ಕಂದಾಯ ನಿಗದಿಗೆ ಜಮಾಬಂದಿ ಕಡ್ಡಾಯ ಕ್ರಮ ಸರಿಯಲ್ಲ
ಕೊಡಗು

ಕಂದಾಯ ನಿಗದಿಗೆ ಜಮಾಬಂದಿ ಕಡ್ಡಾಯ ಕ್ರಮ ಸರಿಯಲ್ಲ

June 5, 2018

ಪೊನ್ನಂಪೇಟೆ:  ಜಾಗದ ಕಂದಾಯ ನಿಗದಿಪಡಿಸಲು ಮತ್ತು ಪರಿವರ್ತನೆ ಗೊಳಿಸಲು ಇದೀಗ ಕಂದಾಯ ಇಲಾಖೆ 1912 ನೇ ಇಸವಿಯ ಜಮಾ ಬಂದಿಯನ್ನು ಕಡ್ಡಾಯಗೊಳಿಸಿರುವ ಕ್ರಮ ಸರಿಯಲ್ಲ. ಕಂದಾಯ ನಿಗದಿ ಮತ್ತು ಜಾಗ ಪರಿವರ್ತನೆ ಕಡತಗಳನ್ನು ಜಮಾ ಬಂದಿಯ ನೆಪ ಹೇಳಿ ಉಪ ವಿಭಾಗಾಧಿಕಾರಿಗಳು ಹಿಂತಿರುಗಿಸುತ್ತಿ ದ್ದಾರೆ. ಇದೊಂದು ಜನವಿರೋಧಿ ನೀತಿ ಯಾಗಿದ್ದು, ಇದನ್ನು ತಕ್ಷಣ ಹಿಂಪಡೆಯು ವಂತೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.

ಸೋಮವಾರ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ಹಿನ್ನೆಲೆ ಯಲ್ಲಿ ಬಾಣೆ ಸೇರಿದಂತೆ ಇನ್ನಿತ್ತರ ಜಾಗಕ್ಕೆ ಕಂದಾಯ ನಿಗದಿಪಡಿಸುವುದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಇದೀಗ ಕಂದಾಯ ಇಲಾಖೆ ಕಾನೂನನ್ನು ಗಾಳಿಗೆ ತೂರಿ ಜನರಿಗೆ ಕಿರುಕುಳ ನೀಡುತ್ತಿದೆ. ಇದು ಕಂದಾಯ ಇಲಾಖೆ ಜನತೆಗೆ ಮಾಡು ತ್ತಿರುವ ಅನ್ಯಾಯವಾಗಿದೆ ಎಂದು ಕೆ.ಜಿ. ಬೋಪಯ್ಯ ಕಿಡಿಕಾರಿದ್ದಾರೆ.

ಜಾಗದ ಕಂದಾಯ ನಿಗದಿಪಡಿಸಲು ಮತ್ತು ಜಾಗ ಪರಿವರ್ತನೆಗೊಳಿಸುವ ಜನರ ನೂರಾರು ಅರ್ಜಿ ಕಡತಗಳನ್ನು ಉಪ ವಿಭಾಗಾಧಿಕಾರಿಗಳು ಇತ್ತಿಚೇಗೆ ಹಿಂದಕ್ಕೆ ಕಳಿಸಿದ್ದಾರೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವಾರು ಬಡ ಜನರು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಪ್ರತಿನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡು ವಂತಾಗಿದೆ. ಉಪವಿಭಾಗಾಧಿಕಾರಿಗಳ ಈ ಕ್ರಮ ಇಲಾಖೆಯಲ್ಲಿ ಮತ್ತಷ್ಟು ಭ್ರಷ್ಟಾ ಚಾರಕ್ಕೆ ಅವಕಾಶ ಮಾಡಿಕೊಟ್ಟಂತಿದೆ. ಜನತೆ ಇದರಿಂದಾಗಿ ರೋಸಿ ಹೋಗಿದ್ದು, ಜನರ ತಾಳ್ಮೆಯ ಕಟ್ಟೆಯೊಡೆಯುವ ಮುನ್ನ ಕಂದಾಯ ಇಲಾಖಾಧಿಕಾರಿಗಳು ಎಚ್ಚೆತ್ತು ಕೊಳ್ಳುವುದು ಉತ್ತಮ ಎಂದು ಕೆ.ಜಿ. ಬೋಪಯ್ಯ ಹೇಳಿದರು. ಈ ಬಗ್ಗೆ ಜಿಲ್ಲಾಧಿ ಕಾರಿಗಳು ಕೂಡಲೇ ಗಮನ ಹರಿಸಿ ಆದೇಶ ಹಿಂಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಮುಂದಿನ 8 ದಿನಗೊಳಗಾಗಿ ಆದೇಶ ಹಿಂಪಡೆದು ಸಮಸ್ಯೆ ಪರಿಹರಿಸದಿದ್ದಲ್ಲಿ ಬಿಜೆಪಿ ವತಿಯಿಂದ ಸಾರ್ವಜನಿಕರನ್ನು ಸಂಘಟಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಮುಖಂಡರಾದ ಕೆ.ಬಿ. ಗಿರೀಶ್ ಗಣಪತಿ, ಮಲ್ಲಂಡ ಮಧು ದೇವಯ್ಯ ಮೊದಲಾದ ವರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »