ಭೇರ್ಯ: ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಆದಷ್ಟು ಬೇಗನೇ ಸಾಲಮನ್ನಾ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸ್ವಯಂ ದೃಢೀಕರಣ ಪತ್ರವನ್ನು ಪಡೆಯಿರಿ ಎಂದು ಹೊಸಅಗ್ರಹಾರ ಹೋಬಳಿಯ ಉಪತಹಶೀಲ್ದಾರ್ ಯಧುಗಿರೀಶ್ ತಿಳಿಸಿದ್ದಾರೆ. ಅವರು ಇಂದು ಭೇರ್ಯ ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ಗೆ ಭೇಟಿ ನೀಡಿ ಬ್ಯಾಂಕ್ನ ವ್ಯವಸ್ಥಾಪಕರ ಜತೆ ಕೃಷಿ ಸಾಲ ಮನ್ನಾ ವಿಚಾರವಾಗಿ ಚರ್ಚಿಸಿದರು. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತರ ಸಾಲಮನ್ನಾ ಯೋಜನೆಯ ಬಗ್ಗೆ ಹಲವಾರು ಗೊಂದಲಗಳಿದ್ದು, ಬ್ಯಾಂಕ್ನ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಲಾಗುತ್ತಿದೆ ಎಂದ ಅವರು, ಕೆಲವೊಂದು ಬ್ಯಾಂಕ್ ಗಳಲ್ಲಿ ರೈತರು…
ಸತ್ಯಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಮೀನನ್ನು ಸ್ಥಳೀಯ ದಲಿತರಿಗೆ ಹಂಚುವಂತೆ ಆಗ್ರಹಿಸಿ ಪ್ರತಿಭಟನೆ
December 21, 2018ಹಾಸನ: ನಗರದ ಸಮೀಪ ಇರುವ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಮೀಸಲಿಟ್ಟ ಜಾಗವನ್ನು ಸ್ಥಳೀಯ ದಲಿತ ರಿಗೆ ನೀಡುವಂತೆ ಆಗ್ರಹಿಸಿ ಗುರುವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. 20 ವರ್ಷದಿಂದ ದಲಿತರಿಗಾಗಿ 5 ಎಕರೆ ಜಾಗವನ್ನು ಮೀಸಲಾಗಿ ಇಡಲಾಗಿತ್ತು. ಎಸಿ ಮೂಲಕ ಸಮನ್ವಯ ಸಮಿತಿ ಕರೆದು ನಮ್ಮ ಮೂಲಕ ಭೂಮಿ ಹಂಚಿಕೆ ಮಾಡು ವುದಾಗಿ ಹೇಳಿದ್ದಾರೆ. ಮೊದಲಿನಿಂದ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿ ಯಲ್ಲಿ ಇರುವ ಮೂಲ ದಲಿತರಿಗೆ ಅವ ಕಾಶ ಮಾಡಿಕೊಟ್ಟು ನಂತರ ಉಳಿದ…
ಪ್ರಿಯಕರನೊಂದಿಗೆ ಲಾಡ್ಜ್ಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು
December 21, 2018ಹಾಸನ: ಪ್ರಿಯಕರನೊಂದಿಗೆ ಲಾಡ್ಜ್ಗೆ ತೆರಳಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ನಿವಾಸಿ ಚಿರಂತಿ(24) ಎಂಬಾಕೆ ಅನುಮಾನಾಸ್ಪದವಾಗಿ ಸಾವಿಗೀಡಾ ದವಳಾಗಿದ್ದು, ಈಕೆ ಹಾಸನದ ತಣ್ಣೀರುಹಳ್ಳ ಬಳಿಯಿರುವ ಬುಲೆಟ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು.ಈಕೆ ಬುಧವಾರ ರಾತ್ರಿ ತನ್ನ ಪ್ರಿಯಕರನಾದ ಆಟೋ ಚಾಲಕ ರಾಜೇಶ್ನೊಂದಿಗೆ ಹಾಸನದ ಕಟ್ಟಿನಕೆರೆ ಮಾರುಕಟ್ಟೆಯ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ಆಕೆ ಕೊಠಡಿಯ ಬಾತ್ರೂಂನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದು, ಆಕೆಯ ಪ್ರಿಯಕರನೇ ಈ…
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮಾಜಿ ಸಚಿವ ಬಿ.ಶಿವರಾಂ ಆಗ್ರಹ
December 21, 2018ಹಾಸನ: ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಕಾಡಾನೆ ಹಾವಳಿಯಿಂದ ಹಾನಿ ಯಾಗಿರುವ ಬೆಳೆಗಳಿಗೆ ಮತ್ತು ದಾಳಿ ಯಿಂದ ಮೃತಗೊಂಡಿರುವ ಕುಟುಂಬ ಗಳಿಗೆ ಪರಿಹಾರ ನೀಡಬೇಕು. ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತ ನಾಡಿದ ಅವರು, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಅರಕಲಗೂಡು, ಮತ್ತು ಬೇಲೂರು ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆ ಸಮಸ್ಯೆ ಹೆಚ್ಚಾಗಿ ರೈತರ ಬೆಳೆಗಳು ಒಂದು ಕಡೆ ನಾಶ ವಾದರೇ, ಇನ್ನೊಂದು…
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಚೆಕ್ ವಿತರಣೆ
December 21, 2018ರಾಮನಾಥಪುರ: ರಾಮನಾಥಪುರ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ 35 ಫಲಾನುಭವಿಗಳಿಗೆ ತಾಪಂ ಅಧ್ಯಕ್ಷೆ ವೀಣಾ 1,500 ರೂ.ಗಳ ಚೆಕ್ ವಿತರಿಸಿದರು. ನಂತರ ಮಾತನಾಡಿದ ಅವರು, ಕಾವೇರಿ ನದಿ ಪ್ರವಾಹದಿಂದ 50ಕ್ಕೂ ಹೆಚ್ಚು ಮನೆಗಳು ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ಅಲ್ಲದೇ ಗ್ರಾಪಂ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿ 6 ಎಕರೆ ಪ್ರದೇಶವನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಗ್ರಾಪಂಗೆ ಸದರಿ ಜಾಗದ ದಾಖಲಾತಿ ಪತ್ರ ಹಸ್ತಾಂತರಿಸಲಾಗಿದೆ ಎಂದರು….
ಶಾಂತಿಯುತ ದತ್ತಮಾಲೆ, ಹನುಮ ಜಯಂತಿ ಆಚರಣೆಗೆ ವೃತ್ತ ನಿರೀಕ್ಷಕ ಲೋಕೇಶ್ ಮನವಿ
December 20, 2018ಬೇಲೂರು: ಪಟ್ಟಣದಲ್ಲಿ ಡಿ.22ರಂದು ದತ್ತಮಾಲೆ ಮತ್ತು ಡಿ.26 ರಂದು ಹನುಮ ಜಯಂತಿ ಹಮ್ಮಿಕೊಂ ಡಿದ್ದು, ಕಾರ್ಯಕ್ರಮವನ್ನು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿ ಸಬೇಕು ಎಂದು ಬೇಲೂರು ವೃತ್ತ ನಿರೀ ಕ್ಷಕ ಲೋಕೇಶ್ ಹೇಳಿದರು. ಪಟ್ಟಣದ ನೆಹರು ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ ಶಾಂತಿಸಭೆ ಯಲ್ಲಿ ಮಾತನಾಡಿದ ಅವರು, ದತ್ತಮಾಲೆ ಅಂಗವಾಗಿ ಸಕಲೇಶಪುರದ ಹಲವೆಡೆ ಯಿಂದ ಬೇಲೂರು ಮಾರ್ಗವಾಗಿ ದತ್ತ ಪೀಠಕ್ಕೆ ತೆರಳುವ ಕಾರಣ ಡಿ.22ರಂದು ಮದ್ಯದ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಪ್ರಚೋದನಾ ಕಾರಿ ಘೋಷಣೆ ಹಾಕದಂತೆ…
ವೈದ್ಯರ ಎಡವಟ್ಟು: ಇಬ್ಬರು ಬಾಣಂತಿಯರು ಅಸ್ವಸ್ಥ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ
December 20, 2018ಹಾಸನ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಂದೇ ರಾತ್ರಿ ದಾಖಲಾದ ಇಬ್ಬರೂ ಬಾಣಂತಿಯರು ವೈದ್ಯರ ಎಡವಟ್ಟಿಗೆ ಅಸ್ವಸ್ಥ ರಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗ ಳೂರಿನ ಆಸ್ಪತ್ರೆಗೆ ವೈದ್ಯರೇ ರವಾನಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಚಿಕ್ಕೆನ ಹಳ್ಳಿ ಗ್ರಾಮದ ಕೀರ್ತಿ (30) ಮತ್ತು ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ಮಹದೇವಮ್ಮ(36) ಎಂಬುವರೇ ವೈದ್ಯರ ಎಡವಟ್ಟಿಗೆ ಸಾವು-ಬದುಕಿನ ನಡುವೇ ಹೋರಾಟ ಮಾಡು ತ್ತಿರುವ ಬಾಣಂತಿಯರು. ಸಂತಾನಹರಣ ಮಾಡಿಸುವ ನಿಟ್ಟಿನಲ್ಲಿ ಚಿಕಿತ್ಸೆಗಾಗಿ ನಗರದ ಜಿಲ್ಲಾ ಸರ್ಕಾರಿ…
2ನೇ ದಿನಕ್ಕೆ ಕಾಲಿಟ್ಟ ಅಂಚೆ ನೌಕರರ ಮುಷ್ಕರ
December 20, 2018ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಅಂಚೇ ಕಚೇರಿಯ ಮುಂಭಾಗ ಮಂಗಳವಾರದಿಂದ ಮುಷ್ಕರ ಆರಂಭಿಸಿರುವ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರು 2ನೇ ದಿನವಾದ ಬುಧವಾರವೂ ಮುಷ್ಕರ ಮುಂದುವರೆಸಿದರು. ಕಮಲೇಶ್ ಚಂದ್ರ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಗೊಳಿಸಬೇಕು. ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸೇವಾ ಭದ್ರತೆಯನ್ನು ಗ್ರಾಮೀಣ ಅಂಚೆ ನೌಕರರಿಗೂ ನೀಡಬೇಕು. ವಾರ್ಷಿಕವಾಗಿ 30 ದಿನಗಳ ರಜೆಯನ್ನು ಒದಗಿಸಿ, ಅದರಲ್ಲಿ 180 ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾಗೊಳಿಸ ಬೇಕು. ನಿವೃತ್ತಿ ಹೊಂದಿದಾಗ 6…
ಸಾಲಮನ್ನಾ: ರೈತರ ದಾಖಲೆ ಸಂಗ್ರಹಿಸಲು ಸೂಚನೆ
December 19, 2018ಹಾಸನ: ರೈತರ ಸಾಲ ಮನ್ನಾ ಸಂಬಂಧಿಸಿದಂತೆ ಮುಂದಿನ 10 ದಿನ ದೊಳಗಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರ ದಾಖಲೆ ಸಂಗ್ರಹಿಸಿ ನಿಗದಿತ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ, ಅಧಿಕಾರಿಗಳು ನಿಗದಿತ ಸಮಯದಲ್ಲಿ ರೈತರ ದಾಖಲೆ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ತಹಶೀಲ್ದಾರರು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು, ಸಾಲ ಮನ್ನಾ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕ್…
ವರ್ಧಮಾನಸಾಗರ ಮಹಾರಾಜರ ಮಂಗಲ ವಿಹಾರ
December 19, 2018ಶ್ರವಣಬೆಳಗೊಳ: ಫೆಬ್ರವರಿ ಯಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ 18 ತಿಂಗಳ ಹಿಂದೆ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗ ಮಿಸಿ ಮಹೋತ್ಸವದ ನೇತೃತ್ವ ವಹಿಸಿದ್ದ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾ ರಾಜರು ಹಾಗೂ ಸಂಘಸ್ಥ 47 ತ್ಯಾಗಿಗಳು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಂಗಲ ವಿಹಾರ ಆರಂಭಿಸಿದರು. ಅಹಿಂಸೆಯನ್ನೇ ಪರಮ ಧರ್ಮವೆಂದು ಆಚರಣೆಯಲ್ಲಿರಿಸಿಕೊಂಡು ಬಂದಿರುವ, ಆಚಾರ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಚಾರ್ಯಶ್ರೀಗಳು ಧಾರ್ಮಿಕ ಪ್ರಭಾವನೆ ಹಾಗೂ ಮೋಕ್ಷ ಸಾಧನೆಗಾಗಿ ಮುನಿದೀಕ್ಷೆ ಸ್ವೀಕರಿಸಿ ಸದಾ ಕಾಲವೂ ಜ್ಞಾನ, ಧ್ಯಾನ, ತಪಸ್ಸುಗಳನ್ನೇ…