ಸರ್ಕಾರದ ಅಸ್ಥಿರತೆ ನಡುವೆ ನೂರಾರು ಅಧಿಕಾರಿಗಳ ವರ್ಗಾವಣೆ
ಮೈಸೂರು

ಸರ್ಕಾರದ ಅಸ್ಥಿರತೆ ನಡುವೆ ನೂರಾರು ಅಧಿಕಾರಿಗಳ ವರ್ಗಾವಣೆ

July 19, 2019

ಬೆಂಗಳೂರು, ಜು.18- ಸರ್ಕಾರಕ್ಕೆ ಅಸ್ತಿರತೆ ಕಾಡುತ್ತಿರುವ ಈ ಸಂದರ್ಭದಲ್ಲೇ ಇಂದು ರಾಜ್ಯ ಸರ್ಕಾರ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಆರೋಪಕ್ಕೆ ಪುಷ್ಟಿ ನೀಡಿದೆ. ಕಳೆದ ಎರಡು ದಿನಗಳಿಂದ ನೂರಾರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಇಂದು 8 ಕೆಎಎಸ್ ಅಧಿಕಾರಿಗಳು, 30 ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳು ಹಾಗೂ 110 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Translate »