ಮೈಸೂರು,ಆ.11(ಎಂಟಿವೈ)-ಮೈಸೂರಿನ ಮೇದರ್ ಬ್ಲಾಕ್ನಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳ ಸ್ಥಳಾಂತರಕ್ಕೆ ಚಾಲನೆ ನೀಡ ಲಾಗಿದ್ದು, ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆ ಗಳನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲಾಟರಿ ಎತ್ತುವ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಮೈಸೂರು-ಬೆಂಗಳೂರು, ಮೈಸೂರು -ಹಾಸನ ನಡುವಿನ ರೈಲ್ವೆ ಹಳಿ ಪಕ್ಕ ಮೇದರ್ಬ್ಲಾಕ್ನಲ್ಲಿ ಕಳೆದ ಕೆಲವು ವರ್ಷ ಗಳಿಂದ 192 ಕುಟುಂಬಗಳು ಚಿಕ್ಕ ಚಿಕ್ಕ ಗುಡಿಸಲು ಹಾಗೂ ಮನೆ ನಿರ್ಮಿಸಿ ಕೊಂಡು ವಾಸಿಸುತ್ತಿದ್ದು, ಹೆಚ್ಚುವರಿ ಹಳಿ…
ಮಳೆಯಿಂದ ಮನೆ ಕಳೆದುಕೊಂಡವರಿಗೆ ಜಿ.ಡಿ.ಹರೀಶ್ಗೌಡ ವೈಯಕ್ತಿಕ ನೆರವು
August 12, 2019ಮೈಸೂರು,ಆ.11(ಎಸ್ಬಿಡಿ)-ನಿರಂತರ ಮಳೆ ಸುರಿದ ಪರಿಣಾಮ ಮನೆಗಳಿಗೆ ಹಾನಿಯಾಗಿರುವ ಮಾರ್ಬಳ್ಳಿ ಹುಂಡಿ ಗ್ರಾಮಕ್ಕೆ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ. ಹರೀಶ್ಗೌಡ ಭೇಟಿ ನೀಡಿ, ಸಂತ್ರಸ್ತರಿಗೆ ನೆರವು ನೀಡಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯಪುರ ಹೋಬಳಿ ಮಾರ್ಬಳ್ಳಿ ಹುಂಡಿ ಗ್ರಾಮದ 19 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಇದರಲ್ಲಿ ನಾಲ್ಕೈದು ಮನೆಗಳು ಸಂಪೂರ್ಣ ಕುಸಿದಿದ್ದು, ಉಳಿದ ಮನೆಗಳ ಗೋಡೆಗಳು ನೆಲಕ್ಕುರುಳಿವೆ. ಕೆಲ ಮನೆಗಳ ಗೋಡೆಗಳು ವಾಲಿದ್ದು, ಬೀಳುವ ಹಂತದಲ್ಲಿವೆ. ತೊಲೆಗಳನ್ನು ಗೋಡೆಗಳಿಗೆ ಒತ್ತು ನೀಡಿ, ಜೀವಭಯದಲ್ಲಿ ಅಲ್ಲಿಯೇ ವಾಸವಾಗಿದ್ದಾರೆ….
ಸಂತ್ರಸ್ತರಿಗಾಗಿ ಹರಿದು ಬರುತ್ತಿದೆ ನೆರವಿನ ಮಹಾಪೂರ
August 12, 2019ಮೈಸೂರು,ಆ.11(ಎಂಟಿವೈ)-ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲು ಮೈಸೂರಿನ ಜನತೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಜಿಲ್ಲಾಡ ಳಿತ ಮೈಸೂರಿನ ಪುರಭವನದಲ್ಲಿ ತೆರೆದಿ ರುವ ಅಗತ್ಯ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ತಮ್ಮ ಶಕ್ತ್ಯಾನುಸಾರ ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವ ಮೂಲಕ ಉದಾರತೆ ಪ್ರದರ್ಶಿಸುತ್ತಿದ್ದಾರೆ. ಉತ್ತರ ಕರ್ನಾಟಕ ಹಾಗೂ ಕೊಡಗು ಹಲವು ನದಿಗಳು ಉಕ್ಕಿ ಹರಿಯುತ್ತಿರುವು ದರಿಂದ ಮೈಸೂರು, ಕೊಡಗು, ಹಾಸನ, ಮಂಡ್ಯ ಸೇರಿದಂತೆ ರಾಜ್ಯದ 18 ಜಿಲ್ಲೆ ಗಳಲ್ಲಿ ನೆರೆ ಹಾವಳಿ…
ಬ್ರಾಹ್ಮಣ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು
August 12, 2019ಮೈಸೂರು,ಆ.11(ಪಿಎಂ)-ನೆರೆ ಹಾವ ಳಿಗೆ ಸಿಲುಕಿ ಕಂಗಾಲಾಗಿರುವ ಸಂತ್ರಸ್ತರಿಗೆ ನೆರವು ನೀಡಲು ನಗರದ ವಿವಿಧ ಸಂಘ-ಸಂಸ್ಥೆಗಳು ಮುಂದಾಗಿದ್ದು, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯ ನಡೆಸಿವೆ. ಬ್ರಾಹ್ಮಣ ಸಂಘ: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಉತ್ತರಾದಿ ಮಠದ ಜಂಟಿ ಆಶ್ರಯದಲ್ಲಿ 5 ಲಕ್ಷ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡ ಲಾಯಿತು. ವಿಪ್ರ ಸಂಘ-ಸಂಸ್ಥೆಗಳು ಹಾಗೂ ಸಮುದಾಯದ ಜನತೆಯಿಂದ ಸಂಗ್ರಹಿ ಸಿದ್ದ ನಿತ್ಯ ಬಳಕೆ ವಸ್ತುಗಳು, ಅಡುಗೆ ಪದಾರ್ಥಗಳು ಹಾಗೂ…
ಸರಗೂರು, ಬಿದರಹಳ್ಳಿ ಸಂತ್ರಸ್ತರಿಗೆ ಶಾಸಕ ರಾಮದಾಸ್ರಿಂದ ಸಾಮಗ್ರಿ ವಿತರಣೆ
August 12, 2019ಮೈಸೂರು,ಆ.11(ಪಿಎಂ)-ಜಿಲ್ಲೆಯ ಸರಗೂರು ಹಾಗೂ ಬಿದರಹಳ್ಳಿಯ ಪ್ರವಾಹ ಸಂತ್ರಸ್ತರ ಕೇಂದ್ರಗಳಲ್ಲಿ ಮೈಸೂರಿನ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಭಾನುವಾರ ವಿತರಿಸಲಾಯಿತು. ಲೆಟ್ಸ್ ಡು ಇಟ್, ಜಿಎಸ್ಎಸ್ ಫೌಂಡೇ ಷನ್, ಆಸರೆ ಫೌಂಡೇಷನ್ ಸಂಯುಕ್ತಾ ಶ್ರಯದಲ್ಲಿ ದಾನಿಗಳಿಂದ ಸಂಗ್ರಹಿಸಿದ್ದ 2 ಸಾವಿರ ರಗ್ಗುಗಳು, 25 ಕೆಜಿಯ 25 ಅಕ್ಕಿ ಪೊಟ್ಟಣಗಳು ಸೇರಿದಂತೆ ಕಂಬಳಿ ಗಳು, ಲುಂಗಿ, ಟವಲ್, ಟೂತ್ ಪೇಸ್ಟ್, ಟೂತ್ ಬ್ರಷ್, ಸಾಬೂನು, ಚಪ್ಪಲಿ, ಸೊಳ್ಳೆ ಬತ್ತಿ, ಬಿಸ್ಕತ್, ಜ್ಯೂಸ್, ಹಾಲು, ಹಣ್ಣು…
ತ್ವರಿತವಾಗಿ ನೆರೆ ಪರಿಹಾರ ಕೈಗೊಳ್ಳುವಂತೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ
August 12, 2019ಮೈಸೂರು,ಆ.11(ಎಂಟಿವೈ)-ಮೈಸೂರು-ಚಾಮರಾಜನಗರ ಜಿಲ್ಲೆ ಸೇರಿ ದಂತೆ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ನೆರವು ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟಿಸಿದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮೈಸೂರಿಗೆ ಆಗಮಿ ಸಿದ ವಾಟಾಳ್ ನಾಗರಾಜ್ ರೈಲ್ವೆ ನಿಲ್ದಾ ಣದ ಮುಂಭಾಗದಲ್ಲಿ ಸ್ಥಳೀಯರೊಂದಿಗೆ ಸೇರಿ ಪ್ರತಿಭಟಿಸಿ, ನೆರೆ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳು ನೆರೆ…
ಕಿಟಕಿ ರಾಡು ಮುರಿದು ಮನೆಗಳ್ಳತನ
August 12, 2019ಮೈಸೂರು,ಆ.11(ಎಸ್ಬಿಡಿ)-ಕಿಟಕಿಯ ಕಬ್ಬಿಣದ ರಾಡು ಮುರಿದು ಮನೆ ಯೊಳಗೆ ನುಗ್ಗಿರುವ ಖದೀಮರು, ಚಿನ್ನಾಭರಣ, ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನ ದಟ್ಟಗಳ್ಳಿಯಲ್ಲಿ ನಡೆದಿದೆ. ದಟ್ಟಗಳ್ಳಿ 3ನೇ ಹಂತದ ವೆಂಕಟೇಶ್ ಎಂಬುವರ ಮನೆಗೆ ನುಗ್ಗಿರುವ ಕಳ್ಳರು, ಸುಮಾರು 20ಗ್ರಾಂ ಚಿನ್ನಾಭರಣ, 50 ಸಾವಿರ ನಗದು, ರೇಷ್ಮೆ ಸೀರೆ, ಎಲ್ಇಡಿ ಟಿವಿ, ಮೊಬೈಲ್ ಇನ್ನಿ ತರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯವರೆಲ್ಲಾ ಜೆ.ಪಿ. ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು….
ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ
August 11, 2019ಮಡಿಕೇರಿ, ಆ.10- ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.10ರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಘೋಷಣೆ ಮಾಡಲಾಗಿದ್ದ “ರೆಡ್ ಅಲರ್ಟ್” ಅನ್ನು ಮುಂದುವರೆಸಿದ್ದು, ಭಾರೀ ಮಳೆಯಿಂದಾಗಿ ಕ್ಷಣದಿಂದ ಕ್ಷಣಕ್ಕೆ ಕಾವೇರಿ ತವರಿನ ಪರಿಸ್ಥಿತಿ ಸಂಪೂರ್ಣ ವಿಷಮಕ್ಕೆ ತಿರುಗುತ್ತಿದ್ದು, ರಕ್ಷಣಾ ಕಾರ್ಯನಿರತ ಸಿಬ್ಬಂದಿಗಳೇ ಕಂಗಾಲಾಗಿದ್ದಾರೆ. ವಿರಾಜಪೇಟೆ, ಭಾಗಮಂಡಲ, ನಾಪೋಕ್ಲು ಪ್ರದೇಶ ಗಳಲ್ಲಿ ಭಾರೀ ಗಾಳಿ ಮಳೆ ಸಹಿತ ಭೂ ಕುಸಿತದ ಎಲ್ಲಾ ಸಾಧ್ಯತೆಗಳಿದ್ದು ಅಲ್ಲಿನ ನಿವಾಸಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು…
ಕೆಆರ್ಎಸ್ನಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
August 11, 2019ಶ್ರೀರಂಗಪಟ್ಟಣ, ಆ.10(ವಿನಯ್ ಕಾರೇಕುರ)- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೆಆರ್ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ 1.58ಲಕ್ಷ ಕ್ಯೂಸೆಕ್ಗೂ ಅಧಿಕವಾಗಿದ್ದು, ಶನಿವಾರ ರಾತ್ರಿ 9 ಗಂಟೆಯಿಂದ ಜಲಾಶಯದ 34 ಗೇಟ್ಗಳಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತಗೊಳಿ ಸಲಾಗಿತ್ತು. ಜು. 19ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ 15 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಪ್ರವಾಹದ ಕಾರಣದಿಂದಾಗಿ ಈಗ ಮತ್ತೆ…
ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ
August 11, 2019ಹನೂರು, ಆ.10 (ಸೋಮ)- ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಂದ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಕರ್ನಾಟಕ ಗಡಿಯಂಚಿನ ಹೊಗೇನಕಲ್ ಜಲಪಾತದ ಬಳಿ ಕಾವೇರಿ ನದಿ ಭೋರ್ಗರೆಯುತ್ತಿರುವ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಪ್ರವೇಶವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಿಷೇಧಿಸಿದೆ. ಕೇರಳದ ವೈನಾಡು ಹಾಗೂ ಮಡಿಕೇರಿ ಸೇರಿದಂತೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ, ಕೆಆರ್ಎಸ್ ಜಲಾಶಯಗಳಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿ ರುವ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಗೋಪಿನಾಥಂ ಬಳಿಯ ಗಡಿಯಂಚಿನ ಹೊಗೇನಕಲ್…










