ಮೈಸೂರು: ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ಮೂಲಕ 4,77,100 ರೂ. ನೆರವು ನೀಡಿದೆ. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಸಿ.ವೆಂಕಟಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ನೆರವಿನ ಚೆಕ್ ಅನ್ನು ನೀಡಿದರು. ಸಂಘದ ಪದಾಧಿಕಾರಿಗಳು ಮಾತನಾಡಿ ನೆರೆ ಹಾನಿಗೆ ತುತ್ತಾಗಿದ್ದ ಕೊಡಗಿಗೆ ನೆರವು ನೀಡಲು ಪಾಲಿಕೆಯ ಗುತ್ತಿಗೆದಾರರು…
ಮಳೆ ಸಂತ್ರಸ್ತರಿಗೆ ಮಾದರಿ ಮನೆ ನಿರ್ಮಾಣ: ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ
September 25, 2018ಮಡಿಕೇರಿ: ಮಹಾಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಜಿಲ್ಲೆಯ ವಿವಿಧೆಡೆ ಈಗಾಗಲೇ 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನಗಳಿಗಾಗಿ ಜಾಗ ಸಮತಟ್ಟುಗೊಳಿಸುವ ಕೆಲಸ ಮಾಡಲಾಗು ತ್ತಿದೆ. ಮಡಿಕೇರಿ ನಗರದ ಹೊರವಲ ಯದ ಆರ್ಟಿಓ ಕಛೇರಿ ಪಕ್ಕದಲ್ಲೇ 4.65 ಎಕರೆ ಪ್ರದೇಶದಲ್ಲಿ 3 ಮಾದರಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಂಗ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹೆಬಿಟೇಟ್ ಸೆಂಟರ್, ಸೊಸೈಟಿ ಫಾರ್ ಡೆವಲಪ್ಮೆಂಟ್ ಆಫ್…
ಕೊಡಗಿನ ಪ್ರಕೃತಿ ವಿಕೋಪದಿಂದ ವಲಸೆ ಕಾರ್ಮಿಕರು, ಬುಡಕಟ್ಟು ಜನರ ಬದುಕು ಅಯೋಮಯ
September 24, 2018ಮಡಿಕೇರಿ/ಕುಶಾಲನಗರ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ಹಾನಿಯಿಂದ ಬೀದಿಗೆ ಬಿದ್ದ ಸಾವಿರಾರು ವಲಸೆ ಕಾರ್ಮಿಕರು ಹಾಗೂ ಮೂಲ ನಿವಾಸಿಗಳಿಗೆ ಈಗ ಜೀವನ ನಡೆಸುವುದೇ ದುಸ್ತರವಾಗಿದೆ. ಒಂದೆಡೆ ಭೂಕುಸಿತ ಹಾಗೂ ಪ್ರವಾಹದಿಂದ ಎಸ್ಟೇಟ್ ಮಾಲೀಕರು ಕಂಗಾಲಾಗಿದ್ದರೆ ಮತ್ತೊಂದೆಡೆ ದೂರದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ನಿತ್ಯದ ಕೂಳಿಗೂ ಪರಿತಪಿಸುವಂತಾಗಿದೆ. ಜಮೀನು ಕಳೆದುಕೊಂಡ ಮಾಲೀಕರು ತಮ್ಮ ಜಮೀನಿನ ಅಸ್ತಿತ್ವವನ್ನು ಹುಡುಕುತ್ತಿದ್ದರೆ ಮತ್ತೊಂದೆಡೆ ಇಲ್ಲಿನ ಬುಡಕಟ್ಟು ಜನ, ಹಾಗೂ ವಲಸೆ ಕಾರ್ಮಿಕರು ಮುಂದೆ ಏನು ಎಂದು ದಿಕ್ಕು…
ಚೆಸ್; ರಾಜ್ಯಮಟ್ಟಕ್ಕೆ ಧ್ಯಾನ್ ಮೇದಪ್ಪ ಆಯ್ಕೆ
September 24, 2018ಗೋಣಿಕೊಪ್ಪಲು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೂರ್ಗ್ ಪಬ್ಲಿಕ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾ ಗಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕೂರ್ಗ್ ಇನ್ನಿಟ್ಯೂಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಭಾಗದ ಧ್ಯಾನ್ ಮೇದಪ್ಪ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು 4 ಪಂದ್ಯಗಳಲ್ಲಿ 3 ಪಂದ್ಯದಲ್ಲಿ ಜಯಗಳಿಸುವ ಮೂಲಕ ರಾಯಚೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಧ್ಯಾನ್ ಮೇದಪ್ಪ ಪೊನ್ನಂಪೇಟೆ ಭಗವತಿನಗರದ ಬಲ್ಲಡಿಚಂಡ ಸೋಮಯ್ಯ ಮತ್ತು ಕಸ್ತೂರಿ ದಂಪತಿ ಪುತ್ರ.
ಕೊಡಗು ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು
September 24, 2018ಗೋಣಿಕೊಪ್ಪಲು: ಹುಬ್ಬಳ್ಳಿಯಲ್ಲಿ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾ ರ್ಥಿಗಳು ಕೊಡಗಿನ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಗ್ರಹಿಸಿದ್ದ ಅಗತ್ಯ ವಸ್ತು, ಹಣವನ್ನು (ನಿವೃತ್ತ) ಸುಬೇದಾರ್ ಮೇಜರ್ ಬೋಪಣ್ಣ ಅವರ ಮೂಲಕ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು. ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ 130 ಸಂತ್ರಸ್ತ ವಿದ್ಯಾರ್ಥಿಗಳಿಗೆ ಬೇಕಾದ ಪೆನ್, ಪುಸ್ತಕಗಳು, ಕುರ್ಚಿಗಳು, ಶಾಲೆಯಲ್ಲಿ ಅಡುಗೆ ತಯಾರಿಕೆಗೆ ಬೇಕಾದ ಪಾತ್ರೆಗಳನ್ನು ವಿತರಿಸಲಾಯಿತು.
ಕೊಡಗಲ್ಲಿ ಕುಸಿದ ಪ್ರವಾಸೋದ್ಯಮ
September 23, 2018ಮಡಿಕೇರಿ: ಕೇವಲ ಎರಡು ತಿಂಗಳ ಹಿಂದೆ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿತ್ತು. ದಕ್ಷಿಣ ಭಾರತದ ನಂಬರ್ ಒನ್ ಪ್ರವಾಸಿ ತಾಣವಾಗಿ ಕೊಡಗು ಜಿಲ್ಲೆ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿತ್ತು.. ಹೀಗಾಗಿ 2018ರ ಮೊದಲ ಆರು ತಿಂಗಳಲ್ಲೇ ಜಿಲ್ಲೆಗೆ ಬರೋ ಬ್ಬರಿ 18 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಆಗಸ್ಟ್ ತಿಂಗಳಿಂದ ಜಿಲ್ಲೆಯ ಪ್ರವಾಸೋದ್ಯಮದ ಪರಿಸ್ಥಿತಿಯೇ ಬದಲಾ ಗಿದೆ. ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನತ್ತ ಪ್ರವಾಸಿಗರು ಮುಖ ಮಾಡುವ ಧೈರ್ಯ ತೋರುತ್ತಿಲ್ಲ. ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ,…
ಸಂತ್ರಸ್ತರಿಗೆ ಮನೆ, ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ: ಹೆಚ್ಚುವರಿ ಡಿಸಿ ಜಗದೀಶ್
September 23, 2018ಮಡಿಕೇರಿ: ಪ್ರಕೃತಿ ವಿಕೋಪ ದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಡಳಿತದಿಂದ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಈಗಾಗಲೇ ನಾಲ್ಕು ಮಾದರಿಯ ಮನೆ ಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇಡಲಾಗಿದ್ದು, ಸಂತ್ರಸ್ತರಿಗೆ ಒಪ್ಪಿಗೆ ಆಗುವ ಮನೆ ನಿರ್ಮಿ ಸಿಕೊಡಲು ಮುಂದಾಗಲಾಗಿದೆ. ಮನೆ ನಿರ್ಮಾಣ ಸಂಬಂಧ ಈಗಾಗಲೇ ಗುರು ತಿಸಲಾಗಿರುವ ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಗ್ರಾಮಗಳಲ್ಲಿ ಒಟ್ಟು 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣ ಗೊಂಡಿದೆ ಎಂದು ವಿಶೇಷ…
ಮರಣಕೂಪವಾಗಿರುವ ಕೊಡಗಿನ ಚಾರಣ ಪ್ರದೇಶಗಳು
September 23, 2018ಮಡಿಕೇರಿ: ದಕ್ಷಿಣ ಭಾರತದ ಲ್ಲಿಯೇ ಕೊಡಗು ಜಿಲ್ಲೆ ಚಾರಣಯೋಗ್ಯ ಸ್ಥಳವಾಗಿ ಖ್ಯಾತಿ ಪಡೆದಿತ್ತಲ್ಲದೇ, ಇಲ್ಲಿನ ಬೆಟ್ಟಗುಡ್ಡಗಳು ದೇಶವಿದೇಶಗಳ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದ್ದವು. ಆದರೆ ಪ್ರಕೃತಿಯ ಮುನಿಸಿಗೆ ಈ ಚಾರಣ ಯೋಗ್ಯವಾದ ಪ್ರದೇಶಗಳೆಲ್ಲ ಮರಣ ಕೂಪ ಗಳಾಗಿ ಪರಿವರ್ತನೆಯಾಗಿವೆ. ನಿಶಾನೆ ಮೊಟ್ಟೆ, ತಡಿಯಂಡಮೋಳ್, ಮಾಂದಲಪಟ್ಟಿ, ಕೋಟೆಬೆಟ್ಟ, ಪುಪ್ಪಗಿರಿ, ಕುಡಿಯ ಹಾರಿದ ಕಲ್ಲು ಬೆಟ್ಟ, ಕೆಪಟ್ಟಿ ಮಲೆ, ಎರಡನೇ ಮೊಣ್ಣಂಗೇರಿ, ವಣಚಲು, ಮಕ್ಕಳ ಗುಡಿಬೆಟ್ಟ, ಗರ್ಲಾಲೆ, ಸೂರ್ಲಬ್ಬಿ, ಕಾಲೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶ ಗಳಲ್ಲಿದ್ದ ಹತ್ತಾರು ಬೆಟ್ಟಗಳ…
ಕುಶಾಲನಗರ ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ
September 22, 2018ಇಬ್ಬರು ಮಹಿಳೆಯರು ಸೇರಿ 15 ಮಂದಿ ಸೆರೆ, ನ್ಯಾಯಾಂಗ ಬಂಧನ ಮಡಿಕೇರಿ: ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರ ಪೈಕಿ ಇಬ್ಬರು ಮಹಿಳೆಯರು ಕೂಡ ಸೇರಿದ್ದು, ಬಂಧಿ ತರ ವಿರುದ್ಧ ಒಟ್ಟು 9 ಸೆಕ್ಷನ್ಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ ಪಣ್ಣೇಕರ್ ತಿಳಿಸಿದ್ದಾರೆ. ಘಟನೆ ಹಿನ್ನೆಲೆ: ಆಗಸ್ಟ್ 16 ರಂದು ಸಂಭ ವಿಸಿದ…
ಮೈಸೂರು ಕೊಡಗು ಗೌಡ ಸಮಾಜದಿಂದ ಸೆ.30ರಂದು ಸರಳ ಕೈಲ್ ಮುಹೂರ್ತ
September 22, 2018ಮೈಸೂರು: ಮೈಸೂರು ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ವಿಜಯ ನಗರ 2ನೇ ಹಂತದಲ್ಲಿರುವ ಕೊಡವ ಸಮಾಜದ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 9.30ಕ್ಕೆ ಕೈಲ್ ಮುಹೂರ್ತ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು. ಕೊಡಗಿನ ಜನರು ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಿಗೆ ಶೋಕ ಸಾಗರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾ ಗಿದ್ದು, ಕೇವಲ ಆಯುಧ ಪೂಜೆ ಮತ್ತು 2017-18ನೇ ಸಾಲಿನ ಎಸ್ಎಸ್ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೊಡಗು ಗೌಡ ಸಮಾಜದ…