Tag: Mysore

ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ
ಮೈಸೂರು

ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ

December 1, 2019

ನವದೆಹಲಿ, ನ.30-ಡಿಸೆಂಬರ್ 1 ರಿಂದ ಅನೇಕ ಬದಲಾವಣೆಗಳಾಗಲಿದ್ದು, ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್‍ಐಸಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಮೊಬೈಲ್ ಸುಂಕ ಇತ್ಯಾದಿಗಳಿಗೆ ಸಂಬಂ ಧಿಸಿದ ಹಲವು ಯೋಜನೆಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ. 6000 ರೂಪಾಯಿಗಳನ್ನು ಪಡೆಯಲು ಆಧಾರ್ ಲಿಂಕ್ ಅನಿವಾರ್ಯ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಪಡೆಯಲು ಆಧಾರ್ ಕಡ್ಡಾಯ ವಾಗಿದೆ. ಆಧಾರ್ ಜೊತೆ ಯೋಜನೆ ಲಿಂಕ್ ಮಾಡಿದ ರೈತರಿಗೆ ಮಾತ್ರ ಕಂತಿನ ಹಣ ಸಿಗಲಿದೆ. ಆಧಾರ್…

ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ
ಮೈಸೂರು

ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ

December 1, 2019

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ಈ ಹಿಂದೆ 2 ಮತ್ತು 4ನೇ ಶನಿವಾರದಂದು ರಜೆಯನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ 15 ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿತ್ತು. ಆದರೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಈ ದಿನಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದರಿಂದ ಅನ್ಯಾಯ ಉಂಟಾಗಿತ್ತು. ಹೀಗಾಗಿ ಇಂತಹ ಇಲಾಖೆಯ ನೌಕರರಿಗೆ ಇದೀಗ 15 ಸಾಂದರ್ಭಿಕ ರಜೆಯ ಜೊತೆಗೆ, 2 ಪರಿಮಿತ ರಜೆಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರಿ…

ಬೆಂಗಳೂರು, ದಾವಣಗೆರೆ ವಿವಿಗೆ ಜಯ
ಮೈಸೂರು

ಬೆಂಗಳೂರು, ದಾವಣಗೆರೆ ವಿವಿಗೆ ಜಯ

December 1, 2019

ಮೈಸೂರು,ನ.30(ವೈಡಿಎಸ್)- ಮಾನಸ ಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಶನಿವಾರ ನಡೆದ 2ನೇ ಸುತ್ತಿನ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರು ಮತ್ತು ದಾವಣ ಗೆರೆ ವಿವಿ ತಂಡಗಳು ಜಯ ಸಾಧಿಸಿದವು. ನವದೆಹಲಿಯ ಭಾರತೀಯ ವಿಶ್ವವಿದ್ಯಾ ನಿಲಯಗಳ ಮಹಾಸಂಘ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಆಯೋ ಜಿಸಿರುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೈದ್ರಾ ಬಾದ್‍ನ ಮೌಲಾನಾ ಆಜಾದ್ ಉರ್ದು ವಿವಿ ವಿರುದ್ಧ ಬೆಂಗಳೂರು ವಿವಿ ತಂಡ 1 ವಿಕೆಟ್‍ನ ರೋಚಕ ಜಯ ಸಾಧಿಸಿದರೆ, ಚೆನ್ನೈನ…

ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಆಗ್ರಹಿಸಿ ಮೈಸೂರಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಆಗ್ರಹಿಸಿ ಮೈಸೂರಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

December 1, 2019

ಮೈಸೂರು, ನ.30(ಪಿಎಂ)- ಹೈದ ರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ಸಾಮೂ ಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದಿರುವ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವ ದಲ್ಲಿ ಕಾಲೇಜು ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಹೈದ್ರಾ ಬಾದ್‍ನಲ್ಲಿ ಪಶುವೈದ್ಯೆ ಮೇಲೆ ಸಾಮೂ ಹಿಕ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿದೆ. ಇಂತಹ ಪೈಶಾಚಿಕ ಕೃತ್ಯ ನಡೆಸಿದವರಿಗೆ ಕೂಡಲೇ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು….

`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ   `ಸಖಿ ಒನ್ ಸ್ಟಾಪ್ ಸೆಂಟರ್’
ಮೈಸೂರು

`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ  `ಸಖಿ ಒನ್ ಸ್ಟಾಪ್ ಸೆಂಟರ್’

December 1, 2019

ಮೈಸೂರು, ನ.30- ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಸಮಾಲೋಚನೆ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿ ಸುವ ಉದ್ದೇಶದ `ಸಖಿ- ಒನ್ ಸ್ಟಾಪ್ ಸೆಂಟರ್’ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಕಾರ್ಯ ಆರಂಭಿಸಿದೆ. ಈ ಹಿಂದೆ `ಗೆಳತಿ’ ವಿಶೇಷ ಚಿಕಿತ್ಸಾ ಘಟಕ’ವನ್ನೇ ಒಂದಷ್ಟು ಮಾರ್ಪಡಿಸಿ `ಸಖಿ-ಒನ್ ಸ್ಟಾಪ್ ಸೆಂಟರ್’ ಹೆಸರಿನಲ್ಲಿ ಕಳೆದ ನ.2ರಂದು ಚೆಲುವಾಂಬ ಆಸ್ಪತ್ರೆಯ 2ನೇ ಮಹಡಿಯಲ್ಲಿ ತೆರೆಯಲಾಗಿದೆ. ನುರಿತ ಆಪ್ತ ಸಮಾಲೋಚಕರು, ಪೊಲೀಸ್,…

`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ
ಮೈಸೂರು

`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ

December 1, 2019

ಮೈಸೂರು,ನ.30(ಆರ್‍ಕೆಬಿ)- ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯ ರಿಗೆ ನೆರವಾಗುವ ದೃಷ್ಟಿಯಿಂದ ಮೈಸೂ ರಿನಲ್ಲಿ ತೆರೆಯಲಾಗಿರುವ `ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ನಡೆಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವ ಮಾನೆ…

ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು
ಮೈಸೂರು

ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು

December 1, 2019

ಮೈಸೂರು, ನ.30(ಎಂಕೆ)- ಬಲ್ಬ್, ಸೋಲಾರ್, ಟಿವಿ, ಫ್ಯಾನ್ ಮತ್ತು ಇತರೆ ವಿದ್ಯುತ್ ಉಪಕರಣಗಳ ಬಳಸುವ ವಿಧಾನಗಳ ಕುರಿತು ಬಗೆ ಬಗೆಯ ಬಣ್ಣಗಳನ್ನು ತುಂಬಿ ಚಿತ್ರ ಬಿಡಿಸುವ ಮೂಲಕ ವಿದ್ಯುತ್ ಉಳಿ ತಾಯದ ಅರಿವು ಮೂಡಿಸಲಾಯಿತು. ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆಆರ್‍ಇಡಿಎಲ್) ವತಿಯಿಂದ ಆಯೋಜಿಸಲಾಗಿದ್ದ ‘ಶಾಲಾ ಮಕ್ಕಳಿಗೆ ವಿದ್ಯುತ್ ಸಂರ ಕ್ಷಣೆಯ ಬಗ್ಗೆ ಚಿತ್ರ ಕಲಾ ಸ್ಪರ್ಧೆ’ಯಲ್ಲಿ ಇಂಧನ ಉಳಿ ಸುವ ಜತೆಗೆÉ ಭೂಮಿಯನ್ನು ಸಂರಕ್ಷಿಸಿ ಎಂಬುದನ್ನು ವಿದ್ಯಾರ್ಥಿಗಳು ತಮ್ಮ…

ವಶಪಡಿಸಿಕೊಂಡ ಹಣ ದುರ್ಬಳಕೆ   ಮೇಲುಕೋಟೆ ಠಾಣೆ ಎಎಸ್‍ಐ   ಸೇರಿ ಇಬ್ಬರ ಅಮಾನತು
ಮೈಸೂರು

ವಶಪಡಿಸಿಕೊಂಡ ಹಣ ದುರ್ಬಳಕೆ  ಮೇಲುಕೋಟೆ ಠಾಣೆ ಎಎಸ್‍ಐ  ಸೇರಿ ಇಬ್ಬರ ಅಮಾನತು

December 1, 2019

ಪಾಂಡವಪುರ,ನ.30-ವಶಪಡಿಸಿಕೊಂಡ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಯಲ್ಲಿ ಮೇಲುಕೋಟೆ ಠಾಣೆ ಎಎಸ್‍ಐ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಕೆ.ಪರಶುರಾಮ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೇಲುಕೋಟೆ ಠಾಣೆ ಎಎಸ್‍ಐ ಸುರೇಶ್ ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ಅಮಾನತುಗೊಂಡವರು. ತಿಂಗಳ ಹಿಂದೆ ತಾಲೂಕಿನ ಶಂಭೂನಹಳ್ಳಿ ಸಮೀಪದ ಅರಣ್ಯದಲ್ಲಿ ಕೆಲವು ಯುವ ಕರು ಜೂಜಾಟದಲ್ಲಿ ನಿರತರಾಗಿದ್ದರು. ಈ ವೇಳೆ ಜೂಜು ಅಡ್ಡೆ ಮೇಲೆ ಎಎಸ್‍ಐ ಸುರೇಶ್‍ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ದಾಳಿ ನಡೆಸಿ ಸಾವಿರಾರು ರೂ. ವಶಪಡಿಸಿಕೊಂಡಿದ್ದರು. ಈ…

ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ
ಮೈಸೂರು

ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ

November 30, 2019

ಕುಶಾಲನಗರ,ನ.29(ಆರ್‍ಕೆ, ಅಕ್ಷಯ್) -ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಡಿಸೆಂಬರ್‍ನಲ್ಲಿ ಆರಂಭವಾಗಲಿದೆ.ಉಪ ಚುನಾವಣೆ ನಂತರ ಈ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಅದಕ್ಕಾಗಿ ಸರ್ಕಾರ 130 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಹಾರಂಗಿ ಡ್ಯಾಂನಲ್ಲಿ ಒಂದು ಟಿಎಂಸಿಎಫ್‍ಟಿ (1 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್)ಯಷ್ಟು ಹೂಳು ಶೇಖರಣೆ ಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಜಲಾಶಯಕ್ಕೂ ನೀರು ಹರಿದು ಬರುವ ಪ್ರಮುಖ ನೀರಿನ ಮೂಲವಾದ ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿಕೊಂಡಿ ರುವುದರಿಂದ ನೀರು ಸಂಗ್ರಹ ಸಾಮಥ್ರ್ಯ ಕಡಿಮೆಯಾಗಿದೆ ಎಂಬ…

ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ
ಮೈಸೂರು

ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ

November 30, 2019

ಮೈಸೂರು, ನ.29(ಆರ್‍ಕೆ)- ಡಿಸೆಂ ಬರ್ ತಿಂಗಳಲ್ಲಿ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಯಾದ್ಯಂತ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಸಿದ್ಧತೆ ನಡೆಸುತ್ತಿದೆ. ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನವೆಂಬರ್ 20ರಂದು ಗೆಜೆಟ್ ಅಧಿಸೂಚನೆ ಹೊರಡಿ ಸಿದ್ದು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಮೈಸೂರು ಜಿಲ್ಲೆಯ ನಂಜನ ಗೂಡು ರಸ್ತೆ, ಟಿ.ನರಸೀಪುರ ರಸ್ತೆ ಹಾಗೂ ಗುಂಡ್ಲುಪೇಟೆ ರಸ್ತೆಗಳಲ್ಲಿ ನಿರ್ಮಿಸಿರುವ ಪ್ಲಾಜಾಗಳಲ್ಲಿ ಆ ಮಾರ್ಗ ಸಂಚರಿ ಸುವ…

1 126 127 128 129 130 330
Translate »