ಮೈಸೂರು,ಆ.16(ಆರ್ಕೆ)- ಮೈಸೂರು ರೈಲು ನಿಲ್ದಾಣದ ಒಂದನೇ ಪ್ಲಾಟ್ಫಾರಂನಲ್ಲಿ ಎಸ್ಕಲೇಟರ್ ಸೇವೆಯನ್ನು ಸಂಸದ ಪ್ರತಾಪ್ಸಿಂಹ ಅವರು ಗುರುವಾರ ಉದ್ಘಾಟಿಸಿದರು. 1ರಿಂದ 6ನೇ ಪ್ಲಾಟ್ ಫಾರಂಗಳಿಗೆ ಪ್ರಯಾ ಣಿಕರು ತೆರಳಲು ಅನು ಕೂಲವಾಗುವಂತೆ ರೈಲ್ವೆ ಇಲಾಖೆಯ ಎಸ್ಕಲೇಟರ್ ಸೌಲಭ್ಯ ವನ್ನು ಒದಗಿಸಿದ್ದು, 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರದಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ಸೆನ್ಸಾರ್ಗಳಿರುವ ಈ ಎಸ್ಕಲೇಟರ್ ಪ್ರಯಾಣಿಕರು ಬಂದಾಗ ಸ್ವಯಂ ಚಾಲನೆಗೊಳ್ಳಲಿದೆ. ಒಂದು ವೇಳೆ ಪ್ರಯಾಣಿಕರಿಲ್ಲದಿ ದ್ದರೆ ಸ್ಥಗಿತಗೊಳ್ಳುವುದರಿಂದ ವಿದ್ಯುತ್ ಉಳಿತಾಯವಾಗಲಿದೆ. ಲಗ್ಗೇಜ್ ಹೊಂದಿರುವ ವೃದ್ಧ, ಅಂಗವಿಕಲ ಹಾಗೂ ನಿಸ್ಸಾಹಾಯಕ…
ಶೀಘ್ರ ಸಂಪುಟ ವಿಸ್ತರಣೆಗೆ ಮಾಜಿ ಸಚಿವ ಹೆಚ್ಸಿಎಂ ಆಗ್ರಹ
August 17, 2019ಮೈಸೂರು,ಆ.16(ಎಂಟಿವೈ)-ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿ ದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಪರಿ ಣಾಮಕಾರಿ ಹಾಗೂ ತುರ್ತಾಗಿ ಪರಿಹಾರ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕೂಡಲೇ ರಾಜ್ಯ ಸಚಿವ ಸಂಪುಟ ರಚಿಸಬೇಕೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ. ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 20 ದಿನ ಗಳಾದರೂ ಅಧಿಕಾರಿಗಳ ಮೂಲಕ ಧ್ವಜಾ ರೋಹಣ ಮಾಡಿಸಿರೋದು…
ಫೋನ್ ಕದ್ದಾಲಿಕೆ ಯಾರೇ ಮಾಡಿದರೂ ತಪ್ಪೇ: ತನ್ವೀರ್
August 17, 2019ಮೈಸೂರು, ಆ.16(ಎಂಟಿವೈ)- ಫೋನ್ ಕದ್ದಾಲಿಕೆ ಯಾರೇ ಮಾಡಿದ್ದರೂ, ಅದು ದೊಡ್ಡ ಅಪರಾಧವಾಗಲಿದೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ದೇಶದ್ರೋಹಿ ಚಟುವಟಿಕೆ ಮಾಡುವವರ ಫೋನ್ ಕz್ದÁಲಿಕೆ ಸಹಜ. ಅದು ಅಧಿಕೃತವು ಹೌದು. ಆದರೆ, ಈಗಿನ ಆರೋಪದಲ್ಲಿ ಜಪ್ರತಿನಿಧಿಗಳ ಫೋನ್ ಕz್ದÁಲಿಕೆ ಆಗಿದೆ. ಇದು ದೊಡ್ಡ ಅಪರಾಧ. ಅಧಿಕಾರ ಉಳಿಸಿಕೊಳ್ಳಲು ಈ ರೀತಿಯ ಕೆಲಸ ಮಾಡೋದು ಸರಿಯಲ್ಲ. ಇದರ ಬಗ್ಗೆ…
ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರು ಪಾಲಿಕೆ ಸದಸ್ಯರಿಂದ ದೇಣಿಗೆ ಸಂಗ್ರಹ
August 17, 2019ಮೈಸೂರು,ಆ,16(ಆರ್ಕೆಬಿ)-ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಮನೆ ಕಳೆದು ಕೊಂಡು ಕಂಗಾಲಾಗಿರುವ ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರು ಮಹಾನಗರ ಪಾಲಿಕೆ ಮೇಯರ್, ಸದಸ್ಯರು, ಸಿಬ್ಬಂದಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಎಲ್ಲಾ 65 ಮಂದಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಜನರಲ್ಲಿ ಮನವಿ ಮಾಡಿದರು. 4 ತಂಡಗಳಲ್ಲಿ ನಡೆದ ಪಾದಯಾತ್ರೆ ವೇಳೆ ಹುಂಡಿಗಳಲ್ಲಿ ಸಾರ್ವಜನಿಕರಿಂದ ಒಟ್ಟು 3.50 ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾಯಿತು. ಅಲ್ಲದೆ ಎಲ್ಲಾ 65…
ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತ
August 15, 2019ನವದೆಹಲಿ, ಆ.14- ಸ್ವಾತಂತ್ರ್ಯೋತ್ಸವ ದಿನ ಭಾರತದ ಪಾಲಿಗೆ ಅತ್ಯಂತ ಸಂತಸದ ದಿನ ಎಂದು ರಾಷ್ಟ್ರಪತಿ ಬಣ್ಣಿಸಿದ್ದಾರೆ. ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತ ನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ದೇಶದ ಜನತೆಗೆ ಶಾಂತಿ, ಸಾಮರಸ್ಯ ಮತ್ತು ಸದ್ಭಾವನೆಯ ಸಂದೇಶ ಸಾರಿದರು. ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತ. ಸ್ವಾತಂತ್ರ್ಯೋತ್ಸವ ಅಂಗವಾಗಿ ಕ್ರಾಂತಿವೀರರನ್ನು ಸ್ಮರಿಸು ತ್ತೇವೆ. ದೇಶವನ್ನು ಸ್ವತಂತ್ರವಾಗಿಸಲು ಹೋರಾಡಿದ ಪೀಳಿಗೆಯು, ಭಾರತೀ ಯರಿಗೆ ರಾಜಕೀಯ ಶಕ್ತಿಯನ್ನು ನೀಡಿದೆ. ದೇಶದ ಸಂಪತ್ತನ್ನು…
ವಾಹನ ಬಾಡಿಗೆ ಪಡೆದ ಮಂಜುನಾಥ ಜೈಲು ಪಾಲು; ಅಪ್ರಾಪ್ತ ರಿಮ್ಯಾಂಡ್ ಹೋಂಗೆ
August 15, 2019ಮೈಸೂರು, ಆ.14(ಆರ್ಕೆ)- ಅಪ್ರಾಪ್ತನ ಅಡ್ಡಾದಿಡ್ಡಿ ವಾಹನ ಚಾಲನೆಗೆ ಅಮಾ ಯಕ ವಿದ್ಯಾರ್ಥಿನಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಬಾಡಿಗೆಗೆ ಪಡೆದಿದ್ದ ಗಾಯತ್ರಿಪುರಂ ನಿವಾಸಿ ಮಂಜುನಾಥ್ ಜೈಲು ಪಾಲಾ ದರೆ ಹುಚ್ಚಾಪಟ್ಟೆ ವಾಹನ ಚಾಲಿಸಿ, ವಿದ್ಯಾರ್ಥಿನಿ ಬಲಿ ಪಡೆದ ಅಪ್ರಾಪ್ತ ರಾಜು (ಹೆಸರು ಬದಲಿಸಲಾಗಿದೆ) ರಿಮ್ಯಾಂಡ್ ಹೋಂ ಸೇರಿದ್ದಾನೆ. ನಗರದ ಜೆಎಲ್ಬಿ ರಸ್ತೆ, ಮುಡಾ ಜಂಕ್ಷನ್ ಬಳಿ ಮಂಗಳವಾರ ಅಪ್ರಾಪ್ತ ರಾಜು ಅಡ್ಡಾದಿಡ್ಡಿಯಾಗಿ ಸ್ಕಾರ್ಪಿಯೋ ಚಾಲಿಸಿ, ಮೂರು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಲ್ಲದೆ, ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ಬರು…
ಮೈಮುಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧ ಆಯ್ಕೆ
August 15, 2019ಮೈಸೂರು, ಆ.14(ಎಸ್ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದ ಕರ ಸಂಘಗಳ ಒಕ್ಕೂಟ(ಮೈಮುಲ್)ದ ನೂತನ ಅಧ್ಯಕ್ಷ ರಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡರ ಆಪ್ತ ಮಾವಿನ ಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ.9ರಂದು ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆ ಯಿಂದಾಗಿ ಮುಂದೂಡಲಾಗಿತ್ತು. ಅದರಂತೆ ಇಂದು ಸಿದ್ದಾರ್ಥ ನಗರದಲ್ಲಿರುವ ಮೈಮುಲ್ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಬಂಧಿ ಎಸ್.ಸಿ.ಅಶೋಕ್ ತಮ್ಮ ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಅಖಾಡದಲ್ಲಿ ಉಳಿದ ಏಕೈಕ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರು ಅವಿರೋಧವಾಗಿ ಆಯ್ಕೆಯಾದರು….
ವಿಜಯನಗರ ಕಾಲದ ಬತೇರಿ ವಿನಾಶದತ್ತ
August 15, 2019ಶ್ರೀರಂಗಪಟ್ಟಣ, ಆ.14- ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ (15ನೇ ಶತಮಾನ) ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾದ ಐತಿಹಾಸಿಕ ಬತೇರಿಯು ಸರಿಯಾದ ನಿರ್ವ ಹಣೆಯಿಲ್ಲದೆ ವಿನಾಶದತ್ತ ಸಾಗುತ್ತಿದೆ. ಸಾವಿರಾರು ವರ್ಷಗಳಿಂದ ಪ್ರಕೃತಿಯ ವೈಪ ರೀತ್ಯಗಳಿಗೆ ಜಗ್ಗದ ಐತಿಹಾಸಿಕ ನಿರ್ಮಾಣಗಳು ಮನುಷ್ಯನ ಸ್ವಾರ್ಥಕ್ಕೆ ಹೇಗೆ ಬಲಿಯಾಗುತ್ತಿವೆ ಎಂಬುದಕ್ಕೆ ಪಟ್ಟಣದ ಬತೇರಿ ನಿದರ್ಶನವಾಗಿದೆ. ಹಲವು ಧ್ವಜಗಳ ಹಾರಾಟ: ವಿಜಯನಗರ ಸಾಮ್ರಾಜ್ಯದ ಅಂದಿನ ಅರಸ ಪ್ರೌಢÀದೇವರಾಯ (ಎರಡನೇ ದೇವರಾಯ) ತನ್ನ ಸಾಮ್ರಾಜ್ಯದ ರಾಜ ಲಾಂಛನ ವರಾಹ ಧ್ವಜ ಹಾರಿಸುವುದಕ್ಕೆ ಈ ಬತೇರಿ ಯನ್ನು ಶ್ರೀರಂಗಪಟ್ಟಣದಲ್ಲಿ…
ಭಿನ್ನ ನೆಲೆ ಚಿಂತನಾ ಕ್ರಮದಿಂದ ಸಂಶೋಧಕರಲ್ಲಿ ಪರಿಪಕ್ವತೆ
August 15, 2019ಮೈಸೂರು, ಆ.14(ಪಿಎಂ)- ಸಂಶೋಧಕರು ಹಾಗೂ ಅವರ ಮಾರ್ಗದರ್ಶಕರು ಭಿನ್ನನೆಲೆಯ ಚಿಂತನಾಕ್ರಮ ಹೊಂದಿದ್ದರೆ ಸಂಶೋ ಧಕರು ಅಧ್ಯಯನದಲ್ಲಿ ಹೆಚ್ಚು ಪರಿಪಕ್ವ ವಾಗಲು ಸಾಧ್ಯ ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಅಭಿ ಪ್ರಾಯಪಟ್ಟರು. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಸಂಸ್ಥೆ ಹಾಗೂ ಸಂಶೋಧನಾ ವಿದ್ಯಾರ್ಥಿ ವೇದಿಕೆ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಪ್ರಬಂಧ ಮಂಡನೆ-ಸಂವಾದ ಕಾರ್ಯಕ್ರಮ-11ರಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಇದೇ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾನೂ…
20 ಆಟಗಾರರ ತಂಡ ಪ್ರಕಟಿಸಿದ ‘ಮೈಸೂರು ವಾರಿಯರ್ಸ್’
August 15, 2019ಮೈಸೂರು,ಆ.14(ಎಂಟಿವೈ)- `ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20′ ಎಂಟನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯ ಮೈಸೂರು ವಾರಿಯರ್ಸ್ ತಂಡದ ಫ್ರಾಂಚೈಸಿಯಾಗಿರುವ ಎನ್.ಆರ್. ಗ್ರೂಪ್ 20 ಆಟಗಾರರು ಇರುವ ತನ್ನ ತಂಡವನ್ನು ಬುಧವಾರ ಪ್ರಕಟಿಸಿತು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಬೆಳಿಗ್ಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ತಂಡದ ಎಲ್ಲಾ ಆಟಗಾರರು ಹಾಗೂ ಇನ್ನಿತರ ಸದಸ್ಯ ರನ್ನು ವೇದಿಕೆಗೆ ಆಹ್ವಾನಿಸುವ ಮೂಲಕ ಪರಿಚಯ ಮಾಡಿಕೊಡಲಾಯಿತು. ಮೈಸೂರು ವಾರಿಯರ್ಸ್ ತಂಡದ ನಾಯಕ ನಾಗಿ ಅಮಿತ್ ವರ್ಮಾ, ಉಪ ನಾಯಕ ನಾಗಿ ಜೆ.ಸುಚಿತ್ ಹಾಗೂ ಮುಖ್ಯ…










