ತಿ.ನರಸೀಪುರ: ಕಳೆದ ರಾತ್ರಿಯಷ್ಟೇ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ, ಸಚಿವ ಹಾಗೂ ಮೇರುನಟ ಅಂಬರೀಶ್ ಅವರ ನಿಧನಕ್ಕೆ ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಹಳೇ ತಿರುಮಕೂಡಲು ವೃತ್ತ ದಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಹಾಗೂ ನಿವಾಸಿಗಳು ಅಕಾಲಿಕ ಮರಣ ಹೊಂದಿದ್ದ ಊರಿನ ಮೊಮ್ಮಗ ಹಿರಿಯ ರಾಜಕಾರಣಿ ಹಾಗೂ ಚಿತ್ರನಟ ನಟ ಅಂಬ ರೀಶ್ ಅವರ ಎತ್ತರದ ಕಟೌಟ್ಗೆ ಹಾರ ಹಾಕಿ ಪೂಜೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪಿಟೀಲು ಚೌಡಯ್ಯ ವಂಶಸ್ಥರಾದ, ಕಸಬಾ ಪಿಎಸಿಸಿಎಸ್ ನಿರ್ದೇಶಕ…
ಎಂ.ಎಸ್.ಕಿರಣ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ
November 24, 2018ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ ರಾಗಿ ಎಂ.ಎಸ್.ಕಿರಣ ಆಯ್ಕೆಯಾದರು. ತಾಲೂಕಿನ ಮೂಗೂರು ಗ್ರಾಪಂನಲ್ಲಿ ಹಿಂದಿನ ಉಪಾಧ್ಯಕ್ಷ ಎಂ.ಬಿ.ಅರವಿಂದ ರಮೇಶ ನಿಧನರಾಗಿದ್ದ ಹಿನ್ನೆಲೆಯಲ್ಲಿ ಇಂದು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆ ಯಿತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಎಂ.ಎಸ್.ಕಿರಣ ಹಾಗೂ ಎಂ.ಎನ್. ರಾಜು ನಾಮಪತ್ರ ಸಲ್ಲಿಸಿದ್ದರು. 14 ಮತ ಗಳನ್ನು ಪಡೆದ ಎಂ.ಎಸ್.ಕಿರಣ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರತಿಸ್ಪರ್ಧಿ ಎಂ.ಎನ್.ರಾಜು 10 ಮತ ಪಡೆದು ಪರಾಭವ ಗೊಂಡರು. ಒಂದು ಕುಲಗೆಟ್ಟ ಮತವಾಗಿ ಚಲಾವಣೆಯಾಗಿತ್ತು. ಚುನಾವಣಾಧಿಕಾರಿ ಯಾಗಿ…
ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ದಸಂಸ ಆಗ್ರಹ
November 21, 2018ತಿ.ನರಸೀಪುರ – ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿ ಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಬನ್ನ ಹಳ್ಳಿ ಸೋಮಣ್ಣ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು 35 ಲಕ್ಷ ರೂ. ಅನು ದಾನ ನೀಡಲಾಗಿತ್ತು. ಆದರೆ ಪ್ರತಿಮೆಯ ಕೆಲಸ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ತಾಲೂಕು ಕಚೇರಿ ಹಾಗೂ ತಾಪಂ…
ಕೆರೆಗಳನ್ನು ತುಂಬಿಸಲು 10 ಕೋಟಿ ಯೋಜನೆಗೆ ಅನುಮೋದನೆ
November 18, 2018ತಿ.ನರಸೀಪುರ: ರೈತರ ಕೃಷಿ ಭೂಮಿಗೆ ಹೆಚ್ಚಿನ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ 10 ಕೋಟಿ ರೂ.ಗಳ ಯೋಜನೆಯೊಂದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ಇಂದು ನಡೆದ 38ನೇ ವರ್ಷದ ಹುಟ್ಟುಹಬ್ಬ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯನ್ನು 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರೂಪಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ…
ಬೈಕ್-ಬಸ್ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು
November 17, 2018ತಿ.ನರಸೀಪುರ: ಬೈಕ್-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಸವಾರ ಸಾವನ್ನಪಿದ್ದು,್ಪ ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ಬಳಿ ಕಿರುಗಾವಲು ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ತಾಲೂಕಿನ ಕೊತ್ತೇಗಾಲ ಗ್ರಾಮದ ಮಹದೇವಯ್ಯ(32) ಮೃತಪಟ್ಟಿದ್ದು, ಕಿರಗಸೂರು ಗ್ರಾಮದ ಪುಟ್ಟಸ್ವಾಮಚಾರ್(52) ತೀವ್ರವಾಗಿ ಗಾಯಗೊಂಡು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಪನಪುರ ಗ್ರಾಮದ ಪತ್ನಿ ಮನೆಗೆ ತೆರಳಿದ್ದ ಮಹದೇವಯ್ಯ ತಮ್ಮ ಹಿರೋ ಸ್ಪ್ಲೆಂಡರ್ ಬೈಕ್(ಕೆಎ55, ಯು 3267)ನಲ್ಲಿ ಕೊತ್ತೇಗಾಲಕ್ಕೆ ವಾಪಸ್ಸಾ ಗುತ್ತಿದ್ದಾಗ ನರಸೀಪುರದಿಂದ ಕಿರುಗಾವಲು ಕಡೆಗೆ ತೆರಳುತ್ತಿದ್ದ ಎಸ್ಎಂಎಸ್ ಖಾಸಗಿ…
ತಿ.ನರಸೀಪುರದಲ್ಲಿ ಆಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ
November 5, 2018ತಿ.ನರಸೀಪು: ಆಕ್ಯುಪಂಕ್ಚರ್ ಚಿಕಿತ್ಸೆಯು ಪ್ರಾಚೀನ ಕಾಲದ ಚಿಕಿತ್ಸಾ ಪದ್ಧತಿಯಾಗಿದ್ದು, ಶಸ್ತ್ರಚಿಕಿತ್ಸೆ ರಹಿತವಾಗಿ 165ಕ್ಕೂ ಹೆಚ್ಚಿನ ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಖ್ಯಾತ ವೈದ್ಯ ಡಾ.ಎನ್.ಎಸ್.ಮಹಮ್ಮದ್ ಹಿಫ್ಜುಲ್ಲಾ ಹೇಳಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎನ್ಕೆಎಫ್ ಫೌಂಡೇಶನ್ ಹಾಗೂ ಕೌನ್ಸಿಲ್ ಆಫ್ ಇಂಡಿಯನ್ ಆಕ್ಯುಪಂಕ್ಚರ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಜೆಎಸ್ಎಸ್ ಸಭಾಭವನದಲ್ಲಿ ನಡೆದ ಉಚಿತ ಆಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಪ್ರಾಚೀನ ಚಿಕಿತ್ಸಾ ಪದ್ಧತಿಯು 8,400 ವರ್ಷದ ಹಿಂದೆ ಚೈನಾ ದೇಶದಲ್ಲಿ ಆರಂಭಗೊಂಡು ಖ್ಯಾತಿಯನ್ನು ಪಡೆದಿದೆ. ಈ…
ಡಾ.ಅಂಬೇಡ್ಕರ್ ಪುತ್ಥಳಿ ಭಗ್ನ: ಹಸುವಟ್ಟಿ ಗ್ರಾಮಸ್ಥರ ಪ್ರತಿಭಟನೆ
November 3, 2018ತಿ.ನರಸೀಪುರ: ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿದರು. ತಾಲೂಕಿನ ಸೋಸಲೆ ಹೋಬಳಿಯ ಹಸುವಟ್ಟಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಪುತ್ಥಳಿಯನ್ನು ಕಳೆದ ಗುರು ವಾರ ರಾತ್ರಿ ಕಿಡಿಗೇಡಿಗಳು ಭಗ್ನಗೊಳಿಸಿರುವ ಕೃತ್ಯ ಬೆಳಿಗ್ಗೆ ಬೆಳಕಿಗೆ ಬರುತ್ತಿದ್ದಂತೆ ತಿ. ನರಸೀಪುರ ಪೂರೀಗಾಲಿ ಮುಖ್ಯ ರಸ್ತೆ ಯಲ್ಲಿ ಜಮಾವಣೆಗೊಂಡ ದಸಂಸ ಮುಖಂಡರು ಹಾಗೂ ಗ್ರಾಮಸ್ಥರು ಆರೋಪಿಗಳ…
ಕೈ ಅಭ್ಯರ್ಥಿ ಗೆಲುವಿಗಾಗಿ ಧ್ರುವ, ಯತೀಂದ್ರ ಮತಬೇಟೆ
October 26, 2018ಸೋಮನಾಥಪುರ ಜಿಪಂ ಕ್ಷೇತ್ರ ಉಪ ಚುನಾವಣೆ ಅಹಿಂದ ಮತದಾರರ ಓಲೈಕೆ ಯತ್ನ ತಿ.ನರಸೀಪುರ: ತಾಲೂಕಿನ ಸೋಮನಾಥಪುರ ಜಿ.ಪಂ ಕ್ಷೇತ್ರದ ಉಪ ಚುನಾವಣೆಗೆ ಎರಡು ದಿನ ಬಾಕಿ ಇರುವ ಹಿನ್ನೆಲೆ ಯಲ್ಲಿ ಚುನಾವಣೆ ಪ್ರಚಾರ ತಾರಕಕ್ಕೇ ರುತ್ತಿದ್ದು, ಅಹಿಂದ ಸಮುದಾಯಗಳ ಮತ ಗಳನ್ನು ಸೆಳೆಯಲು ಸಂಸದ ಆರ್.ಧ್ರುವ ನಾರಾಯಣ ಹಾಗೂ ವರುಣಾ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಅವರು ವಿವಿಧೆಡೆ ಗುರುವಾರ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಪದ್ಮನಾಭ ಅವರ ಪರ ಭರ್ಜರಿ ಮತಬೇಟೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡ…
ಸೋಮನಾಥಪುರ ಜಿ.ಪಂ ಕ್ಷೇತ್ರ ಜಾ.ದಳ ಭದ್ರಕೋಟೆ
October 24, 2018ತಿ.ನರಸೀಪುರ: ಸೋಮನಾಥಪುರ ಜಿ.ಪಂ ಕ್ಷೇತ್ರ ಜಾತ್ಯಾತೀತ ಜನತಾದಳದ ಭದ್ರಕೋಟೆ. ಎಲ್ಲಾ ವರ್ಗದ ಜನರ ಬೆಂಬಲದಿಂದ ಉಪ ಚುನಾವಣೆ ಯಲ್ಲಿ ಗೆಲ್ಲುವ ಸಂಪೂರ್ಣ ನಂಬಿಕೆಯಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ವಿ. ಜಯಪಾಲ್ ಭರಣಿ ಹೇಳಿದರು. ಜಿ.ಪಂ ಉಪ ಚುನಾವಣೆಯ ಹಿನ್ನೆಲೆ ಯಲ್ಲಿ ತಾಲೂಕಿನ ಸೋಮನಾಥಪುರ ಗ್ರಾಮ ದಲ್ಲಿ ಮಂಗಳವಾರ ಸಂಜೆ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಜಿ.ಪಂ ಸದಸ್ಯರಾಗಿ ಆಯ್ಕೆಗೊಂಡ ನಂತರ ಗ್ರಾಮೀಣ ಪ್ರದೇಶ ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು…
ರೈತರಿಗೆ ಬ್ಯಾಂಕ್ಗಳಿಂದ ನೋಟೀಸ್ ಕುರುಬೂರು ಶಾಂತಕುಮಾರ್ ಆರೋಪ
October 15, 2018ತಿ.ನರಸೀಪುರ: ರಾಷ್ಟ್ರೀಕೃತ ಬ್ಯಾಂಕ್ಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲದ ಕಾರಣ ಬ್ಯಾಂಕ್ಗಳು ರೈತರ ಸಾಲ ವಸೂಲಿಗೆ ನೋಟೀಸ್ ನೀಡಿ ಕಿರುಕುಳ ನೀಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು, ರೈತರಿಗೆ ಕಿರುಕುಳ ಕೊಟ್ಟರೆ ಬ್ಯಾಂಕ್ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡುತ್ತಿ ದ್ದಾರೆ. ಆದರೆ ಸಾಲ…