ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ಎಸ್.ಎ.ರಾಮದಾಸ್ ಮಾಲಾರ್ಪಣೆ
ಮೈಸೂರು

ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ಎಸ್.ಎ.ರಾಮದಾಸ್ ಮಾಲಾರ್ಪಣೆ

January 13, 2020

ಮೈಸೂರು,ಜ.12(ಆರ್‍ಕೆಬಿ)-ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂರಿನ ವಿವೇಕಾನಂದ ವೃತ್ತ ದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಭಾರತದ ಮುಂದಿನ ಭವಿಷ್ಯವೇ ಮಕ್ಕಳು. ಹಾಗಾಗಿ ಇಂದಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಆದರ್ಶ ತಿಳಿಸಿಕೊಡ ಬೇಕು. ಅಮೆರಿಕಾದ ಚಿಕಾಗೋದಲ್ಲಿ ವಿವೇಕಾ ನಂದರು ಹೇಳಿದ ಮಾತುಗಳು ಇಂದಿಗೂ ಜನ ಮಾನಸದಲ್ಲಿ ಗುನುಗುನಿಸುತ್ತಿದೆ. ಅಂದರೆ ಅವರ ಮಾತಿನ ಅರ್ಥವನ್ನು ಮಕ್ಕಳು ಅರಿತುಕೊಳ್ಳ ಬೇಕು. ಶಿಕ್ಷಕರು, ಪೋಷಕರು ವಿವೇಕಾನಂದರ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಪಾಲಿಕೆ ಸದಸ್ಯರಾದ ಸುನಂದಾ ಪಾಲನೇತ್ರ, ಜಿ.ರೂಪಾ, ಛಾಯಾದೇವಿ, ಶಿವಕುಮಾರ್, ಗೀತಾಶ್ರೀ ಯೋಗಾನಂದ್, ಸೌಖ್ಯ ಉಮೇಶ್, ಚಂಪಕ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಉಪಾಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಶ್ರೀನಿವಾಸ್, ಕೃಷ್ಣ, ಈಶ್ವರ್, ರಘು, ರವಿ, ನವೀನ್, ಗಿರೀಶ್, ಯೋಗೇಶ್, ಗುರುರಾಜ್ ಇನ್ನಿತರರು ಉಪಸ್ಥಿತರಿದ್ದರು.

Translate »