ಡಿ.17ಕ್ಕೆ `ದುಬಾರಿ’  `ಬಾಲನಿನಾದ’ ಕೃತಿ ಬಿಡುಗಡೆ
ಮೈಸೂರು

ಡಿ.17ಕ್ಕೆ `ದುಬಾರಿ’ `ಬಾಲನಿನಾದ’ ಕೃತಿ ಬಿಡುಗಡೆ

December 15, 2018

ಮೈಸೂರು: ಲೇಖಕ ಡಾ.ಪ್ರಸನ್ನ ಹೆಗಡೆ ಅವರ `ದುಬಾರಿ’ ಹಾಗೂ `ಬಾಲ ನಿನಾದ’ ಕೃತಿಗಳ ಬಿಡುಗಡೆ ಸಮಾ ರಂಭವನ್ನು ಡಿ.17ರಂದು ಹಮ್ಮಿ ಕೊಳ್ಳಲಾ ಗಿದೆ ಎಂದು ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಹಿರಿಮರಳಿ ಧರ್ಮರಾಜು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನವರ್ಧಿನಿ ಎಜುಕೇಷನಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ವಿಚಾರ ವೇದಿಕೆ, ಭೂಮಿಗಿರಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಕೃತಿಗಳ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಕಲಾ ಮಂದಿರದ ಮನೆಯಂಗಳದಲ್ಲಿ ಸಮಾ ರಂಭವನ್ನು ವಿದ್ವಾಂಸ ಡಾ.ಮಳಲಿ ವಸಂತ ಕುಮಾರ್ ಉದ್ಘಾಟಿಸಿ, `ದುಬಾರಿ’ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಂಸ್ಕøತ ವಿವಿ ಕುಲಪತಿ ಡಾ.ಪದ್ಮಾಶೇಖರ್ `ಬಾಲ ನಿನಾದ’ ಕೃತಿ ಬಿಡುಗಡೆ ಮಾಡಲಿದ್ದು, ಇದೇ ವೇಳೆ ಗೌರವ ಡಾಕ್ಟರೇಟ್ ಪದ ವಿಗೆ ಭಾಜನರಾಗಿರುವ ಪ್ರಸನ್ನ ಹೆಗಡೆ ಅವ ರನ್ನು ಅಭಿನಂದಿಸಲಾಗುವುದು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ವಹಿಸ ಲಿದ್ದಾರೆ. ಅತಿಥಿಗಳಾಗಿ ಸಂಸ್ಕøತಿ ಪೋಷಕ ಡಾ.ರಘುರಾಮಯ್ಯ ವಾಜಪೇಯಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ಪಾಲ್ಗೊಳ್ಳಲಿದ್ದು, ಭೂಮಿ ಗಿರಿ ಪ್ರಕಾಶನದ ಎನ್.ಬೆಟ್ಟೇಗೌಡ ಉಪ ಸ್ಥಿತರಿರಲಿದ್ದಾರೆ. ಇದೇ ವೇಳೆ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕೃತಿಗಳ ಕರ್ತೃ ಡಾ.ಪ್ರಸನ್ನ ಹೆಗಡೆ ಗೋಷ್ಠಿಯಲ್ಲಿದ್ದರು.

Translate »