ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ
ಮೈಸೂರು

ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ

August 20, 2018

ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಬಿರುಕಾಗಿದೆ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ (ವಾಟ್ಸಾಪ್ ) ವದಂತಿಗಳು ಹರಿಯುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಇದನ್ನು ಸಾರ್ವಜನಿಕರು ನಂಬದಿರುವಂತೆ ಹಾಗೂ ಯಾವುದೇ ಆತಂಕಗಳಿಗೂ ಒಳಗಾಗುವ ಅಗತ್ಯವಿಲ್ಲ ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ಕೆ.ಪಿ.ಮಹದೇವಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಈ ಸೇತುವೆಯನ್ನು ಆ.12 ರಂದು ರಾಷ್ಟ್ರೀಯ ಹೆದ್ದಾರಿ, ಬೆಂಗಳೂರಿನ ಮುಖ್ಯ ಇಂಜಿನಿಯರ್ ಮತ್ತು ಅಧೀಕ್ಷಕ ಇಂಜಿನಿಯರ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂ ದಿಗೆ ಪರಿವೀಕ್ಷಣೆ ಮಾಡಿದ್ದು, ಈ ಸೇತುವೆಯ 3ನೇ ಕಂಬದಲ್ಲಿ ಅಳವಡಿಸಲಾಗಿದ್ದ ಸ್ಟ್ರಿಪ್ ಸೀಲ್ ಎಕ್ಸ್‍ಪ್ಯಾನ್ಷನ್ ಜಾಯಿಂಟ್ ಸಂಕುಚಿತಗೊಂಡಿದೆಯಷ್ಟೆ. ಇದರಿಂದ ಪ್ರಸ್ತುತ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಸಂಕುಚಿತ ಗೊಂಡಿರುವ ಸ್ಟ್ರಿಪ್ ಸೀಲ್ ಎಕ್ಸ್‍ಪ್ಯಾನ್ಷನ್ ಜಾಯಿಂಟ್ ಅನ್ನು ಶೀಘ್ರದಲ್ಲಿಯೇ ಸರಿಪಡಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Translate »