ಶಬರಿಮಲೆ ಸನ್ನಿಧಾನದ ಬಾಗಿಲು ಜ.20ಕ್ಕೆ ಬಂದ್
ಮೈಸೂರು

ಶಬರಿಮಲೆ ಸನ್ನಿಧಾನದ ಬಾಗಿಲು ಜ.20ಕ್ಕೆ ಬಂದ್

January 17, 2020

ಶಬರಿಮಲೆ,ಜ.16- ಕೇರಳದ ಪಟ್ಟಾನಂತಿಟ್ಟ ಜಿಲ್ಲೆಯಲ್ಲಿರುವ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಶಬರಿ ಮಲೆ ಸ್ವಾಮಿ ಅಯ್ಯಪ್ಪನ ಸನ್ನಿ ಧಾನ ಮಕರ ವಿಳಕ್ಕು ಉತ್ಸವ ಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ತೆರೆದುಕೊಂಡ ಸನ್ನಿಧಾನದ ಬಾಗಿಲು ಜ.20 ರಂದು ಬೆಳಿಗ್ಗೆ 7ಕ್ಕೆ ಮುಚ್ಚ ಲಿದೆ. ನ.16ರಿಂದ ಆರಂಭ ಗೊಂಡಿದ್ದ ಮಂಡಲ ಉತ್ಸವ ಡಿ.27ರ ತನಕ ನಡೆದು ಶಬರಿಮಲೆ ಬಾಗಿಲು ಮುಚ್ಚ ಲಾಗಿತ್ತು. ನಂತರ 21 ದಿನಗಳ ಮಕರ ಉತ್ಸವಕ್ಕಾಗಿ ಡಿ.30ರಂದು ತೆರದುಕೊಂಡಿತು. ಜ.15ರಂದು ಮಕರವಿಳಕ್ಕು ಉತ್ಸವ ಹಾಗೂ ಮಕರ ಜ್ಯೋತಿ ದರ್ಶನವಾಗಿತ್ತು.

ಹೀಗೆ ಕಳೆದ 2 ತಿಂಗಳಿನಿಂದ ಸದಾ ಭಕ್ತರ ಆಗಮನದಿಂದ ಜಿನುಗುತ್ತಿದ್ದ ಅಯ್ಯ ಪ್ಪನ ಸನ್ನಿಧಾನದಲ್ಲಿ ಮಕರವಿಳಕ್ಕು ಉತ್ಸವದ ಬಳಿಕ ಭಕ್ತರ ಸಂಖ್ಯೆ ಇಳಿಮುಖ ವಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ.

ಈ ವರ್ಷದಲ್ಲಿ ಡಿ.25, 26, 27ರಂದು ಅನಿರೀಕ್ಷಿತವಾಗಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದರಿಂದ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗಿತ್ತು. ಡಿ.26ರಂದು ಸೂರ್ಯಗ್ರಹಣ ಹಾಗೂ ಡಿ.27ರಂದು ಮಂಡಲ ಪೂಜೆ ನಡೆದು ಸನ್ನಿಧಾನದ ಬಾಗಿಲು ಮುಚ್ಚುವ ಕಾರಣ ಈ ಏರಿಕೆ ಕಂಡು ಬರಲು ಕಾರಣವಾಯಿತು.

ಅಲ್ಲದೆ ಜ.10ರಿಂದ ಪ್ರತೀವರ್ಷದಂತೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುವ ಕಾರಣದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೇ ರೀತಿ ಜನವರಿ 15ರಂದು ಮಕರ ಜ್ಯೋತಿ ಉತ್ಸವದಂದು ಜನಸಂದಣಿ ಕಿಕ್ಕಿರಿದಿತ್ತು. ಇದು ಸಂಭವನೀಯವಾಗಿ ದ್ದರಿಂದ ಪೂರಕ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ತನಂತಿಟ್ಟ ಜಿಲ್ಲಾಡಳಿತ ಹಾಗೂ ತಿರುವಾಂಕೂರ್ ದೇವಸ್ವಂ ಬೋರ್ಡ್ ತಿಳಿಸಿದೆ.

Translate »