ಚಾಮುಂಡೇಶ್ವರಿಗೆ ಸುಮಲತಾ ಪೂಜೆ ಸಲ್ಲಿಕೆ
ಮೈಸೂರು

ಚಾಮುಂಡೇಶ್ವರಿಗೆ ಸುಮಲತಾ ಪೂಜೆ ಸಲ್ಲಿಕೆ

March 21, 2019

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಸುಮಲತಾ ಅಂಬ ರೀಷ್ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದರು.

ನಿನ್ನೆ ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ವಾಪಸ್ಸಾದ ನಂತರ ಇಂದು ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಪುತ್ರ ಅಭಿಷೇಕ್ ಹಾಗೂ ನಿರ್ಮಾ ಪಕ ರಾಕ್‍ಲೈನ್ ವೆಂಕಟೇಶ್ ಅವ ರೊಂದಿಗೆ ಆಗಮಿಸಿದ ಸುಮಲತಾ, ಮೊದ ಲಿಗೆ ಗಣಪತಿಗೆ ಪೂಜೆ, ಬಳಿಕ ಚಾಮುಂಡೇ ಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ದಿವಂಗತ ಅಂಬರೀಷ್ ಅವರು ನನ್ನ ಜೊತೆಯಲ್ಲಿಯೇ ಇದ್ದಾರೆ. ಅವರು ನೆರಳಿನಂತೆ ಹಿಂಬಾಲಿಸಿ, ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಭಾವುಕರಾದರು.

ಹಿಂದಿನ ಚುನಾವಣೆಗಳಲ್ಲಿ ಅಂಬ ರೀಷ್ ಸ್ಪರ್ಧಿಸುವ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಚುನಾ ವಣಾ ಕಾರ್ಯಕ್ಕೆ ಮುಂದಾಗುತ್ತಿದ್ದರು. ನಾನು ಆವಾಗ ಜೊತೆಯಲ್ಲಿರುತ್ತಿದ್ದೆ. ಇಂದು ಅವರಿಲ್ಲ. ನಾನು ಅವರ ಹೆಸರಿನ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಮುಂದಾಗಿದ್ದೇನೆ.

ಚಾಮುಂಡೇಶ್ವರಿ ತಾಯಿಯ ಆಶೀ ರ್ವಾದ ಪಡೆದು, ಹೋಗುತ್ತಿದ್ದೇನೆ. ಮುಂದೆ ಒಳ್ಳೆಯದಾಗುತ್ತದೆ. ನನಗೆ ಯಾವುದೇ ಒತ್ತಡವಿಲ್ಲ. ನನ್ನ ಮಂಡ್ಯ ಜನರಿಗಾಗಿ ಯಾವುದೇ ತೊಂದರೆಯನ್ನು ಎದುರಿ ಸಲು ನಾನು ಸಿದ್ಧ. ಈ ಹೋರಾಟದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

Translate »