ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಯಡಿಯೂರಪ್ಪ
ಮೈಸೂರು

ಇದು ಯಶಸ್ಸಿನ ಮುಂದೂಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ: ಯಡಿಯೂರಪ್ಪ

September 8, 2019

ಬೆಂಗಳೂರು, ಸೆ.7- ಭಾರತೀಯ ಬಾಹ್ಯಾಕಾಶ ಸಂಸೊಧನಾ ಸಂಸ್ಥೆ (ಇಸ್ರೋ) ಚಂದ್ರ ಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಕಡೇ ಕ್ಷಣದಲ್ಲಿ ಸಂವಹನ ವನ್ನು ಕಳೆದುಕೊಂಡಿದೆ. ಇದರಿಂದಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಬೇಕಾಗಿದ್ದ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ತೊಡಕಾ ಗಿದ್ದು ವಿಜ್ಞಾನಿಗಳಿಗೆ ಭಾರೀ ನಿರಾಶೆಯಾಗಿದೆ. ಆದರೆ ಪ್ರಧಾನಿ ಮೋದಿ ಸೇರಿ ರಾಷ್ಟ್ರ ನಾಯಕರು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು ಇದು ವೈಫಲ್ಯವಲ್ಲ. ಕೇವಲ ಪ್ರಯೋಗ ಮಾತ್ರವೆಂದು ಹೇಳಿ ದೇಶದ ಸಾಧನೆ ಬಗೆಗೆ ಹೆಮ್ಮೆಯ ಮಾತನ್ನಾಡಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಸಹ ಇಸ್ರೋ ಸಾಧನೆ ಬಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಂದ್ರಯಾನ-2 ರೋವರ್ ಚಂದ್ರನ ಮೇಲಿಳಿಯುವ ಕೆಲವೇ ಗಂಟೆಗಳ ಮುನ್ನ ಸಂಪರ್ಕ ಕಡಿತವಾಗಿ ರುವ ಬಗೆಗೆ ಟ್ವೀಟ್ ಮಾಡಿದ ಸಿಎಂ ಯಡಿಯೂರಪ್ಪ “ಇದು ಯಶಸ್ಸಿನ ಮುಂದೂ ಡಿಕೆ ಮಾತ್ರ, ನಿಮ್ಮೊಡನೆ ನಾವಿದ್ದೇವೆ. ಬೇರೆ ಯಾರೂ ಪ್ರಯತ್ನಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಧೈರ್ಯ ಮಾಡಿದ್ದಕ್ಕೆ, ನಿಮ್ಮ ಸಾಮಥ್ರ್ಯಗಳು ಮತ್ತು ಸಾಧನೆಗಳು ಯಾವಾಗಲೂ ನಮ್ಮ ದೇಶವನ್ನು ಎತ್ತರಕ್ಕೆ ಏರುವಂತೆ ಮಾಡುತ್ತವೆ” ಎಂದಿದ್ದಾರೆ. “ನಾವು ರಾಷ್ಟ್ರದ ಸಾಧನೆಗಾಗಿ ಹೆಮ್ಮೆ ಪಡುತ್ತೇವೆ. ಚಂದ್ರಯಾನ-2ನಲ್ಲಿ ಅವರ ಕಠಿಣ ಪರಿಶ್ರಮಕ್ಕಾಗಿ ನಮಗೆ ಗೌರವವಿದ್ದು ಯಾವುದೇ ಅಡೆತಡೆಗಳಿದ್ದರೂ ಅವು ಭವಿಷ್ಯದಲ್ಲಿ ಹೆಚ್ಚಿನ ಸಾಧನೆಗಳಿಗೆ ನಮ್ಮನ್ನು ಕರೆದೊಯ್ಯುವ ಕಲಿಕೆಯಾಗಲಿದೆ” ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. “ನಮ್ಮ ವಿಜ್ಞಾನಿಗಳ ಸಾಧನೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಚಂದ್ರಯಾನ 2 ನಿಜಕ್ಕೂ ಉತ್ತಮ ಯೋಜನೆ. ಇದನ್ನು ಕೆಲವರಷ್ಟೇ ಪ್ರಯತ್ನಿಸಲು ಸಾಧ್ಯ. ಅಂತಿಮ ಗುರಿಗೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 

Translate »