ಬೇಲೂರು: ಬೇಲೂರು ಪುರ ಸಭಾ ವ್ಯಾಪ್ತಿಯ 1ನೇ ವಾರ್ಡ್ ಹೊಸ ನಗರಕ್ಕೆ ಶುಕ್ರವಾರ ಶಾಸಕ ಕೆ.ಎಸ್. ಲಿಂಗೇಶ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಶಾಸಕರಿಗೆ ಸಮಸ್ಯೆಗಳ ಸುರಿಮಳೆಗೈದರು. ಶಾಸಕ ಕೆ.ಎಸ್.ಲಿಂಗೇಶ್, ಪುರಸಭೆ ಅಧ್ಯಕ್ಷೆ ಡಿ.ಆರ್.ಭಾರತಿ ಅರಣ್ಕುಮಾರ್, ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಸದಸ್ಯರು ಹೊಸನಗರಕ್ಕೆ ಭೇಟಿ ನೀಡಿದ ವೇಳೆ, ಸ್ಥಳೀಯ ನಿವಾಸಿಗಳು ಶಾಸಕರಿಗೆ ಏನ್! ಸಾರ್ ನೀವು ಇವತ್ತು ಬಂದಿರಾ? ಕಳೆದ 25 ವರ್ಷದಿಂದ ಹೊಸನಗರ ಸಕಲ ಮೂಲಭೂತ ಸಮಸ್ಯೆಗಳ ಸುಳಿ ಯಲ್ಲಿ ಸಿಲುಕಿದೆ, ಸಂಬಂಧ ಪಟ್ಟ…
ಕೋಗೋಡು ಅಂಗನವಾಡಿ ಮೇಲ್ಛಾವಣಿಯಲ್ಲಿ ಹಾವು ಪ್ರತ್ಯಕ್ಷ
November 23, 2018ಬೇಲೂರು: ತಾಲೂಕಿನ ಕೋಗೋಡು ಗ್ರಾಮದ ಅಂಗನವಾಡಿಯ ಮೇಲ್ಛಾವಣಿಯ ಹಂಚಿನಡಿ ಹಾವು ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ಮಧ್ಯಾಹ್ನ ಮಕ್ಕಳ ಊಟದ ಸಮಯದಲ್ಲಿ ಈ ಘಟನೆ ಸಂಭವಿ ಸಿದ್ದು ಭಯಭೀತರಾದ ಮಕ್ಕಳು ಶಿಕ್ಷಕಿ ಯರು ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಹಸಿವಿನಿಂದ ಊಟಕ್ಕೆ ಕೂತ ಮಕ್ಕಳು ಹಾವಿನ ಭಯಕ್ಕೆ ಹೊರಗೆ ಬಂದು ಅಳುತ್ತಾ ನಿಂತಿರುವುದನ್ನು ಕಂಡು ಗ್ರಾಮದ ತುಂಗರಾಜು, ರುದ್ರೇಶ, ಹಾಲಪ್ಪ ಅಂಗನವಾಡಿಯ ಬಳಿ ಬಂದು ಹಾವನ್ನು ಓಡಿಸಿದ್ದಾರೆ. ದಪ್ಪ ಹಾಗೂ ಉದ್ದವಾಗಿದ್ದ ಕೆರೆ…
ಭಜನಾ ಮಂಡಳಿ ಬೆಳ್ಳಿ ಹಬ್ಬದ ಶೋಭಾಯಾತ್ರೆ
November 19, 2018ಬೇಲೂರು: ಶ್ರೀ ಗಾಯಿತ್ರಿ ಭಜನಾ ಮಂಡಳಿಗೆ 25 ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಶೋಭಾಯಾತ್ರೆ ಮತ್ತು ಶಿವಾನಂದ ಲಹರಿ ಪಾರಾಯಣವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಶ್ರೀ ಗಾಯಿತ್ರಿ ಭಜನಾ ಮಂಡಳಿ ಆರಂಭವಾಗಿ 25 ವರ್ಷದ ಬೆಳ್ಳಿ ಹಬ್ಬ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆ ಸಲಾಯಿತು. ಈ ಸಂದರ್ಭದಲ್ಲಿ ಭಾನು ವಾರ ಬೆಳಿಗ್ಗೆ ಶಿವಾನಂದ ಲಹರಿ ಪಾರಾ ಯಣದೊಂದಿಗೆ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಸುತ್ತ ಮತ್ತು ರಾಜಬೀದಿಯಲ್ಲಿ ಶೋಭಾಯಾತ್ರೆ ನಡೆಸಿದರು. ಭಜನಾ ಮಂಡಳಿ ಮಹಿಳಾ ಸದಸ್ಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ನಂತರ…
ಚದುರಂಗ ಆಟದಿಂದ ಮಕ್ಕಳ ಬುದ್ಧಿ ಸಾಮಥ್ರ್ಯ ಹೆಚ್ಚುತ್ತೆ
November 19, 2018ಬೇಲೂರು: ಚದುರಂಗ ಆಟ ಮಕ್ಕಳ ಬುದ್ಧಿ ಸಾಮಥ್ರ್ಯವನ್ನು ಹೆಚ್ಚಿಸು ವಲ್ಲಿ ಸಹಕಾರಿಯಾಗಿದ್ದು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಹಿರಿಯ ಚೆಸ್ ಆಟಗಾರ ಶಾಂತಾರಾಂ ಹೇಳಿದರು. ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಸಮೀಪ ವೇಲಾಪುರಿ ಚೆಸ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಕ್ರೀಡೆಗಳಂತೆ ಚದುರಂಗ ದೈಹಿಕವಾಗಿ ಆಡುವ ಕ್ರೀಡೆಯಾಗಿರದೆ ತಲೆಗೆ ಮತ್ತು ಬುದ್ಧಿಗೆ ಕೆಲಸಕೊಟ್ಟು ಚಾಣಾಕ್ಷತನದಿಂದ ಆಡುವ ಆಟ ವಾಗಿದೆ. ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಯಲ್ಲಿ ಬೇಲೂರಿನ ಸುಬ್ರಹ್ಮಣ್ಯ ಅವರಿಗೆ ಉತ್ತಮವಾದ ಹೆಸರು…
ರಸ್ತೆ ಅಗಲೀಕರಣಕ್ಕೆ ಶೀಘ್ರದಲ್ಲೇ ಕಟ್ಟಡ ಮಾಲೀಕರ ಸಭೆ
November 18, 2018ಬೇಲೂರು: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲೆ ರಸ್ತೆ ಪಕ್ಕದ ಕಟ್ಟಡಗಳ ಖಾತೆದಾರರ ಸಭೆ ಕರೆದು ಚರ್ಚಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಮುಖ್ಯರಸ್ತೆ ಅಗಲೀಕರಣ, ಮುಖ್ಯರಸ್ತೆಯಲ್ಲಿ ಅಗತ್ಯ ವಿರುವ ಸ್ಥಳದಲ್ಲಿ ಉಬ್ಬುಗಳ ಅಳವಡಿಕೆ ಹಾಗೂ ಒಳ ಚರಂಡಿ ಅವ್ಯವಸ್ಥೆ ಕುರಿತು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಯೋಜನೆ ಸಿದ್ಧಪಡಿಸಲು ನಡೆಸಲಾದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸಿ ಕೇಂದ್ರವಾದ ಬೇಲೂರಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ದಿನನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸುಗಮ…
ಬೇಲೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
November 18, 2018ಬೇಲೂರು: ಪಟ್ಟಣದ ಪುರಸಭೆ ಕಟ್ಟಡ ನೂರು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಶತಮಾನೋತ್ಸವ ಭವನ ನಿರ್ಮಿ ಸಲು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವರಿಗೆ ಮನವಿ ಮಾಡುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ಬೇಲೂರು ಪುರಸಭೆ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿ ಸಿದ ನಂತರ ಮಾತನಾಡಿದ ಅವರು, ಪಟ್ಟಣದ ಪುರಸಭೆಗೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ವನ್ನು ಅದ್ಧೂರಿಯಾಗಿ ನಡೆಸಲು ಮುಂದಾ ಗಿದ್ದು ಇದೇ ಸಂದರ್ಭದಲ್ಲಿ ಅಂದಾಜು 5 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ…
ರಸ್ತೆಗೆ ಹಂಪ್ಸ್ ಅಳವಡಿಸಲು ಆಗ್ರಹಿಸಿ ಹೆದ್ದಾರಿ ತಡೆ
November 16, 2018ಬೇಲೂರು: ಬೇಲೂರು ಪಟ್ಟಣದ 12 ಮತ್ತು 13ನೇ ವಾರ್ಡಿನ ಸಾರ್ವ ಜನಿಕರು ಹಾಗೂ ಇಲ್ಲಿನ ಪ್ರಗತಿಪರ ಸಂಘ ಟನೆಗಳ ಮುಖಂಡರುಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪಟ್ಟಣದ ಜೆ.ಪಿ.ನಗರದ ಮಾರ್ಗ ವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ವಿಷಯ ತಿಳಿದ ಬೇಲೂರು ಪಟ್ಟಣದ 12 ಮತ್ತು 13ನೇ ವಾರ್ಡಿನ ಸಾರ್ವಜನಿಕರು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರ ನೇತೃ ತ್ವದಲ್ಲಿ ಪೆಟ್ರೋಲ್…
ಮಠ ಮಂದಿರಗಳು ರಾಜಕೀಯ ಕೇಂದ್ರಗಳಾಗಬಾರದು: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ
November 14, 2018ಬೇಲೂರು: ಮಠ ಮಂದಿರ ಗಳು ಶ್ರದ್ದಾ ಭಕ್ತಿಯ ಕೇಂದ್ರಗಳಾಗಬೇಕೆ ಹೊರತು ರಾಜಕೀಯ ಕೇಂದ್ರಗಳಾಗ ಬಾರದು ಎಂದು ಸಿರೆಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಹಿತೋಕ್ತಿ ನುಡಿದರು. ಬೇಲೂರು ತಾಲೂಕು ಹನಿಕೆ ವಿ. ಕೊಪ್ಪಲು ಗ್ರಾಮದಲ್ಲಿ ಶ್ರೀಮುರುಘೇಶ್ವರ ಶ್ರೀ ಮಲ್ಲೇಶ್ವರ ಸ್ವಾಮೀಜಿ ದೇವಾಲಯದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಧಾರ್ಮಿಕ ಭಾವನೆ ಗಳಿಗೋಸ್ಕರವಾಗಿ ಪ್ರತಿ ಹಳ್ಳಿಗಳಲ್ಲಿ ದೇವಾಲಯವಿರಬೇಕು. ದೇವಾಲಯಗಳು ಧಾರ್ಮಿಕ ಭಾವನೆ ಮೂಡಿಸುವಂತೆ ಭಕ್ತಿಯ ನೆಲೆಯಂತೆ ಭಕ್ತಿಯ ಮಹಾ…
ನಾಳೆ ಟಿಪ್ಪು ಜಯಂತಿ: ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
November 9, 2018ಬೇಲೂರು: ಟಿಪ್ಪು ಜಯಂತಿ ಯನ್ನು ಜಯಂತಿಯನ್ನಾಗಿ ಪರಿಗಣಿಸ ಬೇಕೇ ಹೊರತು, ರಾಜಕೀಯವಾಗಿ, ಧಾರ್ಮಿಕವಾಗಿ ಬಳಸಿ ಕೊಳ್ಳಬಾರದೆಂದು ಸಿಪಿಐ ಲೋಕೇಶ್ ಸಂಘಟನೆ ಪ್ರಮುಖ ರಲ್ಲಿ ಮನವಿ ಮಾಡಿದರು. ಟಿಪ್ಪು ಜಯಂತಿ ಅಂಗವಾಗಿ ಕರೆಯ ಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಜಯಂತಿಯನ್ನು 3 ವರ್ಷದಿಂದ ಆಚರಿ ಸಲಾಗುತ್ತಿದೆ. ಕಳೆದ 2 ವರ್ಷದಿಂದ ಸರ್ಕಾರವೇ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಜಯಂತಿಯನ್ನು ತಡೆ ಯುವ, ಗೊಂದಲ ಸೃಷ್ಠಿಸುವ ಕೆಲಸವನ್ನು ಯಾರೂ ಮಾಡಬಾರದು. ಜಯಂತಿ ಯನ್ನು ತಹಸೀಲ್ದಾರ್ ಕಚೇರಿಯಲ್ಲಷ್ಟೇ ಆಚರಿಸಲಾಗುತ್ತದೆ. ಜಯಂತಿ ಆಚರ ಣೆಯು…
ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಕೂಡಿ ಬಾರದ ಕಾಲ
October 30, 2018ಬೇಲೂರು: ತಾಲೂಕಿನ ಬಿಕ್ಕೋಡಿ ನಲ್ಲಿ ಕಾರ್ಯಾ ಆರಂಭಿಸಬೇಕಿದ್ದ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಇನ್ನೂ ಕಾಲ ಕೂಡಿಬಾರದಾಗಿದ್ದು, 65 ಗ್ರಾಮ ಗಳಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದೆ. ವೋಟಿಗಾಗಿ ಮನೆ ಬಾಗಿಲಿಗೆ ಬಂದು ಭರವಸೆ ನೀಡುವ ಜನಪ್ರತಿನಿಧಿಗಳು ಈ ಭಾಗದ ವಿದ್ಯುತ್ ಸಮಸ್ಯೆ ನೀಗಿಸಲು ಪ್ರಮಾ ಣಿಕ ಪ್ರಯತ್ನ ಮಾಡುವಲ್ಲಿ ವಿಫಲವಾಗಿ ದ್ದಾರೆ ಎನ್ನುವುದಕ್ಕೆ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಈ ಉಪಕೇಂದ್ರ ಸ್ಥಾಪನೆ ಯೋಜನೆಯೇ ಸಾಕ್ಷಿಯಾಗಿದೆ. ತಾಲೂಕಿನ ಅರೇಹಳ್ಳಿ, ಹಗರೆ, ಹಳೇ ಬೀಡು, ಗೆಂಡೇಹಳ್ಳಿ ಸೇರಿದಂತೆ ಅತೀ…