ಮೈಸೂರು,ಅ.26-ಮುಡಾ ನಿವೇಶನ ಕ್ಕಾಗಿ ಅರ್ಜಿ ಹಾಕಿ ದಶಕಗಳಿಂದ ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ. ಆದರೆ ಮಹಿಳೆಯೊಬ್ಬರಿಗೆ 2 ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಮುಡಾ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ನಿವೇಶನ ಆಕಾಂಕ್ಷಿಗಳಿಗೆ ಮಹಾದ್ರೋಹವೆಸಗಿದೆ. ಮುಡಾದಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಮತ್ತೊಂದು ಪುಷ್ಟಿ ದೊರೆತಂತಾಗಿದೆ. ಕುವೆಂಪುನಗರದ ನಿವಾಸಿ ರಾಜೇಶ್ವರಿ ಅವರು 2 ಮುಡಾ ನಿವೇಶನಗಳ ಮಾಲೀಕ ರಾಗಿದ್ದಾರೆ. ನೂತನವಾಗಿ ಅಕ್ಕಪಕ್ಕದಲ್ಲೇ ನಿರ್ಮಿಸಿರುವ ಶಾಂತವೇರಿ ಗೋಪಾಲಗೌಡ ನಗರದಲ್ಲಿ 20×30 ಹಾಗೂ ಲಾಲ್…
ಮೈಸೂರಿನ ನಾಲ್ಕು ಕಡೆ 2000 ಗುಂಪು ಮನೆ ನಿರ್ಮಿಸಲು ಮುಡಾ ತಯಾರಿ
June 12, 2019ಮೈಸೂರು: ನಿರಾಶ್ರಿತರಿಗೆ ಕೈಗೆಟಕುವ ದರದಲ್ಲಿ ಆಶ್ರಯ ಒದಗಿಸಲು ಮುಂದಾ ಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದಕ್ಕಾಗಿ ಗುಂಪು ಮನೆ ಯೋಜನೆ ಜಾರಿಗೊಳಿಸಲು ತಯಾರಿ ನಡೆಸಿದೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 20-25 ವರ್ಷ ಗಳಿಂದ ಸಾವಿರಾರು ಮಂದಿ ಕಾಯುತ್ತಿದ್ದರೂ, ವಸತಿ ಬಡಾವಣೆ ನಿರ್ಮಿಸಲು ಭೂಮಿ ಅಲಭ್ಯತೆ ಯಿಂದಾಗಿ ಸಾಧ್ಯವಾಗುತ್ತಿಲ್ಲವಾದ್ದರಿಂದ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಮುಡಾ ಜಾಗವನ್ನೇ ಬಳಸಿಕೊಂಡು ಬಹುಮಹಡಿ ಕಟ್ಟಡ ನಿರ್ಮಿಸಿ ಅಲ್ಲಿ ಸುಮಾರು 2000 ಮನೆಗಳನ್ನು ಕೈಗೆಟಕುವ ದರ (ಓo Pಡಿoಜಿiಣ-ಓo ಐoss)ದಲ್ಲಿ ಪ್ರಾಧಿಕಾರಕ್ಕೂ…
84 ಸಿಎ ನಿವೇಶನ ಹಂಚಿಕೆಗೆ ಉಪ ಸಮಿತಿ ರಚಿಸಲು ನಿರ್ಧಾರ
May 21, 2019ಮೈಸೂರು: ಸಿದ್ಧವಿರುವ 84 ನಾಗರಿಕ ಸೌಲಭ್ಯ ನಿವೇಶನ(ಅಂ siಣes)ಗಳ ಹಂಚಿಕೆಗೆ ಸಂಬಂಧಿಸಿದಂತೆ ಉಪ ಸಮಿತಿ ರಚಿಸಲು ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ನಿರ್ಧರಿಸಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೆಚ್ಎಸ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದ ನಂತರ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಸಮಿತಿಯಲ್ಲಿ ಯಾವ ಯಾವ ಸದಸ್ಯರಿ ರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಮುಡಾ ಅಧ್ಯಕ್ಷರಿಗೇ ನೀಡಲಾಗಿದ್ದು, ಆದಷ್ಟು ಬೇಗ ಉಪ…
ಮುಡಾ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ಸ್ವೀಕಾರ
March 8, 2019ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ವಹಿಸಿಕೊಂಡರು. ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮುಡಾ ಆಯುಕ್ತ ಕಾಂತರಾಜ್ ಅವರಿಂದ ಹೂ ಗುಚ್ಛ ಸ್ವೀಕರಿಸಿ, ಕಡತಗಳಿಗೆ ಸಹಿ ಹಾಕುವ ಮೂಲಕ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರ ಸಹಕಾರದಿಂದ ಉನ್ನತ ಹುದ್ದೆ ದೊರೆತಿದ್ದು, ಅವರಿಗೆ ಅಭಾರಿಯಾಗಿರುತ್ತೇನೆ. ಅಧಿಕಾರಿಗಳು ಹಾಗೂ ಸದಸ್ಯರ…
ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್
March 3, 2019ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 2019-20ನೇ ಸಾಲಿಗೆ 2.6 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಪ್ರಸಕ್ತ ಸಾಲಿನಲ್ಲಿ 40, 587 ಲಕ್ಷ ರೂ ಆದಾಯ ನಿರೀಕ್ಷಿಸಿ, 40,320.97 ಲಕ್ಷ ರೂ. ಗಳ ವೆಚ್ಚ ಭರಿಸಲು ಉದ್ದೇಶಿಸಿರುವ ಪ್ರಾಧಿ ಕಾರವು 266.03 ಲಕ್ಷ ರೂ.ಗಳ ಉಳಿ ತಾಯದ ಆಯ-ವ್ಯಯವನ್ನು ಮಂಡಿಸಿದೆ. ಮುಡಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಆಯುಕ್ತ ಪಿ.ಎಸ್. ಕಾಂತರಾಜು ಅವರು 2019-20ನೇ ಸಾಲಿನ ಆಯ-ವ್ಯಯವನ್ನು…
ಮೈಸೂರು ನಗರದಲ್ಲಿ ಮುಡಾದ 2500 ಬಿಡಿ ನಿವೇಶನ ಲಭ್ಯ
January 13, 2019ಮೈಸೂರು: ಬಡಾವಣೆ ನಿರ್ಮಿಸಲು ಅಗತ್ಯ ವಿರುವ ಭೂಮಿ ಖರೀದಿಸಲು ರೈತರೊಂದಿಗೆ ಬೆಲೆಯಲ್ಲಿ ಚೌಕಾಸಿ ಮಾಡುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವುದೀಗ ಮತ್ತಷ್ಟು ಸುಲಭ ಸಾಧ್ಯವಾಗಿದೆ. ಭೂಮಿ ಮೇಲೆ ಹಣ ಹೂಡಿಕೆ ಮಾಡಿ ಅಭಿವೃದ್ಧಿಗೊಳಿಸಲು ಮಾಡಿದ ವೆಚ್ಚ ಭರಿಸಲು ಅರ್ಜಿದಾರರಿಗೆ ಹಂಚಿಕೆ ಮಾಡಿದ ನಿವೇಶನಗಳ ಮೇಲೆ ಹಾಕಬೇಕಾಗುತ್ತದೆ. ಅದಕ್ಕಾಗಿ ಮುಡಾ 40:60 ಅನುಪಾತದಲ್ಲಿ ರೈತರಿಂದ ಭೂ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆಯಾದರೂ, 50:50ರ ಅನುಪಾತಕ್ಕೆ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ. ಅದರಿಂದಾಗಿ ಹೊಸ ಬಡಾವಣೆ ನಿರ್ಮಿಸುವುದು ಪ್ರಾಧಿಕಾರಕ್ಕೆ…
ಕುರುಬಾರಹಳ್ಳಿ ಸರ್ವೇ ನಂ.4ರ ಆಸ್ತಿ ಮಾಲೀಕರಿಂದ ಪ್ರತಿಭಟನೆಯ ಎಚ್ಚರಿಕೆ
December 12, 2018ಮೈಸೂರು: ಮುಡಾ ಬಡಾವಣೆಗಳಾದ ಸಿದ್ದಾರ್ಥ ಬಡಾವಣೆ, ಕೆ.ಸಿ.ನಗರ, ಜೆ.ಸಿ.ನಗರ ಸಮಸ್ಯೆ ನಿವಾರಿಸುವುದಕ್ಕೆ ಮುಂದಾಗಿರುವಂತೆ ಕುರುಬಾರಹಳ್ಳಿ ಸರ್ವೇ ನಂ. 4ರ ಇನ್ನಿತರೆ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಜಂಕ್ಷನ್ನಲ್ಲಿ ರಸ್ತೆ ತಡೆ ನಡೆಸಲು ಚಾಮುಂಡಿಬೆಟ್ಟ ತಪ್ಪಲಿನ ಭೂ ಮಾಲೀಕರ ಸಂಘದ ಸದಸ್ಯರು ನಿರ್ಧರಿಸಿದ್ದಾರೆ. ಜಿಲ್ಲಾಡಳಿತ, ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಹಾಗೂ ಚೌಡಹಳ್ಳಿ ಸರ್ವೇ ನಂ.39ರ ವ್ಯಾಪ್ತಿಯ ಪ್ರದೇಶವನ್ನು ಬಿ-ಖರಾಬು ಎಂದು ಘೋಷಿಸಿ, ದಾಖಲೆಗಳ ವಿಲೇವಾರಿಯನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ…
ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ
November 14, 2018ಮೈಸೂರು: ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮಗೊಳಿಸಲು ಸಕಲ ಸಲಕರಣೆಗಳು, ಗ್ಯಾಂಗ್ಮನ್ಗಳೊಂದಿಗೆ ವೀರಾವೇಶದಿಂದ ತೆರಳಿದ್ದ ಮುಡಾ ಮತ್ತು ಪಾಲಿಕೆ ಅಧಿಕಾರಿಗಳು, ಮಾಲೀಕ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಕಾರಣಕ್ಕೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ ಪ್ರಸಂಗ ಮೈಸೂರಿನ ರಾಜೀವ್ನಗರ 2ನೇ ಹಂತದ ದೇವನೂರು ಕೆರೆ ಸಮೀಪ ಮಂಗಳವಾರ ಬೆಳಿಗ್ಗೆ ನಡೆಯಿತು. ಪೂರ್ವ ಯೋಜನೆ, ಸರಿಯಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಿಕೊಳ್ಳದೇ ಕಟ್ಟಡ ನೆಲಸಮ ಮಾಡಲು ಹೋದ ಅಧಿಕಾರಿಗಳು, ಮಾಲೀಕ ಸುಮಾರು 20 ಅಡಿ ಎತ್ತರದ…
ಮುಡಾ 89 ಸಿಎ ನಿವೇಶನಗಳಿಗೆ ಶೀಘ್ರ ಅರ್ಜಿ ಆಹ್ವಾನ
November 9, 2018ಮೈಸೂರು: ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯ ವಿರುವ 89 ನಾಗರಿಕ ಸೌಲಭ್ಯ(ಸಿಎ) ನಿವೇಶನಗಳ ಹಂಚಿಕೆಗೆ ಶೀಘ್ರ ಅರ್ಜಿ ಆಹ್ವಾನಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಪಿ.ಎಸ್.ಕಾಂತರಾಜು ತಿಳಿಸಿದ್ದಾರೆ. ಮೈಸೂರಿನ ವಿಜಯನಗರ 4ನೇ ಹಂತ, ಶ್ರೀರಾಂಪುರ, ದಟ್ಟಗಳ್ಳಿ, ದೇವನೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆಗೆ ಲಭ್ಯವಿರುವ 89 ನಿವೇಶನ ಗಳನ್ನು ಪಟ್ಟಿ ಮಾಡ ಲಾಗಿದೆ. ಈ ನಿವೇಶನ ಗಳ ಹಂಚಿಕೆಗೆಂದೇ ಪ್ರತ್ಯೇಕ ಉಪ ಸಮಿತಿ ರಚಿಸಿದ ನಂತರ, ಸಮಿತಿ ವರದಿಯಂತೆ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ಹೊಸದಾಗಿ…
ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಚಿಂತನೆ
October 25, 2018ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿಂತನೆ ನಡೆಸಿದೆ. ಮೈಸೂರಿನ ಹಂಚ್ಯಾ-ಸಾತಗಳ್ಳಿ ಬಳಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಕಾಲೇಜು ಹಿಂಭಾಗ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು 20 ಎಕರೆ ಭೂಮಿ ಗುರ್ತಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ (ವಿಶ್ವದರ್ಜೆ) ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತಮಗೆ ಭೂಮಿ ಮಂಜೂರು ಮಾಡುವಂತೆ ಕ್ರಿಕೆಟ್ ಅಸೋಸಿಯೇಷನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವನ್ನು ಕೋರಿಕೊಂಡಿತ್ತು. ಸಂಘದ ಪ್ರಸ್ತಾವನೆ ಪರಿಶೀಲಿಸಿದ ಮುಡಾ ಅಧಿಕಾರಿಗಳು ಪ್ರಾಧಿಕಾರದ ಸಭೆ…