ಮೈಸೂರು,ಆ.12(ಎಂಟಿವೈ)-ವಿಶ್ವ ಆನೆಗಳ ದಿನದ ಹಿನ್ನೆಲೆಯಲ್ಲಿ ಸೋಮ ವಾರ ಮೈಸೂರಿನ ಮೃಗಾಲಯದಲ್ಲಿ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಆನೆಗಳ ಜೀವನ ಹಾಗೂ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡುವ ಮೂಲಕ ಆನೆಗಳ ಸಂತತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮೃಗಾಲಯದಲ್ಲಿ ಆನೆಗಳಿರುವ ಆವರಣದ ಮುಂದೆ ವಿಶ್ವ ಆನೆಗಳ ದಿನಾಚರಣೆಗೆ ಶುಭ ಕೋರುವ ಬ್ಯಾನರ್ ಹಾಕಿ, ಆನೆಗಳ ಜೀವನ ಶೈಲಿ, ಜೀವಿತಾವಧಿ ಸೇರಿದಂತೆ ಇನ್ನಿತರ ಮಾಹಿತಿಯುಳ್ಳ ಬಿತ್ತಿ ಫಲಕಗಳನ್ನು ಪ್ರದರ್ಶಿಸಿ ಮೃಗಾಲಯಕ್ಕೆ ಬಂದ ಪ್ರವಾಸಿಗರ ಗಮನ ಸೆಳೆಯಲಾಯಿತು. ಆನೆ ದಿನಾಚರಣೆಗೆ ಮೃಗಾಲಯದ…
ಅನಧಿಕೃತ ವ್ಯಕ್ತಿಗಳಿಗೆ ಹಣ, ಪರಿಹಾರ ಸಾಮಗ್ರಿ ನೀಡಬೇಡಿ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ಪೊಲೀಸರ ಸಲಹೆ
August 13, 2019ಮೈಸೂರು,ಆ.12(ಆರ್ಕೆ)-ಕೊಡಗು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ನೆರೆ ಸಂತ್ರಸ್ತರಿಗಾಗಿ ಅನಧಿಕೃತ ವ್ಯಕ್ತಿಗಳಿಗೆ ಹಣ ಅಥವಾ ಸಾಮಗ್ರಿಗಳನ್ನು ನೀಡಬಾರದೆಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಸಂತ್ರಸ್ತರ ನೆರವಿಗಾಗಿ ಹಲವು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ವಿವಿಧ ಸಾಮಗ್ರಿಗಳು ಹಾಗೂ ಹಣ ಸಂಗ್ರಹಿಸುತ್ತಿರು ವುದು ಸರಿಯಷ್ಟೆ. ಆದರೆ, ಕೆಲವು ಅನಧಿಕೃತ ವ್ಯಕ್ತಿಗಳೂ ಸಹ ದೇಣಿಗೆ ಹಣ ಸಂಗ್ರಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದು ಕಾನೂನುಬಾಹಿರ ಎಂದು ಅವರು ತಿಳಿಸಿದ್ದಾರೆ. ಸಹಾಯ ಮಾಡಬಯಸುವವರು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ…
ಬನ್ನೂರು ಬಳಿ ಲಾರಿ ಹರಿದುಆಯಿಷ್ ಉದ್ಯೋಗಿ ಸಾವು
August 13, 2019ಮೈಸೂರು,ಆ.12(ಆರ್ಕೆ)- ಶಿಂಷಾದ ರಮಣೀಯ ಸೌಂದರ್ಯ ಕಣ್ತುಂಬಿ ಕೊಳ್ಳಲು ಪತಿಯೊಂದಿಗೆ ಹೋಗುತ್ತಿದ್ದಾಗ ಬೈಕಿನಿಂದ ಬಿದ್ದ ವೇಳೆ ಲಾರಿ ಹರಿದ ಪರಿ ಣಾಮ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ಉದ್ಯೋಗಿ ಸಾವನ್ನಪ್ಪಿರುವ ಘಟನೆ ಬನ್ನೂರು ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಕುವೆಂಪುನಗರದ ಗಾನ ಭಾರತಿ ಹಿಂಭಾಗದ ನಿವಾಸಿ ಲೋಕೇಶ್ ಅವರ ಪತ್ನಿ ಶ್ರೀಮತಿ ಕವಿತಾ(37) ಸಾವ ನ್ನಪ್ಪಿದವರು. ಆಯಿಷ್ನಲ್ಲಿ ಕಳೆದ 10 ವರ್ಷಗಳಿಂದ ಆರ್ಟಿಸ್ಟ್ ಕಂ ಫೋಟೋ ಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದ…
ಬಿಜೆಪಿ ಶಾಸಕರ ತಂಡದಿಂದ ಶ್ರೀರಂಗಪಟ್ಟಣದಲ್ಲಿಪ್ರವಾಹ ಪರಿಸ್ಥಿತಿ ವೀಕ್ಷಣೆ
August 13, 2019ಮೈಸೂರು, ಆ.12 (ಆರ್ಕೆಬಿ)- ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟ ಹಿನ್ನೆಲೆ ಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಯನ್ನು ಅವಲೋಕಿಸಲು ಶಾಸಕ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ಇನ್ನಿತರ ಸಂಘಟನೆಗಳ ತಂಡ ಸೋಮವಾರ ಶ್ರೀರಂಗಪಟ್ಟಣ ತಾಲೂ ಕಿನ ಹಲವು ಭಾಗಗಳಿಗೆ ಭೇಟಿ ನೀಡಿತ್ತು. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿರಂಜನಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಜಿಎಸ್ಎಸ್ ಸಂಸ್ಥಾಪಕ ಶ್ರೀಹರಿ, ಸೇಫ್ ವೀಲ್ಸ್ ಸಂಸ್ಥಾಪಕ ಬಿ.ಎಸ್.ಪ್ರಶಾಂತ್ ಅವ ರನ್ನು ಒಳಗೊಂಡ ತಂಡದೊಂದಿಗೆ ಅಧಿ…
ಸಾರ್ವಜನಿಕರು ನೀರನ್ನು ಕಾಯಿಸಿ ಉಪಯೋಗಿಸಲು ಮನವಿ
August 13, 2019ಮೈಸೂರು, ಆ.12- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 3ನೇ ಹಂತದ ಶುದ್ದೀಕರಣ ಘಟಕಗಳಾದ ಕ್ಲಾರಿಫೈಯರ್ ಮತ್ತು ಫಿಲ್ಟರ್ ಬೆಡ್ ಘಟಕಗಳ ದುರಸ್ಥಿ ಮತ್ತು ಅಭಿವೃದ್ದಿ ಕಾಮಗಾರಿಗಳನ್ನು ಅಮೃತ್ ಯೋಜನೆ ಯಡಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ನೀರನ್ನು ಸೂಕ್ತ ಪ್ರಮಾಣದಲ್ಲಿ ಶುದ್ಧೀಕರಣಗೊಳಿಸಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಮೈಸೂರು ನಗರದ ವಿಜಯನಗರ ವ್ಯಾಪ್ತಿಯಲ್ಲಿರುವ ಕೇಂದ್ರ ಜಲಸಂಗ್ರಹಾಗಾರದಿಂದ ಸರಬರಾಜಾಗುವ ನೀರು ಮಣ್ಣಿನಂಶದಿಂದ (Turbid water) ಕೂಡಿರುವ ಸಾಧ್ಯತೆ ಇರುವುದರಿಂದ…
ಬಸ್ಸಿನಲ್ಲಿ ಮಹಿಳೆ ಸರ ಕಳವು: ಆರೋಪಿ ಸೆರೆ
August 13, 2019ಮೈಸೂರು, ಆ. 12(ಆರ್ಕೆ)- ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯೊಬ್ಬರ ಕೊರಳಿ ನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮನನ್ನು ಸಿಸಿಬಿ ಪೊಲೀ ಸರು ಬಂಧಿಸಿದ್ದಾರೆ. ಮೈಸೂರಿನ ಸಾತಗಳ್ಳಿ ನಿವಾಸಿ ಅಲ್ಲಾಭಕ್ಷ್ ಅವರ ಮಗ ನಯಾಜ್ ಪಾಷ ಅಲಿಯಾಸ್ ತಲ್ಲಾ(20) ಬಂಧಿತ ಆರೋಪಿಯಾಗಿದ್ದು, ಆತನಿಂದ 75 ಸಾವಿರ ರೂ. ಮೌಲ್ಯದ 22 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯೊಬ್ಬರ ಕೊರಳಿನಿಂದ ಯಾಸಿನ್ ಪಾಷ ಎಂಬುವನೊಂದಿಗೆ ಸೇರಿಕೊಂಡು 22 ಗ್ರಾಂ ಚಿನ್ನದ…
ಸಾರಿಗೆ ಬಸ್ ಸಂಚಾರ ಪುನಾರಂಭ
August 13, 2019ಮೈಸೂರು, ಆ.12(ಆರ್ಕೆ)- ಮಹಾ ಮಳೆಯಿಂದ ನದಿಗಳು ಉಕ್ಕಿ ಹರಿದು ಸೇತುವೆಗಳು ಮುಳುಗಡೆಯಾಗಿದ್ದ ಕಾರಣ ಸ್ಥಗಿತಗೊಂಡಿದ್ದ ಕೆಲಮಾರ್ಗ ಗಳ ಬಸ್ ಸಂಚಾರ ಇಂದಿನಿಂದ ಪುನಾ ರಂಭಗೊಂಡಿದೆ. ಮೈಸೂರಿನಿಂದ ಊಟಿ, ಹೆಚ್.ಡಿ.ಕೋಟೆ, ನಂಜನಗೂಡು, ಕೊಡಗು ಹಾಗೂ ಕೇರಳಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು 4 ದಿನಗಳಿಂದ ರದ್ದು ಗೊಳಿಸಲಾಗಿತ್ತು. ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಇಂದಿ ನಿಂದ ಬಸ್ ಸಂಚಾರ ಆರಂಭಗೊಂಡಿದೆ.
ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
August 13, 2019ಮೈಸೂರು,ಆ.12(ಎಂಕೆ)- ಡಾ.ಬಿ. ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮೀಸಲಾತಿಯು ನಮ್ಮೆಲ್ಲರ ಅಭಿ ವೃದ್ಧಿಗೆ ಕಾರಣವಾಗಿದ್ದು, ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕು ಎಂದು ರಾಜನ ಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮ ದರ್ಶಿ ಎಂ.ಅಪ್ಪಣ್ಣ ಹೇಳಿದರು. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ, ವರ್ಗ, ಹಿಂದು ಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟದ ವತಿ ಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು….
ಮೈಸೂರಲ್ಲಿ ಯಕ್ಷಗಾನ ಸಂಭ್ರಮ
August 13, 2019ಮೈಸೂರು, ಆ.12(ಎಂಕೆ)- ಎಲ್ಲಾ ಬಗೆಯ ಸಾಂಸ್ಕøತಿಕ ಸಂಸ್ಥೆಗಳು ಸರ್ಕಾರದ ಸಹಕಾರವನ್ನು ಪಡೆದುಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಹೇಳಿದರು. ಕಲಾಮಂದಿರದ ಕಿರುರಂಗಮಂದಿರದಲ್ಲಿ ಇನೋವೇಟಿವ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿ ರುವ `ಯಕ್ಷ ಸಂಭ್ರಮ-2019′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿ ಕೈ ಸುಟ್ಟುಕೊಳ್ಳಬೇಡಿ. ಸಾಂಸ್ಕøತಿಕ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಲ್ಲ. ನಿರಂತರವಾಗಿರಬೇಕು. ಹೀಗಾಗಿ ಸರಕಾರದ ನೆರವು ಕೇಳುವುದು ತಪ್ಪಿಲ್ಲ…
ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಯಡಿಯೂರಪ್ಪ ಪರಿಹಾರ ಕಾರ್ಯ ನಡೆಸಲಿ
August 12, 2019ಮೈಸೂರು,ಆ.11(ಪಿಎಂ)-ಬಯಸಿ ಬಯಸಿ ಭಾರೀ ಶ್ರಮಪಟ್ಟು ಮುಖ್ಯ ಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಚಿಲ್ಲರೆ ರಾಜಕಾರಣ ಬಿಟ್ಟು ನೆರೆ ಹಾವ ಳಿಯ ಪರಿಹಾರ ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕುಟುಕಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯ ಕಟ್ಟಡದ ಮುಂಭಾಗ ಕುಸಿದಿರುವುದನ್ನು ಭಾನು ವಾರ ಪರಿಶೀಲಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಯಸಿ ಬಯಸಿ ಶ್ರಮ ವಹಿಸಿ ಬಿ.ಎಸ್.ಯಡಿ ಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಅತ್ತ ಸಚಿವ ಸಂಪುಟವೂ ರಚನೆಯಾಗದ ಸಂದರ್ಭದಲ್ಲಿ ಕಂಡು ಕೇಳರಿಯದ ನೆರೆ ಹಾವಳಿ ರಾಜ್ಯವನ್ನು ಆವರಿಸಿದ್ದು,…










