ಮೈಸೂರು,ಜು.1(ಎಸ್ಪಿಎನ್)-ಕಲಿ ಯುಗದಲ್ಲಿ `ಬಾವಿಯಲ್ಲಿ ನೀರು ಬತ್ತಿ ಹೋಗುತ್ತದೆ, ಬಾವಿಗಳಿದ್ದರೂ ನೀರಿರಲ್ಲ, ಗಂಡಿದ್ದರೂ ಹೆಣ್ಣು ಸಿಗಲ್ಲ, ಹಾಲಿದ್ದರೂ ಮಕ್ಕಳು ಕುಡಿಯುವಂಥ ಹಾಲು ಸಿಗಲ್ಲ. ಒಟ್ಟಿನಲ್ಲಿ ಎಲ್ಲದ್ದಕ್ಕೂ ತೆರಿಗೆ ಕಟ್ಟುವ ಬಗ್ಗೆ ಮಂಟೇಸ್ವಾಮಿ ಕಾಲಜ್ಞಾನದಲ್ಲಿ ಉಲ್ಲೇಖ ವಿತ್ತು. ಇಂದು ಅದು ಸತ್ಯವಾಗಿದೆ ಎಂದು ಜಾನಪದ ಕಲಾವಿದ ಮಳವಳ್ಳಿ ಮಹಾ ದೇವಸ್ವಾಮಿ ಅಭಿಪ್ರಾಯಪಟ್ಟರು.
ಮೈಸೂರು ಜೆಎಲ್ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ಸಪ್ತಸ್ವರ ಸಿಂಚನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.
ಮಂಟೇಸ್ವಾಮಿ ಹೇಳಿದ ಕಾಲಜ್ಞಾನದಲ್ಲಿ ಹೇಳಿದಂತೆ ಇಂದು ಎಲ್ಲವೂ ನಡೆಯುತ್ತಿದೆ. ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಎಲ್ಲರೂ ಉದ್ಯೋಗದಲ್ಲಿರುವವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಡುತ್ತಾರೆ. ಎಲ್ಲರೂ ವೈದ್ಯರು, ಇಂಜಿನಿಯರ್, ಶಿಕ್ಷಕರು ಸೇರಿದಂತೆ ಇತರೆ ಸರ್ಕಾರಿ ವೃತ್ತಿಯಲ್ಲಿರವವರನ್ನು ಮತ್ತು ವ್ಯಾಪಸ್ಥರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಒಪ್ಪುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅಂಕಿ-ಅಂಶದ ಅನುಪಾತ (1000:800) ದಲ್ಲಿ ಏರುಪೇರಾಗುತ್ತಿದೆ ಎಂದರು.
ಆದ್ದರಿಂದ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಗುಣ ಸಮಾಜಕ್ಕೆ ಬರಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಕೌಟುಂಬಿಕ ಕಲಹಗಳು, ವರದಕ್ಷಿಣೆ ಕಿರು ಕುಳ ಸೇರಿದಂತೆ ಎಲ್ಲದಕ್ಕೂ ಸುಂಕ ಕಟ್ಟುವ ಪರಿಸ್ಥಿತಿ ಎದುರಾಗಿದೆ ಎಂದರಲ್ಲದೆ, ಹಿಂದಿನ ಕಾಲದಲ್ಲಿ ವೈದ್ಯರನ್ನು ದೇವರಿಗೆ ಹೋಲಿ ಸುತ್ತಿದ್ದರು. ಅವರೂ ಸಹಾ ರೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಇಂದು ಈ ಸಂಬಂಧದ ಉಳಿಯಾಗಿದೆ ಎಲ್ಲವನ್ನು ಹಣದಿಂದಲೇ ಎನ್ನುವ ಭಾವ ಸಮಾಜದಲ್ಲಿ ಮೂಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ರಾಜೀವ್ಗಾಂಧಿ ಆರೋಗ್ಯ ವಿe್ಞÁನ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ವೈದ್ಯರೂ ಮನುಷ್ಯರು. ಅವರಿಗೂ ಬದು ಕುವ ಹಕ್ಕಿದೆ. ಸದಾ ರೋಗಿಗಳ ಯೋಗ ಕ್ಷೇಮ ದಲ್ಲಿ ತೊಡಗಿರುವ ವೈದ್ಯರನ್ನು ಸಾಮಾನ್ಯ ರಂತೆ ಸಮಾಜ ಕಾಣುವಂತಾಗಬೇಕು ಎಂದರು.
ವೃತ್ತಿ ನಿರತ ವೈದ್ಯನನ್ನು ಕೊಂದರೆ ಸಾವಿರಾರು ರೋಗಿಗಳ ಪ್ರಾಣ ಉಳಿ ಸುವ ಅವಕಾಶವನ್ನು ಈ ಸಮಾಜ ಕಳೆದು ಕೊಳ್ಳಬೇಕಾಗುತ್ತದೆ. ಹೀಗಿದ್ದರೂ ವೈದ್ಯರ ಮೇಲಿನ ದೌರ್ಜನ್ಯ ಮನೋಭಾವ ಸಮಾಜ ದಲ್ಲಿ ಏಕೆ ಬೆಳೆಯುತ್ತಿದೆ ಎಂದು ಪ್ರಶ್ನಿಸಿ ದರಲ್ಲದೆ, ವೈದ್ಯರ ದಿನಾಚರಣೆಯನ್ನು ವೈದ್ಯಕೀಯೇತರ ಸಂಸ್ಥೆಗಳು ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಇಲ್ಲಿ ವೈದ್ಯರು ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧವೇರ್ಪಟ್ಟಿದೆ ಎಂಬುದು ನನ್ನ ಭಾವನೆಯಾಗಿದೆ ಎಂದರು.
ವೈದ್ಯ ವೃತ್ತಿಯನ್ನು ಪ್ರತಿಷ್ಠೆ ಅನ್ನುವ ರೀತಿಯಲ್ಲಿ ನೋಡಬಾರದು. ಕೆಲ ವೈದ್ಯ ರದು ಹೈ ಫೈ ಜೀವನ, ಸಹವೃತ್ತಿದಾರರನ್ನೇ ವಿವಾಹವಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಇನ್ನು ಎಲ್ಲವನ್ನೂ ಹಣದಿಂದಲೇ ಕೊಂಡು ಕೊಳ್ಳುವ ಭಾವ ರೋಗಿಗಳಲ್ಲೂ ಮನೆ ಮಾಡಿದೆ. ಈ ಎರಡೂ ಬೆಳವಣಿಗೆಗಳೂ ಒಳ್ಳೆಯದಲ್ಲ ಎಂದು ತಿಳಿಸಿದರು. ಈ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಅನಸ್ತೇಷಿಯ ಪ್ರೋಫೆಸರ್ ಡಾ.ಎಂ.ಡಿ.ಆನಂದ್, ಕೆ.ಆರ್.ಆಸ್ಪತ್ರೆ ಫಿಷಿಸಿಯನ್ ಡಾ.ವಂದನಾ, ಕೆ.ಆರ್. ಆಸ್ಪತ್ರೆಯ ಡಾ.ವಿವೇಕ್, ತುಮಕೂರಿನ ಡಾ.ರವಿ, ಜೆಎಸ್ಎಸ್ ಆಸ್ಪತ್ರೆಯ ಹಾರ್ಟ್ ಸರ್ಜನ್ ಡಾ.ಶ್ಯಾಂಪ್ರಸಾದ್, ಡಾ.ಯುವ ರಾಜಶಾಸ್ತ್ರಿ, ಡಾ.ಶಿಲ್ಪ, ಡಾ.ನಾರಾಯಣ ಹೆಗ್ಡೆ, ಡಾ.ಸುವರ್ಣ ರವಿಕುಮಾರ್, ಡಾ. ಸೋನಿಯಾ ಮಂದಪ್ಪ ಅವರನ್ನು ಸನ್ಮಾನಿಸ ಲಾಯಿತು. ಚಿತ್ರನಟ ಡಾ.ಅಂಬರೀಷ್ ಅಭಿನಯದ ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಸಪ್ತಸ್ವರ ಸಿಂಚನ ಸಂಸ್ಥೆಯ ಸಭಾಧ್ಯಕ್ಷ ಡಾ.ಕೆ.ಆರ್. ಮಂಜು ನಾಥ್, ಅಧ್ಯಕ್ಷ ಎನ್.ಹರೀಶ್, ಉಪಾಧ್ಯಕ್ಷ ಎಂ.ಆರ್.ದ್ವಾರಕನಾಥ್, ಕಾರ್ಯದರ್ಶಿ ವಿ.ಜಗದೀಶ್ ಇದ್ದರು.