ಪತ್ರಿಕೋದ್ಯಮದ ಪಿತಾಮಹ ತಾತಯ್ಯ ಪ್ರತಿಮೆ ಮುಂದೆ ಪತ್ರಿಕಾ ದಿನಾಚರಣೆ
ಮೈಸೂರು

ಪತ್ರಿಕೋದ್ಯಮದ ಪಿತಾಮಹ ತಾತಯ್ಯ ಪ್ರತಿಮೆ ಮುಂದೆ ಪತ್ರಿಕಾ ದಿನಾಚರಣೆ

July 2, 2019

ಮೈಸೂರು,ಜು.1(ಎಂಟಿವೈ)-ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸೋಮ ವಾರ ಮೈಸೂರಿನ ತಾತಯ್ಯ ಪಾರ್ಕ್‍ನ ಲ್ಲಿರುವ ಪತ್ರಿಕೋದ್ಯಮ ಪಿತಾಮಹ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಾರ್ವ ಜನಿಕರಿಗೆ ಸಿಹಿ ವಿತರಿಸುವುದರೊಂದಿಗೆ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಅಭಿಯಾನ ನಡೆಸಲಾಯಿತು.

ವಿವಿಧ ಸಂಘಟನೆಗಳ ಮುಖಂಡರು ತಾತಯ್ಯ ಪಾರ್ಕ್‍ಗೆ ಆಗಮಿಸಿ ತಾತಾಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಅಲ್ಲದೆ ಸಾರ್ವಜನಿ ಕರಿಗೆ ಕನ್ನಡ ಪತ್ರಿಕೆಯನ್ನು ವಿತರಿಸುವ ಮೂಲಕ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಮನವರಿಕೆ ಮಾಡಿಕೊಡುವ ಮೂಲಕ ಪತ್ರಿಕಾ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ಮಾತ ನಾಡಿ, ಲೋಕ ಹಿತ ಚಿಂತಕ ತಾತಯ್ಯ ಮೈಸೂರು ಸಂಸ್ಥಾನದ ಆಡಳಿತಕ್ಕೆ ನೀತಿ ನಿರೂಪಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದವರು. 1883 ರಲ್ಲಿ ಹಿತಬೋಧಿನಿ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಸೇವೆ ಆರಂಭಿಸಿದ ತಾತಯ್ಯನವರು ಸಾಧ್ವಿ, ವೃತ್ತಾಂತ, ಚಿಂತಾಮಣಿ, ಮೈಸೂರು ಹೆರಾಲ್ಡ್ ಹಾಗೂ ಇನ್ನಿತರ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದವರು. ಬಡ ವಿದ್ಯಾರ್ಥಿ ಗಳ ವಿದ್ಯಾಭ್ಯಾಸಕ್ಕೆ ಮೈಸೂರಿನಲ್ಲಿ ಅನಾಥಾಲಯ ಸ್ಥಾಪನೆ ಮಾಡಿದರು ಎಂದು ಸ್ಮರಿಸಿದರು.

ಸಮಾಜ ಸೇವಕ ಕೆ.ರಘುರಾಂ ಮಾತ ನಾಡಿ, ಜರ್ಮನಿಯ ಹರ್ಮನ್ ಮೊಗ್ಲಿಂಗ್ 1843 ಜುಲೈ 1 ರಂದು ಮಂಗಳೂರು ಸಮಾಚಾರ ಪತ್ರಿಕೆಯನ್ನು ಹೊರ ತರುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. ಅದರಂತೆ ಪತ್ರಿಕೆಗಳಿಂದ ಪ್ರಭಾವಿತರಾದ ದಿವಗಂತ ತಾತಯ್ಯ ಅವರು ‘ಹಿತಬೋಧಿನಿ’ ‘ಸಾಧ್ವಿ ‘ ಸೇರಿ ದಂತೆ ಇನ್ನಿತರ ಪತ್ರಿಕೆಗಳನ್ನು ಹೊರ ತರುವುದರೊಂದಿಗೆ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳ ಉಗಮಕ್ಕೆ ಕಾರಣರಾದರು ಎಂದು ಸ್ಮರಿಸಿದರು

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಪತ್ರಕರ್ತರಿಗೆ ವಿರಾಮವಿರು ವುದಿಲ್ಲ. ಹಗಲು, ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯ ರೊಂದಿಗೆ ಸಮಯ ಕಳೆಯಲು ಸಾಧ್ಯವಾ ಗುವುದಿಲ್ಲ. ಒತ್ತಡದ ನಡುವೆಯೇ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿ ಸಲು ಪತ್ರಕರ್ತರ ಸಂಘ ಮುಂದಾ ಗಬೇಕು. ಪತ್ರಕರ್ತರು ಸಮಾಜದ ಏಳಿಗೆಗೆ ಪೂರಕವಾದ ಹಾಗೂ ಸಮಾಜದ ಆರೋಗ್ಯ ಹದಗೆಡಿಸುವ ಸುದ್ದಿಗಳಿಂದ ದೂರವಿದ್ದು, ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಯಾರ ಪ್ರಭಾವಕ್ಕೂ ಮಣಿಯದೆ ನಿರ್ಭಿಡೆಯಿಂದ ಜವಾಬ್ದಾರಿ ನಿಭಾಯಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಮಹೇ ಶ್ವರನ್, ಬಿಎಸ್ಪಿ ನಗರಾಧ್ಯಕ್ಷ ಡಾ.ಬಸವ ರಾಜು, ಬಿಜೆಪಿ ಮುಖಂಡ ಮೋಹನ್, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್ ಗೌಡ, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ಬ್ರಾಹ್ಮಣ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಶ್ರೀನಿವಾಸ್, ರಂಗನಾಥ್, ಪ್ರಶಾಂತ್, ಸುಚೀಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Translate »