`ರಸ್ತೆ ಗುಂಡಿಗಳನ್ನು ಮುಚ್ಚಲಾಗದಿದ್ದರೆ ಪಾಲಿಕೆಯನ್ನೇ ಮುಚ್ಚಿಸುತ್ತೇವೆ’ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
ಮೈಸೂರು

`ರಸ್ತೆ ಗುಂಡಿಗಳನ್ನು ಮುಚ್ಚಲಾಗದಿದ್ದರೆ ಪಾಲಿಕೆಯನ್ನೇ ಮುಚ್ಚಿಸುತ್ತೇವೆ’ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್

October 24, 2018

ಬೆಂಗಳೂರು: `ಬಿಬಿಎಂಪಿ ಕೆಲಸ ನಡೆಸದಿದ್ದರೆ ಬೆಂಗಳೂರೇನೂ ಸ್ಥಗಿತವಾಗುವುದಿಲ್ಲ. ನೀವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳೂ ಅಷ್ಟರಲ್ಲೇ ಇದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದು’

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಗಳನ್ನು ಮುಚ್ಚುವ ವಿಚಾರವಾಗಿ ಇಂದು ಮತ್ತೆ ಹೈಕೋರ್ಟ್ ನ್ಯಾಯಮೂರ್ತಿ ಗಳು ಪಾಲಿಕೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬಗೆಯಿದು. ಈ ಮೊದಲೂ ಅನೇಕ ಬಾರಿ ಇದೇ ವಿಷಯಕ್ಕೆ ಹೈ ಕೋರ್ಟ್ ವಿಭಾಗೀಯ ಪೀಠದ ನ್ಯಾಯ ಮೂರ್ತಿಗಳ ಮುಂದೆ ಕೈ ಕಟ್ಟಿ, ತಲೆ ತಗ್ಗಿಸಿ ನಿಂತಿದ್ದ ಬಿಬಿಎಂಪಿ ಅಧಿಕಾರಿಗಳು ಇಂದು ಮತ್ತೆ ಉತ್ತರ ನೀಡಲಾಗದೆ, ತಮ್ಮನ್ನು ಸಮರ್ಥಿಸಿಕೊಳ್ಳಲಾಗದೆ ತಡ ಬಡಾಯಿಸಿದ ಘಟನೆ ಮರುಕಳಿಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಗಳನ್ನು ಮುಚ್ಚಲು ನಿರ್ದೇಶನ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಇಂದು ಹೈಕೋರ್ಟ್ ವಿಭಾಗೀಯ ಪೀಠ ಕೈಗೆತ್ತಿ ಕೊಂಡಿತು. ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಗೆ ಗಡುವು ವಿಸ್ತರಿಸುತ್ತಲೇ ಇರುವ ಹೈ ಕೋರ್ಟ್, ಇಂದು ಖಡಕ್ ಎಚ್ಚರಿಕೆ ನೀಡಿದೆ.

ನಂಬಿಕೆ ಉಳಿಸಿ ಕೊಳ್ಳಲಿಲ್ಲ ಎಂದ ಹೈ ಕೋರ್ಟ್: ಕಳೆದ 15 ದಿನ ಗಳಿಂದ ರಸ್ತೆ ಗುಂಡಿ ಮುಚ್ಚಿಲ್ಲ. ಫೋಟೋ ಸಹಿತ 43 ರಸ್ತೆಗುಂಡಿ ವಿವರಗಳನ್ನು ನೀಡಿ ದ್ದರೂ ಮುಚ್ಚಿಲ್ಲ ಎಂದು ಹೈಕೋರ್ಟ್ ಅರ್ಜಿ ದಾರರ ಪರ ವಕೀಲೆ ಎಸ್.ಆರ್. ಅನುರಾಧ ಹೇಳಿದ್ದಾರೆ. ಆದರೆ, ಅರ್ಜಿದಾರರ ಆರೋಪವನ್ನು ನಿರಾಕರಿಸಿದ ಬಿಬಿಎಂಪಿ ವಕೀಲರು ಕಾಮಗಾರಿ ನಡೆಯುತ್ತಿದೆ. ವಿವರಗಳನ್ನು ನೀಡಿದ್ದರೂ ಗುಂಡಿಗಳನ್ನು ಮುಚ್ಚಿಲ್ಲ ಎಂಬ ವಿಷಯ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.

ಈ ವೇಳೆ ಬಿಬಿಎಂಪಿ ಪರ ವಕೀಲರ ಹೇಳಿಕೆಗೆ ಗರಂ ಆದ ಹೈಕೋರ್ಟ್ ನ್ಯಾಯ ಮೂರ್ತಿಗಳು, ಇದಕ್ಕೂ ಮೊದಲು ಹಲವು ಬಾರಿ ಗಡುವು ನೀಡಲಾಗಿದೆ. ಪ್ರತಿ ಸಲವೂ ಒಂದೊಂದು ನೆಪ ಹೇಳುತ್ತಲೇ ಇದ್ದೀರಿ. ಮನಸು ಮಾಡಿ ದರೆ ಒಂದೇ ದಿನ ದಲ್ಲಿ ಕೆಲಸ ಮುಗಿಸ ಬಹುದು. ನಿಮಗೆ ಇಚ್ಛಾಶಕ್ತಿಯಿಲ್ಲ. ಈ ಬಾರಿಯಾದರೂ ರಸ್ತೆ ಗುಂಡಿಗಳನ್ನು ಮುಚ್ಚಿರುತ್ತೀರಿ ಎಂಬ ನಂಬಿಕೆಯಿತ್ತು. ಆ ನಂಬಿಕೆಯನ್ನು ಪಾಲಿಕೆ ಉಳಿಸಿಕೊಳ್ಳಲಿಲ್ಲ ಎಂದು ಬಿಬಿಎಂಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿ ನೀಡಿದ ಸ್ಪಷ್ಟನೆಯೇನು: ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು ಬಿಡಬ್ಲುಎಸ್‍ಎಸ್‍ಬಿ ಎಲ್ಲೆಡೆ ರಸ್ತೆಗಳನ್ನು ಅಗೆದು ಕಾಮಗಾರಿ ನಡೆಸುತ್ತಿದೆ. ಇದರಿಂದಾಗಿ ಕೆಲವು ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿಲ್ಲ. 43 ಪ್ರದೇಶಗಳ ಪೈಕಿ 16 ಕಡೆ ಗುಂಡಿ ಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು. ರಸ್ತೆ ಗುಂಡಿಗಳಿಗೆ ನಾವು ಹೊಣೆಯಲ್ಲ ಎಂದು ನ್ಯಾಯಾಲಯದಲ್ಲಿ ಬಿಡಬ್ಲು ಎಸ್‍ಎಸ್‍ಬಿ ಪರ ವಕೀಲರು ವಾದ ಮಂಡಿಸಿದರು.

ನಿಮ್ಮ ಸಾಮರ್ಥ್ಯವನ್ನು ನೀವೇ ಸಾಬೀತು ಪಡಿಸಿ: ಬಿಬಿಎಂಪಿಗೆ ಗುಂಡಿ ಮುಚ್ಚಿಸಲು ಸಾಧ್ಯವಾಗದಿದ್ದರೆ ಅದು ಅಧಿಕಾರಿಗಳ ವೈಫಲ್ಯ ಎಂದು ಪರಿಗಣಿಸಲಾಗುವುದು. ಇದೇ ಬೇಜವಾಬ್ದಾರಿತನ ಮುಂದುವರಿ ದರೆ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಕೆಲಸವನ್ನು ಬೇರೊಂದು ಏಜೆನ್ಸಿಗೆ ವಹಿಸಲಾಗುವುದು. ಬಿಬಿಎಂಪಿ ನಿಷ್ಪ್ರಯೋ ಜಕವಾಗಿದೆ ಎಂದು ನೀವೇ ಸಾಬೀತು ಪಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ಅಧಿಕಾರಿಗಳಿಗೆ ನಿಮ್ಮ ಕೆಲಸದ ಬಗ್ಗೆ ಮಾಹಿತಿಯಿಲ್ಲ ಎಂದರೆ ನಿಮ್ಮ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ. ಬೇರೆ ಯಾವ ನೆಪವನ್ನೂ ಹೇಳದೆ 43 ಪ್ರದೇಶಗಳ ರಸ್ತೆಗುಂಡಿಗಳನ್ನು ಇಂದೇ ಮುಚ್ಚಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.

Translate »