ಟೆಲಿಕಾಂ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ
ಮೈಸೂರು

ಟೆಲಿಕಾಂ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ

December 10, 2018

ಮೈಸೂರು:  ಮೈಸೂರಿನ 44ನೇ ವಾರ್ಡ್ ವ್ಯಾಪ್ತಿಯ ಬೋಗಾದಿ 2ನೇ ಹಂತದ ಟೆಲಿಕಾಂ ಬಡಾವಣೆಯಲ್ಲಿ 17.50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಗ್ರಂಥಾ ಲಯ ಕಟ್ಟಡಕ್ಕೆ ಪಾಲಿಕೆ ಸದಸ್ಯೆ ಸವಿತಾ ಸುರೇಶ್ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ಹೆಚ್ಚು ಜನಸಂಖ್ಯೆ ಇರುವ ಬಡಾವಣೆಯಲ್ಲಿ ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ಗ್ರಂಥಾ ಲಯ ತೆರೆಯಲಾಗುತ್ತಿದ್ದು, ಆದಷ್ಟು ಶೀಘ್ರ ಕಟ್ಟಡ ನಿರ್ಮಿಸ ಲಾಗುವುದು ಎಂದರು. ಈ ಸಂಧರ್ಭದಲ್ಲಿ ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್, ಕಾರ್ಯ ದರ್ಶಿ ಬಸವರಾಜಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ರಾದ ಪುಟ್ಟಹಾಲಯ್ಯ, ಎಂ.ಬಿ.ನಾಗರಾಜ್, ಕೃಷ್ಣೇಗೌಡ, ರವಿಶಂಕರ್, ಎಸ್.ಧರಣಿ ಕುಮಾರ್, ಪ್ರಭಾಕರ್ ಸುಕುಮಾರನ್, ಗೋವಿಂದೇ ಗೌಡ, ಮೈಸೂರು ಮಹಾನಗರ ಪಾಲಿಕೆ ವಲಯ ಕಛೇರಿ 3ರ ಅಭಿವೃದ್ಧಿ ಅಧಿಕಾರಿ ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.

Translate »