ವರ್ಷಾರಂಭದಲ್ಲಿ ಸಿದ್ದಗಂಗಾ ಶ್ರೀ, ವರ್ಷಾಂತ್ಯದಲ್ಲಿ ಪೇಜಾವರ ಶ್ರೀ
ಮೈಸೂರು

ವರ್ಷಾರಂಭದಲ್ಲಿ ಸಿದ್ದಗಂಗಾ ಶ್ರೀ, ವರ್ಷಾಂತ್ಯದಲ್ಲಿ ಪೇಜಾವರ ಶ್ರೀ

December 30, 2019

ಮೈಸೂರು,ಡಿ.29- ಇನ್ನೆರಡು ದಿನ ಕಳೆದರೆ ಹೊಸ ವರ್ಷ ಆರಂಭಗೊಳ್ಳುತ್ತದೆ. ಅಲ್ಲಿಗೆ 2019 ಇನ್ನೇನು ಕೊನೆಗೊಳ್ಳಲಿದೆ ಎನ್ನುವಾಗಲೇ ಇಬ್ಬರು ಸಂತ ಶ್ರೇಷ್ಠರ ನಿರ್ಗಮನವಾಗಿದೆ. ಈ ವರ್ಷದ ಆರಂಭದಲ್ಲಿ (ಜನವರಿ 21) ನಡೆದಾಡುವ ದೇವರೆಂದೇ ಪರಿಗಣಿತರಾಗಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದರು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವರ್ಷಾಂತ್ಯದಲ್ಲಿ ಹರಿ ಪಾದ ಸೇರಿದ್ದಾರೆ. 2019ನೇ ವರ್ಷ ಧಾರ್ಮಿಕ ಕ್ಷೇತ್ರದ ಅಪ್ರತಿಮರನ್ನಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದ ಮೇರು ವ್ಯಕ್ತಿತ್ವಗಳು, ಉತ್ತಮ ಅಧಿಕಾರಿ ಗಳೆನಿಸಿಕೊಂಡಿದ್ದವರು, ಹೆಸರಾಂತ ಉದ್ಯಮಿಗಳಿಗೂ ಸಾವನ್ನು ತೋರಿದ ವರ್ಷ.

ಧಾರ್ಮಿಕ: ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಮಾತೆ ಮಹಾದೇವಿ. ರಾಜಕಾರಣ: ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ಜಾರ್ಜ್ ಫರ್ನಾಂಡಿಸ್, ಶೀಲಾ ದೀಕ್ಷಿತ್ ಮತ್ತು ರಾಮ್‍ಜೇಠ್ಮಲಾನಿ.
ಸಾರ್ವಜನಿಕ ಸೇವೆ: ಟಿ.ಎನ್.ಶೇಷನ್, ನ್ಯಾ.ಎನ್.ವೆಂಕಟಾಚಲ. ಸಂಗೀತ-ಸಾಹಿತ್ಯ: ಕದ್ರಿ ಗೋಪಾಲನಾಥ್, ಗಿರೀಶ್ ಕಾರ್ನಾಡ್, ಉದ್ಯಮ: ಕಾಫಿ ಕಿಂಗ್ ಕಾಫಿ ಡೇನ ವಿ.ಜಿ.ಸಿದ್ದಾರ್ಥ್.

Translate »