ಮೈಸೂರು, ಅ.16(ಆರ್ಕೆಬಿ)- ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ ಮತ್ತು ಸಂಸ್ಕರಣೆ’ಗೆ ರೈತರು ಹೆಚ್ಚು ಒತ್ತು ನೀಡ ಬೇಕು ಎಂದು ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಅಯ್ಯಪ್ಪನ್ ಸಲಹೆ ನೀಡಿದರು. ಮೈಸೂರಿನ ಕರ್ನಾಟಕ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ತಂತ್ರ ಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಏರ್ಪಡಿ ಸಿದ್ದ `ವಿಶ್ವ ಆಹಾರ ದಿನಾಚರಣೆ…
ಮೈಸೂರು ಜಯದೇವದಿಂದ 175 ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ
October 17, 2019ಮೈಸೂರು, ಅ.16(ಎಂಟಿವೈ)- ಮೈಸೂರು ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಬುಧವಾರ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿಯಾಗಿದ್ದು, 175 ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಮೈಸೂರು ಜಯದೇವ ಆಸ್ಪತ್ರೆಯಲ್ಲಿ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಅಮೇ ರಿಕಾದ ಡಾ.ಸುಬ್ರಹ್ಮಣಿ ಹಾರ್ಟ್ ಫೌಂಡೇ ಷನ್ ಹಾಗೂ ಮೆಡಟ್ರಾನಿಕ್ ವ್ಯಾಸ್ಕುಲರ್ ಸಂಸ್ಥೆಯ ನೆರವಿನೊಂದಿಗೆ ನಡೆಸಿದ ಕಾರ್ಯಾ ಗಾರದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ 125,…
ಜಂಬೂಸವಾರಿಯಲ್ಲಿ ಜಾನಪದ ಕಲಾವಿದರನ್ನು ಪ್ರಾಣಿಗಳಂತೆ ನೋಡಿಕೊಂಡ ಉತ್ಸವ ಸಮಿತಿ
October 17, 2019ಮೈಸೂರು,ಅ.16(ಆರ್ಕೆಬಿ)- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗಿಯಾ ಗಿದ್ದ ಜಾನಪದ ಕಲಾವಿದರಿಗೆ ಪರಿಹಾರ ಹಾಗೂ ಸೂಕ್ತ ಮೂಲಭೂತ ಸೌಕರ್ಯ ವನ್ನು ನೀಡದೆ ಪ್ರಾಣಿಗಳಂತೆ ತಮ್ಮನ್ನು ನೋಡಲಾಗಿದೆ ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಆರೋಪಿಸಿದರು. ‘ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ, ದಸರಾ ಉತ್ಸವ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 900ಕ್ಕೂ ಹೆಚ್ಚು ಜಾನಪದ ಕಲಾವಿದರನ್ನು ಒಂದೆಡೆ ಕೂಡಿ ಹಾಕಿ, ಯಾವುದೇ ಮೂಲ ಭೂತ ಸೌಲಭ್ಯ ನೀಡದೆ ಪ್ರಾಣಿಗಳಂತೆ ನೋಡಲಾಗಿದೆ. ಆಹಾರ…
ಬಾಲೆಯರಿಗೆ ಲೈಂಗಿಕ ಹಿಂಸೆ: ಇಬ್ಬರಿಗೆ ಜೈಲು ಶಿಕ್ಷೆ, ದಂಡ
October 17, 2019ಮೈಸೂರು, ಅ.16(ಎಸ್ಪಿಎನ್)- ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ ಇಬ್ಬರಿಗೆ ಮೈಸೂರು ವಿಶೇಷ ಪೋಕ್ಸೊ ನ್ಯಾಯಾಲಯ ಕ್ರಮವಾಗಿ 3 ಮತ್ತು ಒಂದು ವರ್ಷದ ಸೆರೆವಾಸ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 50 ವರ್ಷದ ಕಾಮುಕನಿಗೆ 3 ವರ್ಷ ಜೈಲು: ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ವ್ಯಕ್ತಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ…
`ದೇವರಾಜ ಅರಸು’ ಜಿಲ್ಲೆ ರಚನೆ ಬೇಡಿಕೆ
October 15, 2019ಬೆಂಗಳೂರು, ಅ.14(ಕೆಎಂಶಿ)- ಮೈಸೂರು ಜಿಲ್ಲಾ ವಿಭಜನೆಗೆ ಮತ್ತೆ ಚಾಲನೆ ದೊರೆತಿದೆ. ಕೊಡಗು, ಮೈಸೂರಿನ ಹೆಬ್ಬಾಗಿಲಾಗಿರುವ ಹುಣಸೂರು ನಗರವನ್ನು ದೇವರಾಜ ಅರಸು ಹೆಸರಿನಲ್ಲಿ ಹೊಸ ಜಿಲ್ಲೆ ಸ್ಥಾಪಿಸಬೇಕು ಎಂಬ ಕೂಗಿಗೆ ರಾಜ್ಯ ಸರ್ಕಾರವೂ ತಲೆಬಾಗಿದಂತಿದೆ. ಅನರ್ಹ ಶಾಸಕ ಹೆಚ್.ವಿಶ್ವನಾಥ್, ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನೂತನ ಜಿಲ್ಲಾ ಸ್ಥಾಪನೆಗೆ ಆಗ್ರಹಿಸಿದ್ದಲ್ಲದೆ, ಇದರಿಂದಾಗುವ ಅನುಕೂಲಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ವಿಶ್ವನಾಥ್ ಅವರ ಮನವಿಗೆ ಮೊದಲು ಹೇಗೆ ಆಗುತ್ತೆ ಎಂದ ಮುಖ್ಯಮಂತ್ರಿಯವರು, ಈಗಾಗಲೇ ನಿಮ್ಮ ಸ್ನೇಹಿತರೇ…
ಎನ್ಟಿಎಂ ಶಾಲೆ, ಅದರ ಜಾಗವನ್ನು ಸಂರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಯಡಿಯೂರಪ್ಪ ಸೂಚನೆ
October 15, 2019ಮೈಸೂರು,ಅ.14-ಎನ್ಟಿಎಂ ಶಾಲೆಗೆ ಸೇರಿದ ಜಾಗವನ್ನು ಹಾಗೆ ಉಳಿಸಿಕೊಂಡು, ಶಾಲೆ ನಡೆಸಲು ಯಾವುದೇ ಹಸ್ತಕ್ಷೇಪ ಉಂಟಾಗದಂತೆ ಉಳಿಕೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸಲು ಕ್ರಮ ವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮೈಸೂರು ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ಪುಟ್ಟಸಿದ್ದಶೆಟ್ಟಿ, ಪ್ರೊ.ಪಿ.ವಿ.ನಂಜರಾಜ ಅರಸ್, ನಂದೀಶ್ ಅರಸ್ ಹಾಗೂ ಇತರ ಹೋರಾಟ ಸಮಿತಿ ಸದಸ್ಯರು ಮೈಸೂರು ಮಹಾರಾಣಿ ಎನ್ಟಿಎಂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಈ ಶಾಲೆಯ ಜಾಗದಲ್ಲಿ…
ಸರ್ಕಾರಿ ಸೇವೆಗಳನ್ನು ಮನೆಗೇ ತಲುಪಿಸುವ ವಿನೂತನ ಯೋಜನೆ ‘ಜನಸೇವಕ’
October 15, 2019ಬೆಂಗಳೂರು, ಅ.14- ಸಾರ್ವಜನಿಕರಿಗೆ ಸರಕಾರಿ ಸೇವೆಗಳು ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ ‘ಸಕಾಲ’ ಯೋಜನೆಯಡಿಯಲ್ಲಿ ‘ಜನಸೇವಕ’ ಎಂಬ ವಿನೂತನ ಯೋಜನೆಯನ್ನು ಪೀಣ್ಯದ ದಾಸರಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆ ಅದನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರಕಾರಿ ಕಚೇರಿಗೆ ಅಲೆದಾಡುವುದು, ಕಚೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಸರಕಾರ…
ಉದ್ದೇಶಿತ ಪ್ರತಿಷ್ಠಿತ ಬಲ್ಲಹಳ್ಳಿ ಬಡಾವಣೆಗೆ ಎಳ್ಳು-ನೀರು
October 15, 2019ಮೈಸೂರು,ಅ.14(ಆರ್ಕೆ)- ಭೂಮಿ ನೀಡಲು ರೈತರು ನಿರಾಕರಿಸಿರುವುದರಿಂದ ಮಹತ್ವಾಕಾಂ ಕ್ಷೆಯ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆ ಮೂಲೆಗುಂಪಾಗುವುದು ಖಚಿತವಾಗಿದೆ. ಯೋಜ ನೆಯ ಅನುಕೂಲ, ಭವಿಷ್ಯದ ಸೌಲಭ್ಯಗಳು, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಿಗುತ್ತಿದ್ದ ಸಂಪರ್ಕ ವ್ಯವಸ್ಥೆ, ವೈಯಕ್ತಿಕವಾಗಿ ಭೂ ಮಾಲೀಕರಿಗೆ ಆಗುತ್ತಿದ್ದ ಆರ್ಥಿಕ ಲಾಭ ಇತ್ಯಾದಿ ಅಂಶಗಳನ್ನು ತಿಳಿಸಿ ಮನವರಿಕೆ ಮಾಡದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ರೈತರ ಆಕ್ರೋಶಕ್ಕೆ ಕಾರಣ ಎಂಬುದು ಇಂದು ನಡೆದ ಸಭೆಯಲ್ಲಿ ಮುಡಾ ಅಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಮನವರಿಕೆಯಾಯಿತು. ವಸತಿ ಬಡಾವಣೆ ನಿರ್ಮಿಸಲು 2012ರಲ್ಲೇ ಮುಡಾ…
ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್.ಡಿ.ದೇವೇಗೌಡ್ರೆ ಕಾರಣ
October 15, 2019ತುಮಕೂರು,ಅ.14- ನನ್ನ ಮೇಲೆ ಐಟಿ ದಾಳಿ ಏನಾದರೂ ಆದರೆ ಅದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇಕಾದ್ರೇ ದೇವೇಗೌಡರೇ ನನ್ನ ವಿರುದ್ಧ ಪತ್ರ ಬರೆದಿರ್ತಾರೆ. ನನ್ನ ಮೇಲೆ ಐಟಿ ದಾಳಿ ಮಾಡಿ ಅಂತ. ಅವರಿಗೆ ಏನೂ ಕೆಲಸ ಇರಲ್ವಲ್ಲಾ ಅದಕ್ಕೆ ಸುಮ್ಮನೆ ಕುತ್ಕೊಂಡು ಹೀಗೆ ಬರೆದಿರ್ತಾರೆ ಎಂದು ಹೇಳಿದ್ದಾರೆ. ನಾನೂ ಹಾಗೆಯೇ ದೇವೇಗೌಡರ ಆಸ್ತಿಯನ್ನು ತನಿಖೆ ಮಾಡೋಕೆ ಒತ್ತಾಯಿಸ್ತೀನಿ. ಅವರ ಕುಟುಂಬದ ಎಲ್ಲವನ್ನೂ ತನಿಖೆ…
ಕಣ್ಮರೆಯಾಗಿದ್ದ ಯುವಕನ ಹತ್ಯೆ: ಆತನ ಸ್ನೇಹಿತರು ಪೊಲೀಸ್ ವಶಕ್ಕೆ
October 15, 2019ಮೈಸೂರು, ಅ.14(ಆರ್ಕೆ)- ಅಕ್ಟೋಬರ್ 3ರಂದು ಕಣ್ಮರೆಯಾಗಿದ್ದ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿದೆ. ಮೈಸೂರಿನ ಕುವೆಂಪುನಗರ ನಿವಾಸಿ ರಾಹುಲ್(27) ಕೊಲೆಯಾದ ಯುವಕ ನಾಗಿದ್ದು, ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾ ರಣೆಗೊಳಪಡಿಸಿದ್ದಾರೆ. ಅಕ್ಟೋಬರ್ 3ರಂದು ಸಂಜೆ ಯುವ ದಸರಾಗೆ ಹೋಗುತ್ತೇನೆ ಎಂದು ಹೇಳಿ ಮನೆ ಯಿಂದ ಹೊರಬಂದಿದ್ದ ರಾಹುಲ್ ಅಂದು ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ಮರುದಿನ ಅವರ ತಾಯಿ ಕುವೆಂಪುನಗರ ಠಾಣೆಗೆ ತೆರಳಿ ರಾಹುಲ್ ನಾಪತ್ತೆಯಾಗಿ…










