ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು. `ಬಾಗಿ’ ಚಿತ್ರದ `ಸಬ್ತೆರಾ…’, `ಎಂ.ಎಸ್.ಧೋನಿ ದಿ ಅನ್ಟೋಲ್ಡ್…
ಮೈಸೂರು ಕಾಂಗ್ರೆಸ್ನಿಂದ ದಸರಾ ಬಹಿಷ್ಕಾರ
October 15, 2018ಮೈಸೂರು: ಈ ಬಾರಿ ದಸರಾ ಮಹೋತ್ಸವವನ್ನು ನಾವು ಬಹಿಷ್ಕರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು. ಮೈಸೂರು ದಸರಾ ಸಾಂಸ್ಕೃತಿಕ ಮೆರವಣಿಗೆ ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದ ಡಾ.ಜಿ.ಪರಮೇಶ್ವರ್ ಇಂದು ಮಧ್ಯಾಹ್ನ 1.30ರ ವೇಳೆಯಲ್ಲಿ ಸರ್ಕಾರಿ ಅತಿಥಿ ಗೃಹ ದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಈ ಬಾರಿ ದಸರಾದಲ್ಲಿ ನಮ್ಮನ್ನು (ಕಾಂಗ್ರೆ ಸ್ಸಿಗರು) ಕಡೆಗಣಿಸಲಾಗಿದೆ….
ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ
October 15, 2018ಮೈಸೂರು: ಬಾನಂಗಳದಲ್ಲಿ ಭಾಸ್ಕರನ ಆಗಮನದ ಕ್ಷಣಗಳ ಮುಸು ಕಿನ ಮುಂಜಾನೆಯಲ್ಲಿ ಯೋಗದ ಸುಯೋಗದಲ್ಲಿ ನೂರಾರು ಮಂದಿ ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಭಾನು ವಾರ ಅರಮನೆಯ ಅಂಗಳದಲ್ಲಿ ಏರ್ಪಡಿಸಿದ್ದ ದಸರಾ ಯೋಗೋತ್ಸವದಲ್ಲಿ ಈ ದೃಶ್ಯಾವಳಿ ಮನಸೂರೆಗೊಂಡಿತು. ನೂರಾರು ಯೋಗಪಟುಗಳನ್ನು ಒಳಗೊಂಡ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಯೋಗ ಭಂಗಿಯಲ್ಲಿ ತಲ್ಲೀನರಾಗಿ ಗಮನ ಸೆಳೆದರು….
ದಸರಾ ವಿಶೇಷ: ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ
October 15, 2018ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಹಾಗೂ ವಿಶೇಷ ಚೇತನರು ಪಾಲ್ಗೊಂಡು ಗಮನ ಸೆಳೆದರು. 9 ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆಯಾಗಿ ಸುಮಾರು 800 ಯೋಗಪಟುಗಳು ಭಾಗವಹಿಸಿದ್ದರು. ಮೈಸೂರು ರಾಮಕೃಷ್ಣನಗರದ ನಿರೀಕ್ಷೆ ಶಾಲೆಯ ವಿಶೇಷ…
ನೆರೆದವರ ಮೂಕ ವಿಸ್ಮಿತಗೊಳಿಸಿದ ಅಂಧ ಮಕ್ಕಳ ಯೋಗ ಪ್ರದರ್ಶನ
October 15, 2018ಮೈಸೂರು: ಅಂಧ ತನವಿದ್ದರೇನು, ಅಂತರಂಗದ ಕಣ್ಣುಗಳ ಪ್ರಖರತೆಯ ಶಕ್ತಿಯಿಂದ ಆ ವಿಶೇಷ ಮಕ್ಕಳು ದಸರಾ ಯೋಗೋತ್ಸವದಲ್ಲಿ ಯಾವುದೇ ಆಯಾಸ, ಅಡ್ಡಿ-ಆತಂಕ ವಿಲ್ಲದೆ, ನಿರರ್ಗಳವಾಗಿ ಕಠಿಣ ಯೋಗಾ ಸನದ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೆರೆದವರಲ್ಲಿ ಅಚ್ಚರಿ ಮೂಡಿಸಿ ರೋಮಾಂಚನಗೊಳಿಸಿದರು. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ-ಆಲೂರ ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂತಹ ರೋಚಕ ಕ್ಷಣಗಳನ್ನು ಅನಾವರಣಗೊಳಿಸಿದರು. ಯೋಗೋತ್ಸವದಲ್ಲಿದ್ದ ಎಲ್ಲಾ ಆಸನ ಗಳನ್ನು ಯಾವುದೇ ಅಡ್ಡಿ ಇಲ್ಲದಂತೆ ಪ್ರದರ್ಶಿಸಿ, ಅಚ್ಚರಿ ಮೂಡಿಸಿದರು. ಪತ್ರಿಕೆಯೊಂದಿಗೆ…
ದಸರಾ ಮ್ಯಾರಥಾನ್ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ
October 15, 2018ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ (ದಸರಾ ಓಟ ಸ್ಪರ್ಧೆ)ನಲ್ಲಿ ಸಾವಿರಾರು ಮಂದಿ ಓಡುವ ಮೂಲಕ ಓಟದಿಂದ ಆರೋಗ್ಯ ವೃದ್ಧಿ ಎಂದು ಸಾರಿದರು. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಕ್ರೀಡಾಂಗಣ ಬಳಿ ಯುವರಾಜ ಕಾಲೇಜು ಬಳಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಹಸಿರು ನಿಶಾನೆ ತೋರಿಸಿ ದಸರಾ ಓಟ ಸ್ಪರ್ಧೆಗೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ…
ಓಪನ್ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಯುವ ಸಮುದಾಯದ ದರ್ಬಾರ್
October 14, 2018ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಓಪನ್ ಸ್ಟ್ರೀಟ್ ಫೆಸ್ಟಿವಲ್’ನಲ್ಲಿ ಯುವ ಸಮುದಾಯದ್ದು ಸಂಭ್ರಮವೋ ಸಂಭ್ರಮ. ಈ ರಸ್ತೆಯಲ್ಲಿ ಪಾಶ್ಚಿಮಾತ್ಯ ಸಂಪ್ರದಾಯದ ಡಿಜೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಯು ಅನಾವರಣಗೊಂಡು ಮೈಸೂರಿಗರು ಮಾತ್ರ ವಲ್ಲದೆ, ಪ್ರವಾಸಿಗರನ್ನು ಮುದಗೊಳಿಸಿತು. ಇಂದು ಬೆಳಿಗ್ಗೆ 7 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆರಂಭವಾಯಿತಾದರೂ ಬೆಳಿಗ್ಗೆ 11 ಗಂಟೆಯ ನಂತರ ಸಂಪೂರ್ಣ ಕಳೆ ಕಟ್ಟಿತು. ಈ ರಸ್ತೆಯಲ್ಲಿ ಸೂಕ್ತ ಬೀದಿ ದೀಪ ವ್ಯವಸ್ಥೆ…
ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ
October 14, 2018ಮೈಸೂರು: ಬಾಲಿವುಡ್ ಗಾಯಕರಾದ ಬಾದ್ಶಾ, ಅಸ್ಥ ಗಿಲ್ ಹಾಗೂ ವಿವಿಧ ತಂಡ ಗಳ ಸಂಗೀತ ಝೇಂಕಾರ ಯುವ ದಸರಾದ ರಂಗು ಹೆಚ್ಚಿಸಿತ್ತು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ 2ನೇ ದಿನವಾದ ಶನಿವಾರ, ಪ್ರೇಕ್ಷಕರು ಕಿಕ್ಕಿರಿದಿದ್ದರು. ಮೈದಾನ ತುಂಬಿ, ಸುತ್ತಮುತ್ತಲಿನ ಸ್ಥಳಗಳಲ್ಲೂ ನಿಂತು ಕಾರ್ಯಕ್ರಮ ಸವಿದರು. ಬಾದ್ಶಾ ಹಾಗೂ ಅಸ್ಥ ಗಿಲ್ ಅವರ ಕಾರ್ಯಕ್ರಮ ತಡವಾಗಿ ಆರಂಭ ವಾದರೂ ಪ್ರೇಕ್ಷಕರು ಎತ್ತಲೂ ಕದಲದೆ ಕಾದು ಕುಳಿತಿದ್ದರು. ರಾತ್ರಿ ಸುಮಾರು 10 ಗಂಟೆಗೆ ವೇದಿಕೆ ಏರಿದ ಇವರು,…
ಇಂದು ದಸರಾ ಸಾಂಸ್ಕøತಿಕ ಮೆರವಣಿಗೆ
October 14, 2018ಮೈಸೂರು: ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಸಾಂಸ್ಕøತಿಕ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಅ.14ರಂದು ಮಧ್ಯಾಹ್ನ 2ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು.ಈ ಭವ್ಯ ಸಾಂಸ್ಕøತಿಕ ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸುವರು. ಈ ಮೆರ ವಣಿಗೆಯಲ್ಲಿ ಆನೆಗಳು ಸೇರಿದಂತೆ ಹಲವು ಪ್ರಕಾರದ ಕಲಾ ಮತ್ತು ಜನಪದ ನೃತ್ಯ ತಂಡಗಳು, ಯುವ…
ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು
October 14, 2018ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹುಣಸೂರು ತಾಲೂಕಿನ ರೈತರು ಹೆಚ್ಚಿನ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ನೇತೃತ್ವದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ರೈತ ಪುರುಷರು, ಮಹಿಳೆಯರು ಗೆಲ್ಲಲೇಬೇಕೆಂಬ ಹಠದಲ್ಲಿ ಓಡಿದರು, ಬಿದ್ದು ಮತ್ತೆ ಎದ್ದು ಓಡಿದರು. 50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಸ್ಪರ್ಧಿಯೊಬ್ಬರು…