ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.
ಮೈಸೂರು

ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.

February 26, 2019

ಗುದ್ದಲಿ ಪೂಜೆ ನೆರವೇರಿಸಿದ ಸಂಸದ ಆರ್.ಧ್ರುವನಾರಾಯಣ್ ಭರವಸೆ
ನಂಜನಗೂಡು: ಬಹಳ ವರ್ಷ ಗಳ ಹಿಂದೆಯೇ ಭೂಮಿ ಪೂಜೆ ನೆರ ವೇರಿದ್ದರೂ ನೆನಗುದಿಗೆ ಬಿದ್ದಿರುವ ನಂಜನ ಗೂಡು ತಾಲೂಕು ಒಕ್ಕಲಿಗರ ಭವನಕ್ಕೆ ಮುಖ್ಯಮಂತ್ರಿಗಳಿಂದ 1 ಕೋಟಿ ರೂ. ಅನು ದಾನ ಕೊಡಿಸುವುದಾಗಿ ಸಂಸದ ಆರ್. ಧ್ರುವನಾರಾಯಣ್ ಇಂದಿಲ್ಲಿ ಭರವಸೆ ನೀಡಿದರು.

ನಗರದ ಚಾಮಲಾಪುರ ಬೀದಿಯಲ್ಲಿನ ಅಂದಾಜು 40 ಲಕ್ಷ ರೂ. ವೆಚ್ಚದ ಒಕ್ಕಲಗರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದÀರು.
ಈ ಭವನ ಕೇವಲ 40 ಲಕ್ಷ ರೂ. ವೆಚ್ಚ ದ್ದಾಗಿದ್ದು, ಇದಕ್ಕೆ ತಮ್ಮ ಸಂಸದರ ಅನು ದಾನದಲ್ಲಿ 5 ಲಕ್ಷ ರೂ. ನೀಡಿದ್ದು, ಉಳಿಕೆ ಹಣವನ್ನು ಇತರೇ ಜನಪ್ರತಿನಿಧಿಗಳಿಂದ ಕೊಡಿಸುವ ಭರವಸೆ ನೀಡಿದ ಸಂಸದರು, ತಾಲೂಕು ಒಕ್ಕಲಿಗರ ಭವನಕ್ಕೆ ಮಾತ್ರ ಮುಖ್ಯಮಂತ್ರಿಗಳಿಂದಲೇ 1 ಕೋಟಿ ಹಣ ವನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಿ ಸುವುದಾಗಿ ಭರವಸೆ ನೀಡಿದÀರು

ಆದಿಚುಂಚನಗಿರಿಯ ಹಿಂದಿನ ಮಹಾ ಸ್ವಾಮಿಗಳಿಂದ ಭೂಮಿಪೂಜೆಯಾಗಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಆ ಭವನದ ಕಾಮಗಾರಿಯನ್ನು ಈಗಲಾ ದರೂ ಕೈ ಗೆತ್ತಿಕೊಂಡು ಪೂರ್ಣಗೊಳಿಸಿ ಎಂದು ಸ್ಥಳದಲ್ಲಿದ್ದ ತಾಲೂಕು ಒಕ್ಕಲಿಗ ಮುಖಂಡರಿಗೆ ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷೆ ಪುಷ್ಪ ಲತಾ ಕಮಲೇಶ. ತಾಲೂಕು ಒಕ್ಕಲಗರ ಸಂಘದ ಅಧÀ್ಯಕ್ಷ ಎನ್.ನರಸಿಂಹಸ್ವಾಮಿ, ಮುಖಂಡರಾದ ಎನ್.ಕೆ.ನಾಗರಾಜು, ಶ್ರೀಧರ್, ದೊರೆಸ್ವಾಮಿ, ಮಂಜುನಾಥ, ನಗರಸಭಾ ಸದಸ್ಯರಾದ ರಾಜೇಶ, ಚಂದ್ರು ಮೀನಾಕ್ಷಿ ರಾಮಚಂದ್ರು, ಸುಂದರ್ ರಾಜು, ಶೌಖತ್ ಮರಿಸ್ವಾಮಿ ಗೀರಿಶ್, ಅಕ್ಬರ್, ಶ್ರೀಕಂಠ, ರಮೇಶ, ಜಗದೀಶ ಇನ್ನಿತರರು ಉಪಸ್ಥಿತರಿದ್ದರು.

Translate »