ಸಿದ್ದು ಭೇಟಿ ಮಾಡಿದ ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು

ಸಿದ್ದು ಭೇಟಿ ಮಾಡಿದ ವಿ.ಶ್ರೀನಿವಾಸ್ ಪ್ರಸಾದ್

December 18, 2019

ಬೆಂಗಳೂರು,ಡಿ.17- ರಾಜಕೀಯ ಬದ್ಧ ವೈರಿ ಗಳಂತೆ ಬಿಂಬಿತವಾಗಿದ್ದ ಮಾಜಿ ಸಿಎಂ ಸಿದ್ದ ರಾಮಯ್ಯ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ವರ್ಷ ಗಳ ಬಳಿಕ ಮಂಗಳವಾರ ಭೇಟಿಯಾಗಿದ್ದರು.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಸಿದ್ದರಾಮಯ್ಯ ಕೇಳಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಜೊತೆಯಲ್ಲಿದ್ದರು.

ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ ಪ್ರಸಾದ್, 20 ವರ್ಷಗಳ ಹಿಂದೆ ಸಿದ್ದರಾಮಯ್ಯನವರು ನವದೆಹಲಿಯಲ್ಲಿ ಆಂಜಿ ಯೋಪ್ಲಾಸ್ಟಿ ಮಾಡಿಸಿದ್ದರು. ಆಗ ಕೇಂದ್ರ ಸಚಿವನಾ ಗಿದ್ದ ನಾನು ಆಗಾಗ್ಗೆ ಭೇಟಿ ಮಾಡಿ, ಧೈರ್ಯ ತುಂಬಿದ್ದೆ. ಹಾಗೆಯೇ ಈಗಲೂ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ನಾವು ರಾಜಕೀಯ ಶತ್ರುಗಳಲ್ಲ, ರಾಜ ಕೀಯ ಎದುರಾಳಿಗಳು ಎಂದು ಹೇಳಿದರು.

Translate »