ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಆಂತರಿಕ ಕಲಹದಿಂದಾಗಿ ಈ ಬಾರಿ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಕರ್ನಾಟಕದ ಪೊಲೀಸ್ ಇಲಾಖೆಯ ಯಾವೊಬ್ಬ ಅಧಿಕಾರಿ, ಸಿಬ್ಬಂದಿಗೂ ಲಭಿಸದಂತಾಗಿದೆ. ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿ ವರ್ಷವೂ ಪೆÇಲೀಸ್ ಮತ್ತು ದೇಶದ ವಿವಿಧ ಭದ್ರತಾ ಪಡೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಪತಿ ಪದಕವನ್ನು ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಡೆಯುತ್ತಿದ್ದರು. ಹಿರಿಯ ಐಪಿಎಸ್ ಅಧಿಕಾರಿ ಯೊಬ್ಬರು ತಮ್ಮನ್ನು ಪುರಸ್ಕಾರಕ್ಕೆ ಪರಿಗಣಿಸಿಲ್ಲ ಎಂದು ಸಿಎಟಿಯಲ್ಲಿ ತಕರಾರು…
ಮೈಸೂರು ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ
January 26, 2019ಮೈಸೂರು: ನಗರದ ನೂತನ ಪೊಲೀಸ್ ಆಯಕ್ತರಾಗಿ ಕೆ.ಟಿ. ಬಾಲಕೃಷ್ಣ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಡಾ. ಸುಬ್ರಹ್ಮಣೇ ಶ್ವರರಾವ್ ಅವರು ಕೆ.ಟಿ.ಬಾಲ ಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರು ಗುಪ್ತಚರ(ಆಡಳಿತ) ವಿಭಾ ಗದ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಅವರಿಗೆ ಡಿಐಜಿಪಿ ದರ್ಜೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು. ಕೆ.ಟಿ.ಬಾಲಕೃಷ್ಣ ಅವರು ಈ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಮೂಲತಃ ಮೈಸೂರಿನವರೇ ಆಗಿದ್ದು, ಕಾರವಾರ, ಉಡುಪಿ, ಗದಗ…
ಅನಧಿಕೃತ ರೈಲ್ವೆ ಇ-ಟಿಕೆಟ್ ಮಾರಾಟ: ಇಬ್ಬರ ಬಂಧನ
January 26, 2019ಮೈಸೂರು: ಅನಧಿಕೃತವಾಗಿ ರೈಲ್ವೆ ಇ-ಟಿಕೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಮೈಸೂರಿನ ವಿಜಯ ನಗರದಲ್ಲಿ ಟೀ ಅಂಗಡಿ ನಡೆಸುತ್ತಿರುವ ಶರ್ವನ್ ಸಿಂಗ್ ಹಾಗೂ ಶಿವರಾಂಪೇಟೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಮೂಲರಾಂ ಬಂಧಿ ತರು. ಇವರು ಐಆರ್ಸಿಟಿಸಿಯಲ್ಲಿ ಪ್ರತ್ಯೇಕ ಅಕೌಂಟ್ ತೆರೆದು, ಸಂಬಂಧಿಕರ ಹೆಸರಿನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿ, ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ರೈಲ್ವೆ ರಕ್ಷಣಾ ದಳ, ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ….
ಮಹಿಳೆಯರ ಸಾಧನೆಗಳತ್ತ ಬೆಳಕು ಚೆಲ್ಲಿದ ಕನ್ನಡ ನುಡಿಹಬ್ಬ
January 26, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ವಿಜೃಂಭಣೆ ಯಿಂದ ನಡೆದ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ನೆಲೆ ಯಲ್ಲಿ ಮಹಿಳೆಯರು, ಸಬಲೀಕರಣ-ಸವಾಲು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯ ಬಗ್ಗೆ ಬೆಳಕು ಚೆಲ್ಲಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಂಚಿ ಹೊನ್ನಮ್ಮ ಸಭಾಂಗಣದ ಕಾದಂಬರಿಕಾರ್ತಿ ತ್ರಿವೇಣಿ ವೇದಿಕೆಯಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಸೀರೆ ಸೇರಿದಂತೆ ಸಾಂಪ್ರ ದಾಯಿಕ ಉಡುಗೆ…
ನರೇಗಾದಡಿ ಮತ್ತಷ್ಟು ಕಾಮಗಾರಿ ಕೈಗೆತ್ತಿಕೊಂಡು ಅಧಿಕ ಉದ್ಯೋಗ ಕಲ್ಪಿಸಲು ಸಚಿವ ಕೃಷ್ಣ ಭೈರೇಗೌಡ ಸೂಚನೆ
January 26, 2019ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಉದ್ಯೋಗ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿ ಗಳಿಗೆ ಸೂಚಿಸಿದರು. ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಬರ ಅಧ್ಯಯನ, ನಿರ್ವಹಣೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಎರಡು ಜಿಲ್ಲೆಗಳಲ್ಲಿ ನರೇಗಾ ಪ್ರಗತಿ ತೃಪ್ತಿಕರವಾಗಿಲ್ಲ. ಇಲ್ಲಿನ ಅಧಿಕಾರಿ ಗಳ ಮನೋಧೋರಣೆ…
ಮೈಸೂರಲ್ಲಿ ವಿದ್ಯಾರ್ಥಿಗಳ ಸ್ಥೈರ್ಯ ಹೆಚ್ಚಿಸಿದ `ಪರೀಕ್ಷೆಯಲ್ಲ.. ಹಬ್ಬ’ ಕಾರ್ಯಕ್ರಮ
January 26, 2019ಮೈಸೂರು: ನಾವು ಧೈರ್ಯದಿಂದ ಪರೀಕ್ಷೆ ಎದುರಿಸಿ ಎಸ್ಎಸ್ ಎಲ್ಸಿಯಲ್ಲಿ ಟಾಪರ್ ಆಗುತ್ತೇವೆಂದು ಶುಕ್ರವಾರ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ 1280 ವಿದ್ಯಾರ್ಥಿಗಳು ಸಂಕಲ್ಪ ತೊಟ್ಟಿದ್ದಾರೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಕಲ್ಪನೆಯ `ಪರೀಕ್ಷೆಯ.. ಹಬ್ಬ’ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಉತ್ತಮೀಕರಣಕ್ಕಾಗಿ ಪ್ರೇರೇಪಣಾ ಕಾರ್ಯ ಕ್ರಮದಲ್ಲಿ ಮೈಸೂರಿನ 80ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆಗಳ 1280 ವಿದ್ಯಾರ್ಥಿಗಳು ಭಾಗವಹಿಸಿ, ಎಸ್ಎಸ್ ಎಲ್ಸಿ ಪರೀಕ್ಷೆ ಎದುರಿಸುವ ಬಗ್ಗೆ ಇದ್ದ ಭಯ, ಆತಂಕದಿಂದ ದೂರವಾದರು. ಬೆಳಿಗ್ಗೆ 654 ಹಾಗೂ…
`ಪರೀಕ್ಷಾ ಪೆ ಚರ್ಚೆ’ಗೆ ಚೇತನ ಮಾಲಂಗಿ ಸುರೇಶ್ ಆಯ್ಕೆ
January 26, 2019ಮೈಸೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನಡೆಸಲಿರುವ `ಪರೀಕ್ಷಾ ಪೇ ಚರ್ಚೆ’ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯಾದ ಚೇತನ ಮಾಲಂಗಿ ಸುರೇಶ್ ಆಯ್ಕೆಯಾಗಿದ್ದಾರೆ. ರಾಘವೇಂದ್ರ ನಗರದ ನಿವಾಸಿಗಳಾದ ಶಿಕ್ಷಕರಾದ ಮಾಲಂಗಿ ಸುರೇಶ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾದ ಇವರು, ಜೆಎಸ್ಎಸ್ ಫಾರ್ಮಸಿ ಕಾಲೇಜಿನ ದ್ವಿತೀಯ ವರ್ಷದ ಡಾಕ್ಟರ್ ಫಾರ್ಮಸಿ ವಿದ್ಯಾರ್ಥಿನಿ ಯಾಗಿದ್ದಾರೆ.ಜ.29ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಮಂತ್ರಿ ಗಳೊಡನೆ ಸಂವಾದ ನಡೆಸಲಿದ್ದಾರೆ.
ಜ.28ಕ್ಕೆ ಮೈಸೂರಿನಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ 120ನೇ ಜನ್ಮದಿನಾಚರಣೆ
January 26, 2019ಮೈಸೂರು: ದೇಶದ ಪ್ರಥಮ ಸೇನಾ ಮುಖ್ಯಸ್ಥರಾದ ಪೀಲ್ಡ್ ಮಾರ್ಷಲ್ ಕೊದಂಡೇರ ಎಂ.ಕಾರ್ಯಪ್ಪ (ಕೆ.ಎಂ. ಕಾರ್ಯಪ್ಪ) ಅವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಕೊಡವ ಸಮಾಜ ಜ.28ರಂದು ಹಮ್ಮಿಕೊಂಡಿದೆ. ನಗರದ ಫಿ.ಮಾ.ಕೆ.ಎಂ.ಕಾರ್ಯಪ್ಪ (ಮೆಟ್ರೊಪೋಲ್) ವೃತ್ತದಲ್ಲಿ ಸೋಮ ವಾರ ಬೆಳಿಗ್ಗೆ 9 ಗಂಟೆಗೆ ವೀರಸೇನಾನಿ, ಕೊಡಗಿನ ಸುಪುತ್ರನ ದೊಡ್ಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸ ಲಾಗುವುದು. ರಕ್ಷಣಾ ಪಡೆಯ ಸೇನಾನಿಗಳು, ಮಾಜಿ ಯೋಧರು, ಸಾರ್ವಜನಿಕರು ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು ಎಂದು ಕೊಡವ ಸಮಾಜದ…
ಮೈಸೂರು ರೈಲು ನಿಲ್ದಾಣದಲ್ಲಿ 17 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ ಗುದ್ದಲಿ ಪೂಜೆ
January 25, 2019ಮೈಸೂರು: ರೈಲ್ವೆ ಇಲಾಖೆಯು 17 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣದ ನವೀಕರಣಕ್ಕೆ ಮುಂದಾಗಿದೆ. ಸಂಸದ ಪ್ರತಾಪ್ಸಿಂಹ ಅವರು ಮೈಸೂರು ರೈಲು ನಿಲ್ದಾಣ ಪ್ರವೇಶ ದ್ವಾರದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ನಂತರ ನಿಲ್ದಾಣದ ಆವ ರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮೈಸೂರಿಗೆ ಪ್ರತೀ ದಿನ ಹೆಚ್ಚು ಜನ ಆಗಮಿಸುತ್ತಿದ್ದು, ಆ ಪೈಕಿ ರೈಲು ಬಳಕೆದಾರರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ….
ಸಾಫ್ಟ್ವೇರ್ ಮೇಲ್ದರ್ಜೆಗೆ: ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಪುನಾರಂಭ
January 25, 2019ಮೈಸೂರು: ಸಾಫ್ಟ್ವೇರ್ ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಮೈಸೂರಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಗುರುವಾರ ಪುನಾರಂಭಗೊಂಡಿತು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬಳಸಲಾಗುವ `ಕಾವೇರಿ’ ಸಾಫ್ಟ್ವೇರ್ ಮೇಲ್ದರ್ಜೆಗೇರಿಸುವ ಕಾರಣದಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತಗೊಂಡಿತ್ತು. ಅಂತೆಯೇ ಮೈಸೂರು, ಚಾಮರಾಜನಗರಗಳಲ್ಲೂ ಎರಡು ದಿನಗಳಿಂದ ಆಸ್ತಿ ನೋಂದಣಿ ಕಾರ್ಯ ನಡೆದಿರಲಿಲ್ಲ. ಸಾಕಷ್ಟು ಮಂದಿ ತಮ್ಮ ಆಸ್ತಿ ನೋಂದಣಿಗಾಗಿ ಪರದಾಡುವಂತಾಗಿತ್ತು. ಸೋಮವಾರ ಸಂಜೆ ಸಾಫ್ಟ್ವೇರ್ ಮೇಲ್ದರ್ಜೆಗೆ ಸಂಬಂಧಿಸಿದ ಸಿಡಿ ಬಿಡುಗಡೆಯಾಗಿತ್ತು. ಮಂಗಳವಾರ ಸಿದ್ಧಲಿಂಗ…