ಮೈಸೂರು: ಕರ್ನಾಟಕ ದಲ್ಲಿ ಅನಧಿಕೃತವಾಗಿ ವಿಎಫ್ಸಿ ತಂಬಾಕು ಬೆಳೆಯುತ್ತಿರುವ ಕೃಷಿಕರೆಲ್ಲರಿಗೂ ಅಧಿಕೃತ ಲೈಸೆನ್ಸ್ ನೀಡುವಂತೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಇದೇ ಡಿ.17ರಂದು ಕೇಂದ್ರ ವಾಣಿಜ್ಯ ಸಚಿವರನ್ನು ದೆಹಲಿಯ ಅವರ ಕಚೇರಿ ಯಲ್ಲಿ ಭೇಟಿ ಮಾಡಿದ ಸಂಸದರು, ನಾನು ಒಬ್ಬ ಸಂಸದನಾಗಿ `ಅಧಿಕೃತ’ ತಂಬಾಕು ಬೆಳೆಗಾರರನ್ನಷ್ಟೇ ಅಲ್ಲ, `ಅನಧಿಕೃತ’ ತಂಬಾಕು ಬೆಳೆಗಾರರನ್ನೂ ಪ್ರತಿನಿಧಿಸುತ್ತೇನೆ. ನನ್ನ ಕ್ಷೇತ್ರ ಸೇರಿದಂತೆ ಕರ್ನಾಟಕದಲ್ಲಿನ ಅನಧಿಕೃತ ತಂಬಾಕು ಬೆಳೆಗಾರರ ಸಂಖ್ಯೆ 26,019ರಷ್ಟಿದೆ….
ಕಾಳಮ್ಮ ಕೆಂಪರಾಮಯ್ಯಗೆ `ಬಯಸದೇ ಬಂದ ಭಾಗ್ಯ’!
December 20, 2018ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿ ಸಿದ್ದ ಜೆಡಿಎಸ್ಗೆ ತೀವ್ರ ಮುಖಭಂಗ ಉಂಟಾಗಿದ್ದು, ಸ್ವಪಕ್ಷ ಜೆಡಿಎಸ್ ವಿರುದ್ಧವೇ ಸೆಟೆದು ನಿಂತಿದ್ದ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ಮುಂದಿನ ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಮೈಸೂರು ತಾಲೂಕು ಪಂಚಾಯಿತಿ ಗದ್ದುಗೆ ಹಿಡಿ ದಿದ್ದ ಜೆಡಿಎಸ್ ಮೊದಲ ಅವಧಿಗೆ ಕಾಳಮ್ಮ ಕೆಂಪರಾಮಯ್ಯ ಅವರನ್ನು ಅಧ್ಯಕ್ಷೆಯಾಗಿ ಹಾಗೂ ಎನ್.ಬಿ.ಮಂಜು ಅವ ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. ಒಪ್ಪಂದ ಪ್ರಕಾರ 2016ರ ಮೇ 21ರಂದು ಅಧಿಕಾರದ ಚುಕ್ಕಾಣಿ…
ರಫೇಲ್ ವಿಚಾರದಲ್ಲಿ ಕೋರ್ಟ್ಗೆ ಕೇಂದ್ರದಿಂದ ಸುಳ್ಳು ಮಾಹಿತಿ ಕೇಂದ್ರ ಮಾಜಿ ಸಚಿವ ಎಂ.ಎಂ. ಪಲ್ಲಂರಾಜು ಆರೋಪ
December 20, 2018ಮೈಸೂರು: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ದೇಶದ ಜನತೆಯನ್ನು ದಿಕ್ಕು ತಪ್ಪಿಸುವ ಸಂಚು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಕಂಡು ಹಿಡಿಯಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಘಟಕದ ವಕ್ತಾರ ಎಂ.ಎಂ. ಪಲ್ಲಂರಾಜು ಒತ್ತಾಯಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸುಳ್ಳು ಮಾಹಿತಿಯುಳ್ಳ…
ಟಿಪ್ಪರ್ ಡಿಕ್ಕಿ: ಮೂವರ ಸಾವು
December 19, 2018ಮಂಡ್ಯ: ಶ್ರೀರಂಗಪಟ್ಟಣ ಹಾಗೂ ಮದ್ದೂರು ಸಮೀಪದ ಶಿವ ಪುರದ ಬಳಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಟಿಪ್ಪರ್ಗೆ ಮೂವರು ಬೈಕ್ ಸವಾರರು ಬಲಿಯಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸಂಭವಿ ಸಿದ ಅಪಘಾತದಲ್ಲಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಸಲ್ಮಾನ್(24) ಹಾಗೂ ಕೆಸರೆ ನಿವಾಸಿ ಇನಾಯತ್ (20), ಶಿವಪುರದ ಬಳಿ ನಡೆದ ಅಪಘಾತದಲ್ಲಿ ವಳಗೆರೆಹಳ್ಳಿ ಗ್ರಾಮದ ತೇಜೋಮೂರ್ತಿ(40) ಮೃತಪಟ್ಟಿದ್ದಾರೆ. ಘಟನೆ-1: ಶ್ರೀರಂಗಪಟ್ಟಣ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಹಾಗೂ ಇನಾಯತ್ ಮಂಗಳವಾರ ಮಧ್ಯಾಹ್ನ ಊಟಕ್ಕೆಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೆಎಸ್ಆರ್ಟಿಸಿ…
ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆಯ ಬದ್ಧತೆಗೆ ಪ್ರೇರಣೆ
December 19, 2018ಮೈಸೂರು: ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳುವ ಸಂಬಂಧ ಶಾಲಾ ವಿದ್ಯಾರ್ಥಿಗಳನ್ನು ತೊಡ ಗಿಸಲು ಮೈಸೂರು ಗ್ರಾಹಕರ ಪರಿಷತ್ತು (ಎಂಜಿಪಿ) `ಪರಿಸರ ಶಾಲಾ ವಾರ್ಡನ್’ ವಿನೂತನ ಯೋಜನೆಯನ್ನು ರೂಪಿಸಿದ್ದು, ಇದನ್ನು ಮೈಸೂರು ನಗರದ ವಿವಿಧ ಶಾಲೆ ಗಳಿಗೆ ಎಂಜಿಪಿ ಪರಿಚಯಿಸುತ್ತಿದೆ. ಶಾಲಾ ಮಕ್ಕಳು ಸೃಜನಾತ್ಮಕವಾಗಿ ಪರಿ ಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ತಮ್ಮದೇ ಆಲೋಚನೆಯಲ್ಲಿ ಪಾಲ್ಗೊಳ್ಳುವ ಎಂಜಿ ಪಿಯ ವಿಭಿನ್ನ ಪರಿಕಲ್ಪನೆಯ ಈ ಯೋಜ ನೆಗೆ ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ…
ಅವಘಡ ಬಳಿಕ ಬಿಕೋ ಎನ್ನುತ್ತಿರುವ ಒಂಟಿಕೊಪ್ಪಲು ಬಾಲಕಿಯರ ವಿದ್ಯಾರ್ಥಿನಿಲಯ
December 19, 2018ಮೈಸೂರು: ಸದಾ ವಿದ್ಯಾರ್ಥಿನಿಯರಿಂದ ಕಿಕ್ಕಿರಿದಿರುತ್ತಿದ್ದ ಮೈಸೂರಿನ ಒಂಟಿಕೊಪ್ಪಲಿನ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿನಿಲಯ ಇದೀಗ ವಿದ್ಯಾರ್ಥಿ ಗಳಿಲ್ಲದೆ ಭಣಗುಡುವಂತಾಗಿದೆ. ಹಾಸ್ಟೆಲ್ನ ಮೆಟ್ಟಿಲು ಕೆಳಗಿದ್ದ ಯುಪಿ ಎಸ್ನಲ್ಲಿ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಬರಿ ಗೊಂಡ ವಿದ್ಯಾರ್ಥಿನಿಯರು ಹೊರಬರುವ ವೇಳೆ ಉಂಟಾದ ನೂಕು ನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಶನಿ ವಾರ ರಾತ್ರಿಯ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದವರು ಹಾಗೂ ಗಾಯಗೊಂ ಡಿದ್ದ ವಿದ್ಯಾರ್ಥಿನಿಯರು ಭಾನುವಾರ ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಒಟ್ಟು 372…
ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ಕೆ ಮೇಯರ್ ಚಾಲನೆ
December 19, 2018ಮೈಸೂರು: ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಮಂಗಳವಾರ ಚಾಲನೆ ನೀಡಿ ದರು. ಮೈಸೂರಿನ ಕುಂಬಾರಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಕೇಂದ್ರದ ಆವ ರಣದಲ್ಲಿ ಮೈಸೂರು ಮಹಾನಗರಪಾಲಿಕೆ ಮತ್ತು ಐಪಿಸಿಎ, ರೆಕಿಟ್ ಬೆನ್ಕೈಸರ್ ಇಪಿಆರ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೆಕಿಟ್ ಬೆನ್ಕೈಸರ್ ಇಪಿಆರ್ ಮೈಸೂ ರಿನ ಪ್ಲಾಸ್ಟಿಕ್ ಕಸವನ್ನು ಪ್ರತಿ ಕೆಜಿಗೆ 3.5 ರೂ.ನಂತೆ ಖರೀದಿಸಿ, ಅದನ್ನು ವಿದ್ಯುತ್ ಉತ್ಪಾದನೆ ಮತ್ತು ಇತರೆ…
ಭಾವಸಾರ್ ವಿಷನ್ ಇಂಡಿಯಾ ಮೈಸೂರು ಘಟಕದ ಪದಗ್ರಹಣ
December 19, 2018ಮೈಸೂರು: ಭಾವಸಾರ್ ವಿಷನ್ ಇಂಡಿಯಾ (ಬಿವಿಐ)ದ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಮೈಸೂರಿನ ಪಾಂಡುರಂಗ ವಿಠಲ ದೇವಸ್ಥಾನದ ರಾಮಮಂದಿರ ಸಭಾಂಗಣದಲ್ಲಿ ನಡೆಯಿತು. ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಸಮ್ಮುಖದಲ್ಲಿ ಬಿವಿಐ 108ರ ಗವರ್ನರ್ ಮಲ್ಲಾರಿರಾವ್ ಕಾಂಗೋಕರ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಮಾತನಾಡಿ, 18 ವರ್ಷಗಳ ಹಿಂದೆ ಸ್ಥಾಪಿತವಾದ ಬಿವಿಐ ಹಿಂದುಳಿದ ಭಾವಸಾರ…
ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಪತಿ ಸಾವಿನ 3 ದಿನದ ನಂತರ ಪತ್ನಿ ಸಾವು
December 18, 2018ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದೆ. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮಹಿಳೆ ಇಂದು ಅಸುನೀಗಿದ್ದಾರೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥ ರಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೆಪೋದೆ (ಮಾರ್ಟಳ್ಳಿ) ಗ್ರಾಮದ ಮೈಲಿಬಾಯಿ (35) ಬಹು ಅಂಗಾಂಗ ವೈಫಲ್ಯ ದಿಂದ ಮೃತಪಟ್ಟರು. ಶುಕ್ರವಾರ ಮೈಸೂರಿಗೆ ಕರೆತಂದಿದ್ದಾಗ ಗಂಭೀರ ಸ್ಥಿತಿಯಲ್ಲಿದ್ದ ಮೈಲಿಬಾಯಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ…
ಕೇಂದ್ರದ ಹೊಸ ನಿಯಮಾವಳಿಗೆ ಕೇಬಲ್ ಟಿವಿ ಆಪರೇಟರ್ಸ್ ಆಕ್ರೋಶ
December 18, 2018ಮೈಸೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿ ಕಾರದ (ಟ್ರಾಯ್) ಮೂಲಕ ಅವೈಜ್ಞಾನಿಕ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಲು ಮುಂದಾಗಿದ್ದು, ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಕೇಬಲ್ ಟಿವಿ ಆಪ ರೇಟರ್ಸ್ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮೈಸೂರು ಜಿಲ್ಲಾ ನ್ಯಾಯಾಲಯದ ಎದು ರಿನ ಪಾರ್ಕ್ನಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ನೂರಾರು ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದ ಕೇಬಲ್ ಟಿವಿ ಆಪ…