ಇಂದಿನಿಂದ ಕಾರಂಜಿಕೆರೆ ಉತ್ಸವ ಆರಂಭ
ಮೈಸೂರು

ಇಂದಿನಿಂದ ಕಾರಂಜಿಕೆರೆ ಉತ್ಸವ ಆರಂಭ

December 16, 2019

ಮೈಸೂರು,ಡಿ.15(ಎಂಟಿವೈ)- ಹಲವು ವರ್ಷಗಳ ಬಳಿಕ ಹೂಳೆತ್ತಲಾಗಿರುವ ಮೈಸೂ ರಿನ ಕಾರಂಜಿಕೆರೆ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಕೆರೆ ಸಂರಕ್ಷಣೆಯ ಮಹತ್ವ, ಪರಿಸರ ಸಮತೋಲನ ಕಾಪಾಡುವಲ್ಲಿ ಕೆರೆ ಗಳು ನಿರ್ವಹಿಸುವ ಪಾತ್ರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಳೆ (ಡಿ.16) ಬೆಳಿಗ್ಗೆ 10 ಗಂಟೆಗೆ ಎರಡು ದಿನಗಳ `ಕಾರಂಜಿಕೆರೆ ಉತ್ಸವ’ ಆರಂಭವಾಗಲಿದೆ.

ಇದೇ ಮೊದಲ ಬಾರಿಗೆ ಸಾರ್ವಜನಿಕ ರಿಗೆ ಕೆರೆ ಪರಿಸರ, ಜೀವ ವೈವಿಧ್ಯತೆ ಕುರಿತಂತೆ ಮಾಹಿತಿ ನೀಡಲು ಕಾರಂಜಿಕೆರೆ ಉತ್ಸವ ಆಯೋಜಿಸಲಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಸೇರಿ ದಂತೆ ಎಲ್ಲಾ ವರ್ಗದ ಜನರು ಕಾರಂಜಿ ಕೆರೆ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. `ಇದು ನಿಮ್ಮ ಹಬ್ಬ.. ನೀವೂ ಬನ್ನಿ, ನಿಮ್ಮೊಂದಿಗೆ ಆಸಕ್ತರನ್ನೂ ಕರೆತನ್ನಿ’ ಘೋಷಣೆಯೊಂ ದಿಗೆ ಆಚರಿಸಲಾಗುತ್ತಿರುವ ಕೆರೆ ಹಬ್ಬದಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ವಿವಿಧ ಕಾರ್ಯಕ್ರಮ ಜರುಗಲಿದೆ.

ನಾಳೆ ಬೆಳಿಗ್ಗೆ 10.30ರಿಂದ 10.40ರವರೆಗೆ ಕಾರಂಜಿಕೆರೆ ಆವರಣದಲ್ಲಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ನಂತರ ವಿವಿಧ ಶಾಲಾ ಮಕ್ಕ ಳಿಗಾಗಿ ಆಯೋಜಿಸಿರುವ ವೇಷಭೂಷಣ ಸ್ಪರ್ಧೆ(ಪ್ರಾಣಿ, ಪಕ್ಷಿ, ಹಣ್ಣು-ತರಕಾರಿ, ಗಿಡ-ಮರ)ಯಲ್ಲಿ ಪಾಲ್ಗೊಂಡು ವಿವಿಧ ವೇಷ ಧರಿಸಿರುವ ಮಕ್ಕಳೊಂದಿಗೆ ಗಣ್ಯರು, ಹಿರಿಯ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಕಾರಂಜಿಕೆರೆ ಆವರಣದಲ್ಲಿ ರುವ ಹಳೆಯ ಫುಡ್ ಜೋóóನ್ ಸ್ಥಳದವ ರೆಗೂ ಹೆಜ್ಜೆ ಹಾಕಲಿದ್ದಾರೆ. ಬಳಿಕ ಕೆರೆ ದಡದಲ್ಲಿ ಪ್ರಕೃತಿ ನಡುವೆ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಸರಳ ವೇದಿಕೆಯಲ್ಲಿ ಬೆಳಿಗ್ಗೆ 10.40ರಿಂದ 11.40ರವರೆಗೆ ಕೆರೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಬೆಳಿಗ್ಗೆ 11.50ರಿಂದ 1.00 ಗಂಟೆ ವರೆಗೆ ವನ್ಯಜೀವಿ ವಿಷಯ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾದೇಶಿಕ ಪ್ರಾಕೃತಿಕ ಸಂಗ್ರಹಾಲಯದ (ಆರ್‍ಎಂ ಎನ್‍ಹೆಚ್) ಆವರಣದಲ್ಲಿ ರಸಪ್ರಶ್ನೆ ಕಾರ್ಯ ಕ್ರಮ ನಡೆಯಲಿದ್ದು, ಎಂ.ವಿಜಯ್, ಜಾನ್ ಥಾಮಸ್ ಹಾಗೂ ಗುರುಪ್ರಸಾದ್ ಈ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವ ಹಿಸಲಿದ್ದಾರೆ. ಮಧ್ಯಾಹ್ನ 2.30ರಿಂದ 4.30 ರವರೆಗೆ (ಆರ್‍ಎಂಎನ್‍ಹೆಚ್) ಹಾಗೂ ಮೃಗಾ ಲಯದ ಆ್ಯಂಪಿ ಥಿಯೇಟರ್‍ನಲ್ಲಿ ಚಿತ್ರಕಲೆ ಮತ್ತು ಪೇಯಿಂಟಿಂಗ್ ಸ್ಪರ್ಧೆ ನಡೆಯಲಿದೆ. ಕೆರೆ ಉತ್ಸವದ 2ನೇ ದಿನವಾದ ಡಿ.17ರಂದು ಬೆಳಿಗ್ಗೆ 7ರಿಂದ 8ರವರೆಗೆ ಕಾರಂಜಿ ಕೆರೆಯಲ್ಲಿ ಪಕ್ಷಿ ವೀಕ್ಷಣೆ ಹಾಗೂ ಬಟಾನಿಕಲ್ ವಾಕ್ ನಡೆಯಲಿದೆ. ಮುಖ್ಯ ದ್ವಾರದಿಂದ ಆರಂಭವಾಗುವ ಕಾಲ್ನಡಿಗೆ ಯಲ್ಲಿ ಕೆರೆ ಆವರಣದಲ್ಲಿ ಬೆಳೆದಿರುವ ಗಿಡ, ಮರಗಳ ಹೆಸರು, ವೈಶಿಷ್ಟ್ಯತೆ, ಕಂಡು ಬರುವ ಪಕ್ಷಿಗಳ ಬಗ್ಗೆ ವಿಜ್ಞಾನಿಗಳಾದ ಡಾ.ಎ.ಪಿ.ತಿವಾರಿ, ಡಾ.ಎಂ.ವಿ.ವಿಜಯ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಶ್ರೀನಿವಾಸ್, ತನುಜಾ, ಶೈಲೇಶ್, ಸಹನಾ, ಪ್ರಣವ್ ಇನ್ನಿತರರು ವಿವರಣೆ ನೀಡಲಿದ್ದಾರೆ. ಬೆಳಿಗ್ಗೆ 10.30ರಿಂದ 11.20ರವರೆಗೆ ಕಾರಂಜಿ ಕೆರೆಯ ಹಳೆಯ ಫುಡ್‍ಕೋರ್ಟ್‍ನಲ್ಲಿ ಮೈಸೂರು ಕೆರೆಗಳ ಇತಿಹಾಸ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. 11.20ರಿಂದ 12.20ರವರೆಗೆ ನಗರದ ಕೆರೆಗಳ ಸಂರಕ್ಷಣೆ ಹಾಗೂ ಕೆರೆಯಲ್ಲಿರುವ ಜೀವ ವೈವಿಧ್ಯತೆಗಳ ಸಂರಕ್ಷಣೆ ಮಹತ್ವ ಕುರಿತು ಜಲತಜ್ಞ ಪ್ರೊ.ರವಿಕುಮಾರ್ ಮಾತನಾಡಲಿದ್ದಾರೆ.

ಮಧ್ಯಾಹ್ನ 12.20ರಿಂದ 12.35ರವರೆಗೆ ಪ್ರಕೃತಿಗೆ ಸಂಬಂಧಿಸಿದಂತೆ ಸ್ಕಿಟ್ ಬರೆಯುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12.35ರಿಂದ 1.15ರವರೆಗೆ ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿ ಕರ ಪಾತ್ರ, ಇಲಾಖೆಯ ನಿಯಮ ಕುರಿತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.30ರಿಂದ 3.15ರವರೆಗೆ ಮುಂದಿನ ದಿನಗಳಲ್ಲಿ ಕಾರಂಜಿಕೆರೆ ಮತ್ತು ಲಲಿತಾದ್ರಿಪುರ ಕೆರೆ ಸಂರಕ್ಷಣೆ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.15ರಿಂದ 4 ಗಂಟೆಯವರೆಗೆ ಕೆರೆ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.

Translate »