ಕ್ರೀಡಾ ಪ್ರಾಧಿಕಾರದ ಹಣದಿಂದ ಬಹುಮಾನದ ಮೊತ್ತ ವಿತರಣೆಗೆ ನಿರ್ಧಾರ ಎರಡು ತಿಂಗಳಿಂದ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಕ್ರೀಡಾ ಇಲಾಖೆ ಮೈಸೂರು, ಡಿ.12(ಎಂಟಿವೈ)- ದಸರಾ ಕ್ರೀಡಾಕೂಟ ಮುಗಿದು ಎರಡು ತಿಂಗಳಾದರೂ ವಿಜೇತರಿಗೆ ನಗದು ಬಹುಮಾನ ನೀಡದೆ ನಿರ್ಲಕ್ಷಿಸಿದ್ದ ಯುವ ಸಬಲೀಕರಣ ಕ್ರೀಡಾ ಇಲಾಖೆ `ಮೈಸೂರು ಮಿತ್ರ’ನಲ್ಲಿ ಪ್ರಕಟವಾದ ಸುದ್ದಿಯಿಂದ ಕೊನೆಗೂ ಎಚ್ಚೆತ್ತುಕೊಂಡು, ಪರ್ಯಾಯ ಮಾರ್ಗದಲ್ಲಿ ಬಹುಮಾನದ ಮೊತ್ತ ವಿತರಿಸಲು ಮುಂದಾಗಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ.1ರಿಂದ 6ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂ ಗಣ ಸೇರಿದಂತೆ ವಿವಿಧೆಡೆ…
ರಂಗಾಯಣ ನಿರ್ದೇಶಕರಿಲ್ಲದಿದ್ದರೂ `ಬಹುರೂಪಿ’ಗೆ ಭರ್ಜರಿ ತಯಾರಿ
December 13, 2019ನಾಟಕ ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿರುವ 60 ತಂಡಗಳು 2 ಕನ್ನಡ ಸಿನಿಮಾ ಸೇರಿದಂತೆ 16 ಚಲನಚಿತ್ರಗಳ ಪ್ರದರ್ಶನ ಮೈಸೂರು: ರಂಗಾಯಣದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ `ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ರಂಗಾ ಯಣ ನಿರ್ದೇಶಕರ ಅನುಪಸ್ಥಿತಿ ನಡುವೆಯೂ ಭರ್ಜರಿ ತಯಾರಿ ಮಾಡಿ ಕೊಳ್ಳಲಾಗು ತ್ತಿದೆ. ನಿರ್ದೇಶಕರು ನೇಮಕಗೊಂಡ ನಂತರ ವಷ್ಟೇ ಪ್ರದರ್ಶನಗೊಳ್ಳಲಿರುವ ನಾಟಕ ಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಬಿಜೆಪಿ ಸರ್ಕಾರ ಆರಂಭದಲ್ಲೇ ಮೈಸೂರು, ಧಾರವಾಡ, ಕಲಬುರಗಿ, ಶಿವಮೊಗ್ಗ ರಂಗಾ ಯಣದ ನಿರ್ದೇಶಕರನ್ನು…
ಕ್ಯಾನ್ಸರ್ಗೆ ಬದಲಾದ ಜೀವನ ಶೈಲಿಯೂ ಕಾರಣ
December 13, 2019ಮೈಸೂರು, ಡಿ.12(ಪಿಎಂ)- ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ಮಾರಕ ಕಾಯಿಲೆಗಳ ಹೆಚ್ಚಳಕ್ಕೆ ಬದಲಾಗುತ್ತಿರುವ ಜೀವನ ಶೈಲಿಯೂ ಪ್ರಮುಖ ಕಾರಣ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸ ಗಂಗೋ ತ್ರಿಯ ವಿಜ್ಞಾನ ಭವನದಲ್ಲಿ ವಿವಿಯ ಎನ್ಎಸ್ಎಸ್ ಘಟಕ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂ ರಿನ ಯೆನೆಪೋಯ ವಿವಿ ಸಂಯುಕ್ತಾಶ್ರಯ ದಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳ ಎನ್ಎಸ್ಎಸ್ ಅಧಿಕಾರಿಗಳಿಗೆ ಗುರುವಾರ…
ಔಷಧಗಳ ಅಡ್ಡ ಪರಿಣಾಮ ನಿವಾರಣೆಗೆ ಹೆಚ್ಚು ಸಂಶೋಧನೆ ಅಗತ್ಯ
December 13, 2019ಮೈಸೂರು, ಡಿ.12(ಪಿಎಂ)- ಔಷಧ ಗಳ ಅಡ್ಡ ಪರಿಣಾಮ ನಿವಾರಣೆ ಕುರಿತಂತೆ ಹೆಚ್ಚು ಸಂಶೋಧನೆಗಳು ಅಗತ್ಯ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ.ಸುರೀಂದರ್ ಸಿಂಗ್ ಹೇಳಿದರು. ಮೈಸೂರಿನ ಬನ್ನಿಮಂಟಪದ ಜೆಎಸ್ಎಸ್ ಔಷಧ ವಿಜ್ಞಾನ ಮಹಾ ವಿದ್ಯಾಲಯದ ಶ್ರೀರಾಜೇಂದ್ರ ಸಭಾಂಗಣ ದಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ಮೈಸೂರು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 58ನೇ ರಾಷ್ಟ್ರೀಯ ಔಷಧ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಒಂದು ಅನಾರೋಗ್ಯ ಸಮಸ್ಯೆ ನಿವಾರಿ ಸಲು…
ಇಲ್ಲಿ ಸಾಗಿದರೆ ಕೊಳಚೆ ನೀರಿನ ಮಹಾಮಜ್ಜನ!?
December 13, 2019ಮೈಸೂರು,ಡಿ.12(ವೈಡಿಎಸ್)-ಒಂದೆಡೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ ಗುಂಡಿ ಬಿದ್ದಿದ್ದರೆ, ಮತ್ತೊಂದೆಡೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರು ಎಚ್ಚರ ತಪ್ಪಿ ದರೆ ಕೊಳಚೆ ನೀರಿನ ಮಜ್ಜನ ಗ್ಯಾರಂಟಿ. ಅಶೋಕಪುರಂನಿಂದ ರಾಮಕೃಷ್ಣಪರಮಹಂಸ ವೃತ್ತ ಸಂಪರ್ಕಿಸುವ ಉದಯರವಿ ಮುಖ್ಯರಸ್ತೆ ಅಶೋಕ ಪುರಂನಿಂದ ಜಯನಗರ ಇಸ್ಕಾನ್ ಟೆಂಪಲ್ವರೆಗೆ ರಸ್ತೆ ಗುಂಡಿಗಳಿಂದ ಕೂಡಿದೆ. ಜತೆಗೆ ಅಶೋಕಪುರಂನ ಪೌರಕಾರ್ಮಿಕರ ಕಾಲೋನಿಯ ಚರಂಡಿ ನೀರು ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ರಸ್ತೆ ಮೇಲೆಯೇ ಹರಿಯು ತ್ತಿರುವುದರಿಂದ ವಾಹನ ಸವಾರರು ಕೊಳಚೆ ನೀರಿನ…
ಮೈಸೂರು ಸೇರಿ ರಾಜ್ಯದಲ್ಲಿ 50 ಜೈನ ಧಾರ್ಮಿಕ ಪಾಠಶಾಲೆ ಸ್ಥಾಪನೆ
December 13, 2019ಮೈಸೂರು, ಡಿ.12(ಪಿಎಂ)- ಜೈನ ಧರ್ಮದ ಶಿಕ್ಷಣ ನೀಡುವ ಉದ್ದೇಶ ದಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ 50 ಧಾರ್ಮಿಕ ಪಾಠಶಾಲೆ ಗಳನ್ನು ತೆರೆಯಲು ಯೋಜನೆ ರೂಪಿಸಿ ರುವುದಾಗಿ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕೋಟೆ ಶ್ರೀಶಾಂತಿನಾಥ ಬಸದಿಯಲ್ಲಿ ಶ್ರೀಗಳ 50ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯ ಕ್ರಮದಲ್ಲಿ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ದೀಕ್ಷಾ ಸ್ವೀಕಾರದ…
ಜೆಪಿನಗರದಲ್ಲಿ ಶ್ರೀಕಂಠೇಶ್ವರ ಎಲೈಟ್ ಮಾಲ್ ಆರಂಭ
December 13, 2019ಮೈಸೂರು, ಡಿ.12- ಮೈಸೂರಿನ ಜೆ.ಪಿ.ನಗರದಲ್ಲಿ ನೂತನ ವಾಗಿ ಪ್ರಾರಂಭವಾಗಿರುವ ಶ್ರೀಕಂಠೇಶ್ವರ ಫರ್ನಿಚರ್ ಎಲೈಟ್ ಮಾಲ್ ಶಾಖೆಯನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾ ಟಿಸಿದರು. ನಂತರ ಮಾತನಾಡಿದ ಅವರು, ಶ್ರೀಕಂಠೇಶ್ವರ ಟಿವಿ ಸೆಂಟರ್ ಮೂಲಕ 25 ವರ್ಷಗಳ ಹಿಂದೆ ಸಣ್ಣ ಉದ್ಯಮ ಆರಂಭಿಸಿದ ಉಮೇಶ್ ಶರ್ಮಾ, ಇಂದು ಸಹಸ್ರಾರು ಮಂದಿಗೆ ಜೀವನೋಪಾಯದ ಬೆಳಕಾಗಿ ನಿಂತಿದ್ದಾರೆ. ಅಲ್ಲದೇ ಮುಂದಿನ ದಿನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ವ್ಯವಹರಿಸಲು ಎಲ್ಲ ತರಹದ ನೆರವನ್ನು ಬಳಸಿಕೊಳ್ಳಲು ಮುಂದಾಗಬೇಕು, ಮೇಕ್ ಇನ್ ಇಂಡಿಯಾ ಕಾಯಕಲ್ಪಕ್ಕೆ ಶ್ರೀಕಂಠೇಶ್ವರ ಟಿವಿ…
ನಿಧಾನಗತಿ ನ್ಯಾಯದಾನ: ಪ್ರೊ. ಹೆಚ್.ಎಂ.ರಾಜಶೇಖರ್ ವಿಷಾದ
December 13, 2019ಮೈಸೂರು, ಡಿ.12(ಎಂಟಿವೈ)- ವಿವಿಧ ನ್ಯಾಯಾಲಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಶೇ.80ರಷ್ಟು ಬಾಕಿ ಉಳಿದಿವೆ ಎಂದು ರಾಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಹೆಚ್.ಎಂ. ರಾಜಶೇಖರ ವಿಷಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗವು ಗುರುವಾರ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ `ಭಾರತದಲ್ಲಿ ಮಾನವ ಹಕ್ಕುಗಳ ಸಮಸ್ಯೆ ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾ ಟಿಸಿದ ಅವರು, ಎರಡನೇ ಮಹಾಯುದ್ಧ ದಲ್ಲಿ 16 ದಶಲಕ್ಷ ಸೈನಿಕರು ಹಾಗೂ 18 ದಶಲಕ್ಷ…
ಡಿ.14ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮೀನುಗಾರರ ಬೃಹತ್ ಸಮಾವೇಶ
December 13, 2019ಮೈಸೂರು,ಡಿ.12(ಪಿಎಂ)- ರಾಷ್ಟ್ರೀಯ ಮೀನುಗಾರರ ಸಂಘ, ಕರ್ನಾಟಕ ಘಟಕದ ವತಿಯಿಂದ 39 ಪರ್ಯಾಯ ಪದಗಳಿಂದ ಗುರುತಿಸಲ್ಪಡುವ ಮೀನುಗಾರರ ಸಮುದಾಯ ಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ವಿಕಾಸಕ್ಕಾಗಿ ಡಿ.14 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನಿ ವಿಕಾಸ ಸಮಾವೇಶ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷೆ ಪ್ರೊ.ವಸಂತಮ್ಮ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಅಂದು ಬೆಳಿಗ್ಗೆ 10ಕ್ಕೆ ಸಮಾವೇಶ…
ಚಿಕ್ಕಮ್ಮನ ಹತ್ಯೆಗೆ ಯತ್ನಿಸಿದವನಿಗೆ 10 ವರ್ಷ ಜೈಲು
December 13, 2019ಮೈಸೂರು, ಡಿ.12-ದೈಹಿಕ ಸಂಪರ್ಕಕ್ಕೆ ಒಪ್ಪದ ಚಿಕ್ಕಮ್ಮನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದವನಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 4.10 ಲಕ್ಷ ರೂ. ದಂಡ ವಿಧಿಸಿ ಮೈಸೂರಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ತೀರ್ಪು ನೀಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಹರಟೆ ಮಲ್ಲರಾಜಪಟ್ಟಣದ ನಿವಾಸಿ ಶಿವು ಅಲಿ ಯಾಸ್ ಶಿವರಾಜ ಶಿಕ್ಷೆಗೆ ಗುರಿಯಾದವನಾಗಿದ್ದು, ಈತ ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ ಎಂಬ ಕಾರಣದಿಂದ 2016ರ ಜೂನ್ 13ರಂದು…










