾ ವಿಭಾಗದ ಅಧಿಕಾರಿಗಳು ಅಲ್ಲಿಯೇ ಇರಬೇಕೆಂದು ತಿಳಿಸಿದರು.
ಜನತಾ ದರ್ಶನದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳೂ ತಿಳಿಯುತ್ತವೆ. ನಂತರ ಜು.8ರಂದು ಪಾಲಿಕೆಯಲ್ಲಿ ಎಲ್ಲಾ ಶಾಸಕರು, ಕಾರ್ಪೊರೇಟರ್ಗಳು, ಅಧಿ ಕಾರಿಗಳು ಸೇರಿ ಸಭೆ ನಡೆಸಿ, ವಿಸ್ತøತವಾಗಿ ಚರ್ಚಿಸೋಣ. ನಗರ ಪ್ರದಕ್ಷಿಣೆ ಹಾಗೂ ಜನತಾ ದರ್ಶನದಿಂದ ತಿಳಿಯುವ ಎಲ್ಲಾ ಸಮಸ್ಯೆಗಳು, ಅಗತ್ಯ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಜು.12ರಿಂದ 26ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಅಷ್ಟರಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಪೂರಕವಾದ ಪ್ರಸ್ತಾವನೆ ಸಲ್ಲಿಸಿ. ಅಧಿವೇಶನಪೂರ್ವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉನ್ನತ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಪ್ರಸ್ತಾವನೆಯನ್ನು ಗಮನಕ್ಕೆ ತಂದು, ಮುಂದಿನ ಕ್ರಮಕ್ಕೆಮನವಿ ಮಾಡಲು ಅನುವಾಗುತ್ತದೆ ಎಂದು ಜಿಟಿಡಿ ಹೇಳಿದರು.
ಮಹತ್ವದ ಕಾರ್ಯ: ಟ್ರೇಡ್ ಲೈಸನ್ಸ್ ನವೀಕರಣ, ಹಕ್ಕುಪತ್ರ, ಜನನ-ಮರಣ ಪ್ರಮಾಣ ಪತ್ರ ವಿತರಣೆ, ನೀಲನಕ್ಷೆ ಮಂಜೂರು ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಪಾಲಿಕೆ ಪ್ರಧಾನ ಕಚೇರಿ ಹಾಗೂ ವಲಯ ಕಚೇರಿಗಳಿಗೆ ಅಲೆದು ಸಾಕಾಗಿದೆ. ಒಬ್ಬ ಅಧಿಕಾರಿ ಹೇಳುವ ನಿಯಮ, ಮತ್ತೋರ್ವ ಅಧಿಕಾರಿ ಯನ್ನು ಭೇಟಿ ಮಾಡುವಷ್ಟರಲ್ಲಿ ಬದಲಾಗಿರುತ್ತದೆ. ಅನಗತ್ಯ ದಾಖಲೆಗಳನ್ನು ನೀಡುವಂತೆ, ಕೆಲ ದಿನಗಳನ್ನು ಬಿಟ್ಟು ಬರುವಂತೆ ಸಬೂಬು ಹೇಳಿ ಕಳುಹಿಸುತ್ತಾರೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ನೀರಿನ ಮೀಟರ್ ಸರಿಪಡಿಸುವಂತೆ ಕೇಳಿದರೂ ಕಿವಿಗೊಡುತ್ತಿಲ್ಲ. ಹೀಗೆ ಪಾಲಿಕೆ ವಿರುದ್ಧ ಸಾರ್ವಜನಿಕರು ದೂರುತ್ತಿ ರುತ್ತಾರೆ. ಹೀಗೆ ನೊಂದವರಿಗೆ ಜನತಾ ದರ್ಶನದಲ್ಲಿ ಪರಿಹಾರ ದೊರಕಬಹುದು. ಸಮಸ್ಯೆ ಪರಿಹರಿಸಲು ಅನಗತ್ಯವಾಗಿ ವಿಳಂಬ ಮಾಡಿದ ಅಧಿಕಾರಿಗಳಿಗೂ ಸಚಿವರಿಂದ ಮಂಗಳಾರತಿ ಆಗಬಹುದು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗಬಹುದು. ಇಲ್ಲವೇ ನಿರ್ದಿಷ್ಟ ಅವಧಿಯಲ್ಲಿ ಪರಿಹಾರ ಕಾಣಬಹುದು. ಹಾಗಾಗಿ ಇದೊಂದು ಮಹತ್ವಪೂರ್ಣ ಕಾರ್ಯವಾಗಲಿದೆ. ಜು.4ರಂದು ಜೆ.ಕೆ.ಮೈದಾನದಲ್ಲಿ ನಡೆಯ ಲಿರುವ ಜನತಾ ದರ್ಶನದಲ್ಲಿ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು.