ಮೈಸೂರು,ಜು.18(ವೈಡಿಎಸ್)- ಕೇರಳದಿಂದ ಮೈಸೂರಿಗೆ ತ್ಯಾಜ್ಯ ತುಂಬಿ ಕೊಂಡು ಬಂದಿದ್ದ ಲಾರಿ ಮತ್ತು ಚಾಲಕ ಜಾಫರ್ನನ್ನು ಪಾಲಿಕೆ ಅಧಿಕಾರಿಗಳು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಕೇರಳದಿಂದ ತ್ಯಾಜ್ಯವನ್ನು ತುಂಬಿ ಕೊಂಡು ಮೈಸೂರಿಗೆ ಬರುತ್ತಿದ್ದ ಲಾರಿಯನ್ನು ಟೋಲ್ಗೇಟ್ ಬಳಿ ತೆರಿಗೆ ಅಧಿ ಕಾರಿ ಗಳು ತಪಾಸಣೆ ನಡೆಸಿದಾಗ ಶಾಂತಿ ನಗ ರದ ಟ್ರೇಡರ್ಸ್ನ ಮಾಲೀಕ ಹಕೀಬ್ ಎಂಬು ವರ ಜಿಎಸ್ಟಿ ಸಂಖ್ಯೆಯನ್ನು ಬಳಸಿ ಬಿಲ್ ಮಾಡಿದ್ದರು. ಈ ಕುರಿತು ಅಧಿಕಾರಿ ಗಳು ಹಕೀಬ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಮೇಯರ್ ಮತ್ತು ಉಪ ಮೇಯರ್ ಅವರು ಸ್ಥಳಕ್ಕೆ ತೆರಳಿ ವಿಚಾ ರಿಸಿದಾಗ ಕಾರ್ಖಾನೆಯೊಂದಕ್ಕೆ ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ತನಿಖೆ ಮಾಡಲಾಗುವುದು. ಈ ಕುರಿತು ಉದಯಗಿರಿ ಠಾಣೆಗೆ ದೂರು ನೀಡ ಲಾಗಿದೆ ಎಂದು ಪಾಲಿಕೆ ಆರೋಗ್ಯಾಧಿ ಕಾರಿ ನಾಗರಾಜ್ ತಿಳಿಸಿದ್ದಾರೆ.