ಮೈಸೂರು, ಡಿ.29(ಆರ್ಕೆಬಿ)- ಪೇಜಾ ವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿ ಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾ ಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಕಲಾಮಂದಿರ ದಲ್ಲಿ ಮೊದಲಿಗೆ ಕೃಷ್ಣೈಕ್ಯರಾದ ಪೇಜಾ ವರ ಶ್ರೀಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಉಪಮೇಯರ್ ಶಫೀ ಅಹಮದ್, ಬರಹಗಾರ ಗುಬ್ಬಿಗೂಡು ರಮೇಶ್, ಕನ್ನಡ ಮತ್ತು ಸಂಸ್ಕøತಿ…
ಕೆಎಸ್ಆರ್ಟಿಸಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ
December 30, 2019ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರಾಗುವುದು ಹಕ್ಕು ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ವೈ ವಿಜಯೇಂದ್ರ ನಂಜನಗೂಡು, ಡಿ.29(ರವಿ)-ಕೋಟ್ಯಾಂತರ ಜನರಿಗೆ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಇದುವರೆಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸದಿರುವುದು ವಿರ್ಯಾಸ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂಬುದು ನಿಮ್ಮ ಬೇಡಿಕೆಯಾಗಬಾರದು ಅದು ನಿಮ್ಮ ಹಕ್ಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ತಾಲೂಕು ಶ್ರೀಕ್ಷೇತ್ರ ಸುತ್ತೂರಿನ ಶ್ರೀ ಸಿದ್ದನಂಜ ದೇಶೀಕೇಂದ್ರ ಮಂಗಳ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ರಸ್ತೆ…
ಶೋಷಿತ ಸಮಾಜದ ಹರಿಕಾರರ ಕನಕದಾಸರು
December 30, 2019ಪಿರಿಯಾಪಟ್ಟಣ,ಡಿ.29(ವೀರೇಶ್)-ತಳ ಸಮಾಜದಿಂದ ಬಂದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಶೋಷಿತ ಸಮಾಜದ ಏಳ್ಗೆಗೆ ಶ್ರಮಿಸಿದರು ಎಂದು ಚಿಂತಕ ನಿಖಿತ್ ರಾಜ್ ತಿಳಿಸಿದರು.ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 532ನೇ ಕನಕ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ತಮ್ಮ ದಾಸ ಸಾಹಿತ್ಯದಲ್ಲಿ ಹೊಲದಲ್ಲಿ ದುಡಿಯುವವನೇ ಶ್ರೇಷ್ಠ ಎಂಬ ಸಂದೇಶ ಸಾರಿದ ಮಹಾನ್ ಸಂತ ಕನಕದಾಸರು. ಸಮಾಜದ ಶೋಷಿತ ವರ್ಗದ ಪರವಾಗಿ ಬಂಡಾಯದ ಧ್ವನಿಯಾಗಿದ್ದರು. ಮನುಕುಲಕ್ಕೆ ಕ್ರಾಂತಿ ಕಾರಕ ಸಂದೇಶ ಸಾರಿದರು ಎಂದು ಬಣ್ಣಿಸಿದರು. ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣ,…
ಬೆಟ್ಟದಪುರದಲ್ಲಿ ಕುವೆಂಪು ಜನ್ಮದಿನಾಚರಣೆ
December 30, 2019ಬೆಟ್ಟದಪುರ, ಡಿ.29-ಕುವೆಂಪು 20ನೇ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ ಅವರ ಆದರ್ಶಗಳು ನಮಗೆ ಮುಂದಿನ ಬದುಕಿಗೆ ದಾರಿ ದೀಪವಾಗಲಿ ಎಂದು ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಶುಂಪಾಲ ರೇವಣ್ಣ ತಿಳಿಸಿದರು. ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಮಗು ಹುಟ್ಟುತ್ತಲೇ ವಿಶ್ವ ಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ. ಅವನನ್ನು ಮತ್ತೆ ವಿಶ್ವಮಾನವನಾಗಿಸುವುದೇ ನಮ್ಮೆಲ್ಲರ ಕರ್ತವ್ಯ ಎಂಬ…
ಸರ್ವರನ್ನು ಸಮಾನದಿಂದ ಕಾಣುವ ವಾಟಾಳು ಶ್ರೀಗಳು
December 30, 2019ತಿ.ನರಸೀಪುರ, ಡಿ.29(ಎಸ್ಕೆ)-ಸರ್ವ ಧರ್ಮ ಹಾಗೂ ಸಮುದಾಯವನ್ನು ಸಮಾನ ಭಾವದಿಂದ ಕಾಣುವಂತಹ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಕೋಮು ಸೌಹಾರ್ದತೆಯ ಸಂಕೇತವಾಗಿ ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಶಾಸಕ ಎಂ.ಅಶ್ವಿನ್ಕುಮಾರ್ ಹೇಳಿದರು. ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ ಜನ್ಮ ದಿನೋತ್ಸವ ಹಾಗೂ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ದಶಕಗಳಿಂದಲೂ ವಾಟಾಳು ಗ್ರಾಮದಲ್ಲಿರುವ ಸೂರ್ಯ ಸಿಂಹಾಸನ ಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಸಿದ್ಧಲಿಂಗ ಶಿವಾಚಾರ್ಯ…
ಮೈಸೂರಲ್ಲಿ ಮುಂಬೈ ದಂಪತಿ ಸಾಕುನಾಯಿಗಳ ಕಳವು
December 29, 2019ಮೈಸೂರು,ಡಿ.28(ಆರ್ಕೆ)- ಮುಂಬೈ ನಿಂದ ತಮ್ಮೊಂದಿಗೆ ಕರೆತಂದಿದ್ದ ದುಬಾರಿ ಸಾಕು ನಾಯಿ ಮರಿಗಳನ್ನು ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ. ಹೆಬ್ಬಾಳಿನ ಲೋಕನಾಯಕನಗರದ ಕಾವೇರಿ ಗ್ರಾಮೀಣ ಬ್ಯಾಂಕ್ ಹಿಂಭಾಗದ ಮನೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ಶೃತಿ ಮತ್ತು ವಿಶಾಲ್ ವಾಲಿಯಾ ಎಂಬುವ ರಿಗೆ ಸೇರಿದ ಶಿಹ್ಟಿಝಡ್ಯು ತಳಿಯ 2 ನಾಯಿ ಮರಿಗಳನ್ನು ಖದೀಮರು ಕಳವು ಮಾಡಿದ್ದು, ಅದರ ದೃಶ್ಯಾವಳಿ ಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. 5 ದಿನಗಳ ರಜೆ ಕಳೆಯಲೆಂದು ಶೃತಿ ಮತ್ತು ವಿಶಾಲ್ ವಾಲಿಯಾ ಅವರು…
ವಾಹನಗಳ ನಿಯಮಬಾಹಿರ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ
December 29, 2019ಮೈಸೂರು, ಡಿ.28(ಆರ್ಕೆ)- ವಾಹನಗಳಲ್ಲಿ ನಿಯಮಬಾಹಿರ ವಾಗಿ ಅಳವಡಿಸಿಕೊಂಡಿರುವ ನಂಬರ್ ಪ್ಲೇಟ್ಗಳನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ಆರ್ಟಿಓ ಕಚೇರಿ ಅಧಿಕಾರಿ ಗಳು ಮೈಸೂರಲ್ಲಿ ಆರಂಭಿಸಿದ್ದಾರೆ. ನಂಬರ್ ಪ್ಲೇಟ್ ಮೇಲಿನ ಲೋಗೋ, ಚಿಹ್ನೆಗಳನ್ನು ತೆಗೆದು ನಿಯಮಾನುಸಾರ ವಾಹನಗಳಿಗೆ ನೋಂದಣಿ ಸಂಖ್ಯೆಗಳನ್ನು ಹಾಕಿಸಿಕೊಳ್ಳಬೇಕೆಂದು ಆರ್ಟಿಓ ಇನ್ಸ್ಪೆಕ್ಟರ್ಗಳು ವಾಹನ ಮಾಲೀಕರಿಗೆ ಸಲಹೆ ನೀಡುತ್ತಿದ್ದಾರೆ. ನಂಬರ್ ಪ್ಲೇಟ್ಗಳಲ್ಲಿ ಹೆಸರು, ಸಂಘ-ಸಂಸ್ಥೆಗಳ ಚಿಹ್ನೆ, ಬೇರೆ ಬೇರೆ ಚಿತ್ರಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಎಚ್ಚರಿಸಿರುವುದರಿಂದ ತಾವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರ್ಟಿಓ ಇನ್ಸ್ಪೆಕ್ಟರ್ ಸುರೇಶ್ ತಿಳಿಸಿದ್ದಾರೆ….
ಮೈಸೂರಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ
December 29, 2019ಮೈಸೂರು, ಡಿ.28(ಎಂಟಿವೈ)- ಮೈಸೂರು ಪುರಭವ ನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯ ಕರ್ತರು ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಿದರು. ಇದುವರೆಗೂ ಕಾಂಗ್ರೆಸ್ ಕಚೇರಿಯಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸುವ ಪದ್ಧತಿ ರೂಢಿಸಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಈ ಬಾರಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಮೆ ಮುಂಭಾಗ ಕುಳಿತಿದ್ದ ಪಕ್ಷದ ಮುಖಂಡರು, ಕಾಂಗ್ರೆಸ್ ಕಟ್ಟಲು ಮಹಾತ್ಮಗಾಂಧಿ, ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ…
ಕಠಿಣ ಪರಿಶ್ರಮ, ಶ್ರದ್ಧೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ
December 29, 2019ಮೈಸೂರು, ಡಿ.28(ಎಂಟಿವೈ)- ಕಠಿಣ ಪರಿಶ್ರಮ, ಬದ್ಧತೆ ಹಾಗೂ ಶ್ರದ್ಧೆ ಮೂಲಕ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದು ಉಪ ಲೋಕಾ ಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ 12ನೇ ಪದವೀಧರರ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಯಕ್ತಿವಾಗಿ ಸಾಧನೆ ಮಾಡುವತ್ತ ಗಮನ ಹರಿಸಬೇಕು. ಜೀವನದಲ್ಲಿ ಉತ್ತಮ ಮೌಲ್ಯ, ನೈತಿಕತೆ ಅಳವಡಿಸಿಕೊಂಡರೆ ನಿಮ್ಮ ಕಡೆಗೆ ಯಾರೂ ಬೊಟ್ಟು ಮಾಡುವುದಿಲ್ಲ. ಆ ಗುಣ ಇಲ್ಲದಿದ್ದರೆ…
ಕನಕಪುರ ಬಳಿ ಯೇಸು ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿದ್ದ ಭೂಮಿ ಮಂಜೂರಾತಿ ರದ್ದಿಗೆ ಸರ್ಕಾರ ನಿರ್ಧಾರ
December 29, 2019ಬೆಂಗಳೂರು,ಡಿ.28(ಕೆಎಂಶಿ)- ವಿಶ್ವದಲ್ಲೇ ಅತೀ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಕ್ಕಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೀಡಿದ್ದ ಭೂಮಿಯ ಮಂಜೂರಾತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ನಲ್ಲಹಳ್ಳಿ ಸರ್ವೆ ನಂ.283ರಲ್ಲಿರುವ 231.35 ಎಕರೆ ಗೋಮಾ ಳದ ಪೈಕಿ 10 ಎಕರೆಯನ್ನು ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಜೂರು ಮಾಡಿತ್ತು. ಇಲ್ಲಿ ಪ್ರತೀ ಎಕರೆಗೆ 30 ಲಕ್ಷ ರೂ. ಮೌಲ್ಯವಿದ್ದು, 10 ಎಕರೆಗೆ 30 ಕೋಟಿ…










