ಮೈಸೂರು, ಏ.19- ಕೊರೊನಾ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್ ಮನವಿ ಮಾಡಿ ದ್ದಾರೆ. ಬಡ್ಡಿ ರಹಿತವಾಗಿ 2021-2022ನೇ ಸಾಲಿನ ಕಂದಾಯ ಪಾವತಿಸಲು 2022ರ ಮಾ.31 ರವರೆಗೂ ಕಾಲಾವಕಾಶವಿದೆ. ಆದರೂ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನ ತೆರಿಗೆ ಪಾವತಿಗೆ ಪ್ರಾಧಿಕಾರದ ಕಚೇರಿಗೆ ಬರುತ್ತಿದ್ದಾರೆ. ತೆರಿಗೆ ಪಾವತಿಗೆ ಇನ್ನೂ ಸಾಕಷ್ಟು ಸಮಯಾ ವಕಾಶವಿದೆ. ಅಲ್ಲದೆ ಶೀಘ್ರ ಆನ್ಲೈನ್ ಸೇವೆಯೂ ಜಾರಿ ಯಾಗುವುದರಿಂದ ತುರ್ತಾಗಿ…
ಮುಡಾದಲ್ಲಿ ಆನ್ಲೈನ್ ಮೂಲಕ ಕಂದಾಯ ಪಾವತಿಗೆ ಏ.1ರಿಂದ ಚಾಲನೆ
March 23, 2021ಮೈಸೂರು,ಮಾ.22(ಆರ್ಕೆ)-ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ) ವ್ಯಾಪ್ತಿಯ ಸ್ವತ್ತುಗಳಿಗೆ ಏಪ್ರಿಲ್ 1ರಿಂದ ಆನ್ಲೈನ್ ಮೂಲಕ ಕಂದಾಯ ಪಾವ ತಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸ್ವತ್ತುಗಳ ಮಾಲೀಕರು ಪದೇ ಪದೇ ಕಚೇರಿಗೆ ಭೇಟಿ ನೀಡುವ ತೊಂದರೆ ತಪ್ಪಿಸಲು ಮಾರ್ಚ್ 20 ರಂದು ನಡೆದ ಸಭೆಯಲ್ಲಿ ಆನ್ಲೈನ್ ಕಂದಾಯ ಪಾವತಿ ಸೌಲಭ್ಯ ಜಾರಿಗೊಳಿಸಲು ನಿರ್ಧರಿಸಲಾಯಿತು ಎಂದರು. ಅದಕ್ಕಾಗಿ ತಂತ್ರಾಂಶ ಸಿದ್ದಪಡಿಸಲು ಸರ್ಕಾರಿ…
ಇಂದು 263 ನಾಗರಿಕ ಸೌಕರ್ಯ ನಿವೇಶನ ಹಂಚಿಕೆ ಕುರಿತು ಸಂವಾದ
December 22, 2020ಮೈಸೂರು, ಡಿ.21-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 263 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಜೊತೆ ಡಿ.22ರಂದು ಬೆಳಗ್ಗೆ 11ಗಂಟೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಮುಡಾ ವತಿಯಿಂದ 262 ನಾಗರಿಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಪ್ರಕಟಣೆ ಹೊರಡಿಸಲು ಉದ್ದೇಶಿಸ ಲಾಗಿದೆ. ಸಿ.ಎ ನಿವೇಶನ ಪಡೆಯಲು ಉದ್ದೇಶಿಸಿರುವ ನೋಂದಾಯಿತ ವಿದ್ಯಾಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಸ್ಪೋಟ್ರ್ಸ್ ಕ್ಲಬ್ಗಳು, ಸಹಕಾರಿ ಕಾಯ್ದೆ 1959-60ರಡಿಯಲ್ಲಿ ನೋಂದಾಯಿತ ಸಂಘ ಸಂಸ್ಥೆಗಳು, ಟ್ರಸ್ಟ್ಗಳು,…
ಮುಡಾದಿಂದ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ
December 9, 2020ಮೈಸೂರು, ಡಿ.8(ಆರ್ಕೆ)-ತಮ್ಮ ಆಸ್ತಿ ರಕ್ಷಣೆಗೆ ಮುಂದಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೈಸೂರಿನ ಟಿ.ಕೆ.ಬಡಾವಣೆಯ ಸಂಖ್ಯೆ 777ರ 40ಘಿ60 ಅಡಿ ಅಳತೆಯ ಸುಮಾರು 1.70 ಕೋಟಿ ರೂ. ಬೆಲೆಬಾಳುವ ನಿವೇ ಶನವನ್ನು ಒತ್ತುವರಿ ಮಾಡಿ ತಂತಿಬೇಲಿ ಅಳವಡಿಸಲಾಗಿತ್ತು. ಅದೇ ರೀತಿ 12 ಕೋಟಿ ರೂ. ಮೌಲ್ಯದ ದಟ್ಟಗಳ್ಳಿ ಸರ್ವೆ ನಂಬರ್ 114 ಮತ್ತು 115ರಲ್ಲಿ ಪ್ರಾಧಿಕಾರಕ್ಕೆ ಸೇರಿದ 50ಘಿ80 ಅಡಿ ಅಳತೆಯ 3 ನಿವೇ ಶನ ಹಾಗೂ ಟಿ.ಕೆ. ಲೇಔಟ್ನ…
ಮುಡಾದಲ್ಲಿ ನಿವೇಶನಗಳ `ಗೋಲ್ಮಾಲ್’: ಎಸಿಬಿ ತನಿಖೆ
November 22, 2020ಮೈಸೂರು, ನ.21(ಆರ್ಕೆ)-ಮುಡಾಗೆ ನಿವೇಶನ ಮರಳಿಸಿದ್ದರೂ, ನಿವೃತ್ತ ಐಎಫ್ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪತ್ನಿಗೆ ಮತ್ತೆ ಸುಮಾರು ಮೂರೂವರೆ ಕೋಟಿ ರೂ. ಬೆಲೆಬಾಳುವ ಸದರಿ ನಿವೇ ಶನದ ಕ್ರಯಪತ್ರ ನೀಡಿರುವುದೂ ಸೇರಿದಂತೆ ಮುಡಾ ದಿಂದ ಮಂಜೂರಾಗಿದ್ದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿರುವ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಐಎಫ್ಎಸ್ ಅಧಿಕಾರಿ…
ಗುಂಪುಮನೆ ಯೋಜನೆ ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಮುಡಾ ಅಧಿಕಾರಿಗಳ ತಂಡ
November 22, 2020ಮೈಸೂರು, ನ.21(ಆರ್ಕೆ)-ಸೂರಿಲ್ಲದವರಿಗೆ ಕೈಗೆಟಕುವ ಬೆಲೆ ಯಲ್ಲಿ ಸೂರು ಕಲ್ಪಿಸಲು ಮುಡಾ ನಿರ್ಧರಿಸಿದೆ. ಈ ಯೋಜನೆ ಅನು ಷ್ಠಾನಗೊಳಿಸಲು ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಸೋಮವಾರ (ನ.23) ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿ ಬಿಡಿಎ ವತಿಯಿಂದ ನಿರ್ಮಿಸಿರುವ ಹೈರೈಸ್ ಗುಂಪು ಮನೆಗಳ ಸಮುಚ್ಛಯ ಕಟ್ಟಡಗಳನ್ನು ಖುದ್ದು ಅಧ್ಯಯನ ಮಾಡಲಿದೆ ಎಂದರು. ಮೈಸೂರಿನ ರಿಂಗ್ರಸ್ತೆ ಒಳಗೆ ವಿವಿಧ ಬಡಾವಣೆಗಳಲ್ಲಿರುವ ಮುಡಾಗೆ ಸೇರಿದ ಜಾಗಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ವಿವಿಧ ಅಳತೆಯ…
ಮೈಸೂರಿನ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಸುರಿದರೆ ಕಠಿಣ ಕ್ರಮ
November 22, 2020ಮೈಸೂರು, ನ.21(ಆರ್ಕೆ)- ಸ್ವಚ್ಛ ನಗರ ಖ್ಯಾತಿ ಪಡೆದಿರುವ ಮೈಸೂರಿನ ರಿಂಗ್ ರಸ್ತೆ ಬದಿ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿದು ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಎಚ್ಚರಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಿಂಗ್ ರಸ್ತೆ ಬದಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ (ಡಬ್ರಿಸ್)ಗಳನ್ನು ಸುರಿಯುತ್ತಿರು ವುದರಿಂದ ಮೈಸೂರಿನ ಸೌಂದ ರ್ಯದ ಜೊತೆಗೆ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆಯಾದ್ಧರಿಂದ ನಾಗರಿ ಕರು ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು…
ಸಿಐಟಿಬಿಯಿಂದ ನಿರ್ಮಾಣವಾದ 12,145 ಮನೆ ಬಿಟ್ಟರೆ ವಸತಿ ಯೋಜನೆಗೆ ಮುಡಾ ಎಳ್ಳು-ನೀರು
March 4, 2020ಆಗ ನಿರ್ಮಿಸಿದ 208 ಮನೆಗಳು ಯಾರಿಗೂ ಮಂಜೂರಾಗಲಿಲ್ಲ, 441 ರಲ್ಲಿ ಯಾರೂ ವಾಸವಾಗಿಲ್ಲ ಮೈಸೂರು, ಮಾ. 3- ನಿರಾಶ್ರಿತರಿಗೆ ಸೂರು ಒದಗಿಸಿಕೊಡುವ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಅIಖಿಃ)ಯ ಜನಪರ ಕಾರ್ಯಕ್ರಮ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ಮುಂದುವರಿಯಲಿಲ್ಲ. ಮೈಸೂರು ಪ್ರಾಂತ್ಯವನ್ನಾಳಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಲ್ಪನೆ “ಏನೂ ಇಲ್ಲದವರಿಗೆ ಏನನ್ನಾದರೂ ಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬುದಾಗಿತ್ತು”. ಅಂದಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ ಉದ್ದೇಶವೇ ಜನಪರವಾಗಿದ್ದವು. ಆದ್ದರಿಂದಲೇ ಸೂರಿಲ್ಲದ ವರಿಗೆ…
ಮುಡಾ ಅಧ್ಯಕ್ಷಗಾದಿ ಮೇಲೆ ಮೈಸೂರು ಬಿಜೆಪಿ ಮುಖಂಡರ ಕಣ್ಣು
December 16, 2019ಮೈಸೂರು. ಡಿ.15- ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆಯಲ್ಲಿ ಬಿಜೆಪಿ 12 ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗುತ್ತಿದ್ದಂ ತೆಯೇ ಖಾಲಿ ಇರುವ ವಿವಿಧ ನಿಗಮ- ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಚಟು ವಟಿಕೆ ಆರಂಭವಾಗಿದೆ. ಗೆಲುವು ಸಾಧಿಸಿರುವ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ 12 ಶಾಸಕರು ಹಾಗೂ ಸೋಲುಂಡಿರುವವರಿಗೂ ಭರವಸೆಯಂತೆ ಅಧಿಕಾರ ಹಂಚಿಕೆ ಮಾಡುವತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ…
ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’
November 25, 2019ಮೈಸೂರು,ನ.24(ಆರ್ಕೆ)- ನಗರದ ಲ್ಲೊಂದು ಸ್ವಂತ ಮನೆ ಇರಬೇಕೆಂಬ ಕನ ಸನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿವೇಶನ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಬಹಳಷ್ಟು ಮಂದಿ ನಿವೇಶನ ಮಾಲೀಕರು ತಮ್ಮದೇ ಕಾರಣಗಳಿಗಾಗಿ ಮನೆಯನ್ನು ನಿರ್ಮಿಸದೇ ನಿವೇಶನವನ್ನು ವರ್ಷಗಳ ಕಾಲ ಖಾಲಿಯಾ ಗಿಯೇ ಇಟ್ಟಿರುತ್ತಾರೆ. ಇಂತಹ ಖಾಲಿ ನಿವೇ ಶನಗಳಲ್ಲಿ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದು ಹಾವು ಮತ್ತಿತರ ವಿಷ ಜಂತುಗಳ ಆವಾಸಕ್ಕೆ ಅವಕಾಶವಾಗಿರು ತ್ತದೆ. ಇಲ್ಲವೇ, ಖಾಲಿ ನಿವೇಶನ ಆ ಭಾಗದ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತದೆ. ಇಂತಹ ದೃಶ್ಯಗಳನ್ನು ಮೈಸೂರಿನಲ್ಲಿಯೂ…