ಮೈಸೂರು: ವಿದ್ಯಾರ್ಥಿ ಗಳಲ್ಲಿ ಮಾನವೀಯ ಮೌಲ್ಯ ಹಾಗೂ ಸೇವಾ ಮನೋಭಾವ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಪೂರಕವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ಎನ್ಎಸ್ಎಸ್ ಘಟಕ ಹಾಗೂ ವಿದ್ಯಾವರ್ಧಕ ಸಂಘದ ಶ್ರೀ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಜಂಟಿ ಆಶ್ರಯದಲ್ಲಿ ವಿವಿಯ ಎನ್ಎಸ್ಎಸ್ನ ಸುವರ್ಣ ಸಂಭ್ರಮದ ಅಂಗವಾಗಿ ಮೈಸೂರಿನ ಗೋಕುಲಂನಲ್ಲಿ ರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂ ಗಣದಲ್ಲಿ `ಎನ್ಎಸ್ಎಸ್ ಉದ್ದೇಶ, ಸಫಲತೆ ಮತ್ತು ಭವಿಷ್ಯದ…
ಮೈಸೂರು ತಾಪಂ ಅಧ್ಯಕ್ಷರು, ಸದಸ್ಯರ ನಡುವೆ ಮುಸುಕಿನ ಗುದ್ದಾಟ: ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ
September 30, 2018ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್ನಲ್ಲಿ ಅಧ್ಯ ಕ್ಷರು ಹಾಗೂ ಸದಸ್ಯರ ನಡುವೆ ಮುಸುಕಿನ ಗುದ್ದಾಟದಿಂದ ಶನಿವಾರ ನಿಗದಿಯಾಗಿದ್ದ ತಾಪಂ ವಿಶೇಷ ಸಭೆ ಕೋರಂ ಅಭಾವ ದಿಂದ ಮುಂದೂಡಲ್ಪಟ್ಟಿತು. ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಉಪಾ ಧ್ಯಕ್ಷ ಮಂಜು ಹಾದಿಯಾಗಿ ಸ್ವಪಕ್ಷೀಯರೇ ಮುನಿಸಿಕೊಂಡು ಇಂದಿನ ಸಭೆಗೆ ಗೈರಾಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11ಕ್ಕೆ…
ನಾಳೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ
September 30, 2018ಮೈಸೂರು ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ನಿರ್ಧಾರ ಮೈಸೂರು: ವಿಶ್ವಸ್ತನ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಅ.1ರಿಂದ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಆಚರಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಈಗ ಗುಣಪಡಿಸಬಹುದಾದ ಸಾಮಾನ್ಯ ಖಾಯಿಲೆಯಾಗಿದೆ. ಆದರೆ ಸಾರ್ವಜನಿಕರು ಹಾಗೂ ರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್…
ಪ್ರತಿಕೂಲ ಸಾಕ್ಷಿ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ
September 29, 2018ಮೈಸೂರು: ಮೈಸೂರಿನ ಪಡುವಾರಳ್ಳಿಯ ದೇವೇಂದ್ರ ಅಲಿಯಾಸ್ ದೇವು ಹತ್ಯೆ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೇವು ಹತ್ಯೆ ಪ್ರಕರಣದ ಪ್ರತ್ಯಕ್ಷ ಸಾಕ್ಷೀದಾರರಾಗಿದ್ದ ಮುಕುಂದ ಹಾಗೂ ಪ್ರತಾಪ್, ನ್ಯಾಯಾಲಯ ದಲ್ಲಿ ಸುಳ್ಳು ಸಾಕ್ಷಿ ಹೇಳಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೆ.22ರಂದು ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಮೈಸೂರಿನ ವಿನಾಯಕನಗರದ ಜೋಡಿ ಮಾರಮ್ಮನ…
ಮೈಸೂರಲ್ಲಿ ‘ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಥಾ
September 28, 2018ಮೈಸೂರು: ಸಂವಿ ಧಾನ ಸಂರಕ್ಷಣೆ ಹಾಗೂ ಶಾಂತಿ ಸೌಹಾ ರ್ದತೆಗಾಗಿ ಮೈಸೂರಿನಲ್ಲಿ ಗುರುವಾರ ವಿವಿಧ ಮಹಿಳಾ ಸಂಘಟನೆಗಳ ಕಾರ್ಯ ಕರ್ತರು `ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಥಾ ನಡೆಸಿದರು. ಮೈಸೂರು ಅರಮನೆಯ ಉತ್ತರ ದ್ವಾರ ಬಳಿಯಿಂದ ಪುರಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಮಹಿಳಾ ಸಂಘ ಟನೆಗಳ ಕಾರ್ಯಕರ್ತರು ಮಾರ್ಗದು ದ್ದಕ್ಕೂ ಸಂವಿಧಾನ ರಕ್ಷಣೆ, ಶಾಂತಿ, ಸೌಹಾ ರ್ದತೆ ಕುರಿತಂತೆ ಘೋಷಣೆ ಕೂಗಿದರ ಲ್ಲದೆ, ಸಂವಿಧಾನ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರತ ಸಂವಿ ಧಾನದ ರಕ್ಷಣೆಗೆ ಆಗ್ರಹಿಸಿ ದೇಶದ ಐದು…
ಮೈಸೂರು ಸಂಚಾರ ಎಸಿಪಿಯಾಗಿ ಜಿ.ಎನ್.ಮೋಹನ್ ಅಧಿಕಾರ ಸ್ವೀಕಾರ
September 27, 2018ಮೈಸೂರು: ಮೈಸೂರು ನಗರ ಸಂಚಾರ ವಿಭಾಗದ ಅಸಿಸ್ಟೆಂಟ್ ಕಮೀಷ್ನರ್ ಆಫ್ ಪೊಲೀಸ್ (ಎಸಿಪಿ) ಆಗಿ ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಮೈಸೂರಿನ ಶಿವರಾಂಪೇಟೆಯಲ್ಲಿರುವ ಸಂಚಾರ ಎಸಿಪಿ ಕಚೇರಿಯಲ್ಲಿ ಪ್ರಭಾರ ಎಸಿಪಿಯಾಗಿದ್ದ ವಿವಿ ಪುರಂ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಿ.ವಿ. ರವಿ ಅವರು ಮೋಹನ್ ಅವರಿಗೆ ಅಧಿಕಾರ ವಹಿಸಿಕೊಟ್ಟು, ಪುಷ್ಪಗುಚ್ಛ ನೀಡಿ ಶುಭ ಕೋರಿದರು. ತುಮಕೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಡಿವೈಎಸ್ಪಿಯಾಗಿದ್ದ ಮೋಹನ್ ಅವರನ್ನು ಸರ್ಕಾರ ಮೈಸೂರು ನಗರ ಸಂಚಾರ ವಿಭಾಗದ ಎಸಿಪಿಯಾಗಿ ವರ್ಗಾ ವಣೆ ಮಾಡಿತ್ತು….
ಮೈಸೂರು ಭಾಗದ ಕೈಗಾರಿಕಾ ಪ್ರದೇಶಗಳ ನಾನಾ ಬೇಡಿಕೆ ಸಂಬಂಧ ಸಣ್ಣ ಕೈಗಾರಿಕಾ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಕೆ
September 25, 2018ಮೈಸೂರು: ಮೈಸೂರು ಕೈಗಾ ರಿಕಾ ಪಟ್ಟಣ ಪ್ರಾಧಿಕಾರ ರಚನೆ, ಮೈಸೂರು ರಫ್ತ್ತು ಕೇಂದ್ರ ನಿರ್ಮಾಣ, ಕೈಗಾರಿಕಾ ಘನ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಸುಮಾರು 20 ಅಂಶಗಳುಳ್ಳ ಮನವಿ ಪತ್ರವನ್ನು ಮೈಸೂರು ಕೈಗಾರಿಕೆಗಳ ಸಂಘದ ವತಿ ಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ನಿರ್ದೇಶನಾಲಯದ ಪ್ರಥಮ ಆಯುಕ್ತರಾದ ಗುಂಜನ್ ಕೃಷ್ಣ ಅವರಿಗೆ ಸಲ್ಲಿಸಲಾಗಿದೆ. ಬೆಳಗಾವಿಯಲ್ಲಿ ಸೋಮವಾರ ಕರ್ನಾ ಟಕ ಸಣ್ಣ ಕೈಗಾರಿಕೆಗಳ ಸಂಘದ ವತಿ ಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ…
ರಸ್ತೆ, ಉದ್ಯಾನವನ ದತ್ತು ನೀಡಿ ನೈರ್ಮಲ್ಯ ಕಾಪಾಡುವ ಯೋಜನೆ
September 25, 2018ಮೈಸೂರು: ರಸ್ತೆ ಬದಿ ಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದು ನಡೆ ಯುತ್ತಿದೆ. ಯಾರು ರಸ್ತೆಯಲ್ಲಿ ಕಸ ಹಾಕುತ್ತಿ ದ್ದಾರೋ ಅವರನ್ನೇ ಸ್ವಚ್ಛತಾ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿ ಮಾಡಲು ತೀರ್ಮಾನಿಸಿ ದ್ದೇವೆ. ಆ ಮೂಲಕ ನಿಮ್ಮ ಬೀದಿ, ರಸ್ತೆ, ಬಡಾವಣೆಗಳನ್ನು ದತ್ತು ನೀಡಿ ನೈರ್ಮಲ್ಯ, ಸ್ವಚ್ಛತೆ ಕೈಗೊಳ್ಳುವ ಯೋಜನೆ ರೂಪಿಸುತ್ತಿ ದ್ದೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಇಂದಿಲ್ಲಿ ತಿಳಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ…
ಓಲಾ ಅಟ್ಯಾಚ್ಡ್ ವಾಹನ ಚಾಲಕರ ಧರಣಿ ಅಂತ್ಯ
September 25, 2018ಮೈಸೂರು: ಓಲಾ ಕಂಪನಿಯ ಅಧಿಕಾರಿಗಳು ನೀಡಿದ ಸೂಕ್ತ ಭರವಸೆ ಹಿನ್ನೆಲೆಯಲ್ಲಿ ಕಳೆದ 3 ದಿನದಿಂದ ಮೈಸೂರಿನ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ಓಲಾ ಕಚೇರಿ ಎದುರು ನಡೆಸುತ್ತಿದ್ದ ಧರಣಿಯನ್ನು ಓಲಾ ಅಟ್ಯಾಚ್ಡ್ ವಾಹನ ಚಾಲಕರು ಮತ್ತು ಮಾಲೀಕರು ಸೋಮವಾರ ಹಿಂಪಡೆದಿದ್ದಾರೆ. ಅಟ್ಯಾಚ್ಡ್ ಮತ್ತು ಲೀಸಿಂಗ್ ವಾಹನಗಳಿಗೆ ಸರಿ ಸಮಾನಾಂತರವಾದ ಬುಕ್ಕಿಂಗ್ ಹಾಗೂ ಒಂದೇ ಆ್ಯಪ್ ಬಳಸಬೇಕು. ಲೀಸ್ ವಾಹನಗಳಿಗೆ ಒಬ್ಬರೇ ಚಾಲಕರನ್ನು ನಿಗದಿ ಮಾಡಬೇಕು. ಇನ್ನು ಮುಂದೆ ಹೊಸದಾಗಿ ಯಾವುದೇ ಲೀಸಿಂಗ್ ವಾಹನಗಳನ್ನು ನೀಡಬಾರದು. ಹಳೇ ಎಂಬಿಜಿ…
ಮಹಾಸಭಾ ಉದ್ಘಾಟನೆ ವಿರೋಧಿಸಲು ಬಂದವರ ಬಂಧನ
September 24, 2018ಮೈಸೂರು: ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಉದ್ಘಾಟನೆ ಯನ್ನು ವಿರೋಧಿಸಿ, ಪ್ರತಿಭಟಿಸಿದ ವೀರಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಗಂಟೆ ಗಳ ನಂತರ ಬಿಡುಗಡೆ ಮಾಡಿದರು. ಮೈಸೂರಿನ ಹೊಸಮಠದ ಆವರಣ ದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಬಂದ ವೀರ ಶೈವ ಲಿಂಗಾಯತ ಜಾಗೃತಿ ವೇದಿಕೆ ಸದಸ್ಯ ರನ್ನು ಗೇಟಿನ ಬಳಿಯೇ ಪೊಲೀಸರು ತಡೆದರು. ನಾವು ಗಲಾಟೆ ಮಾಡಲು ಬಂದಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಏನೆಲ್ಲಾ ವಿಚಾರಗಳನ್ನು ಮಂಡಿಸುತ್ತಾರೆ ಎಂಬುದನ್ನು…