ಮೈಸೂರು, ಜು.21 (ಆರ್ಕೆಬಿ)- ಬರೀ ಸುಳ್ಳಿನ ಕಂತೆಯಾದ ರಾಮರಾಜ್ಯ ನಮಗೆ ಬೇಡ, ನಮಗೆ ಬೇಕಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಭೀಮ ರಾಜ್ಯ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ರಂಗಾಯಣ ಶ್ರೀರಂಗ ಮಂದಿರದಲ್ಲಿ ಕೃಷ್ಣ ಜನಮನ ಬರೆದ ಯಾತ್ರೆ ಮತ್ತು ರಂಗ ಕಾಯಕ’ ಪುಸ್ತಕ ಗಳ ಬಿಡುಗಡೆ ಮಾಡಿ, `ವೃತ್ತಿ, ಹವ್ಯಾಸಿ, ರೆಪರ್ಟರಿ ಹಾಗೂ ಸಾಮಾಜಿಕ ಹೊಣೆಗಾರಿಕೆ’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಮರಾಜ್ಯ ಎಂಬುದು ಬರೀ ಸುಳ್ಳಿನ ಕಂತೆ. ಜಾತಿ ಕಾರಣಕ್ಕೆ ಶಂಬೂಕನನ್ನು ವಧಿಸಿದ, ಸೀತೆ ಮತ್ತು ಲಕ್ಷ್ಮಣನ ಸಾವಿಗೆ ಕಾರಣನಾದ ರಾಮರಾಜ್ಯ ನಮಗೆ ಬೇಡ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸಮಾನತೆ, ಸಹೋದ ರತ್ವ, ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಅವರ ಭೀಮರಾಜ್ಯ ಬೇಕು. ಸಂವಿಧಾನ ಇರುವುದರಿಂದಲೇ ನಾವಿಲ್ಲಿ ನಿಂತು ನಿರ್ಭೀಡೆಯಿಂದ ಮಾತನಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಮನುಸ್ಮøತಿ ಭಯಂಕರ ಕೃತಿ ಎಂದು ಅದನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ. ಹೀಗಿರುವಾಗ ಸಂವಿಧಾನ ತೆಗೆದು ಮನುಸ್ಮøತಿ ತರುತ್ತೇನೆ ಎನ್ನುವವರಿಗೆ ಮನುಷ್ಯತ್ವ ಇದೆಯೇ? ಎಂದು ಪ್ರಶ್ನಿಸಿದರು. ಕೃಷ್ಣ ಜನಮನ ಅವರ ಪುಸ್ತಕಗಳ ಕುರಿತು ಮಾತನಾಡಿದ ಅವರು, ಯಾತ್ರೆ ಕೃತಿಯು ಆಧುನಿಕ ಭರತ ಖಂಡದ ಕರಾಳ ಸಂದರ್ಭಗಳನ್ನು ಚಿತ್ರಿಸಿದೆ. ದೇಶ ವಿಭಜನೆ ಸಂದರ್ಭದಲ್ಲಿನ ಧರ್ಮದ ಕಾರಣಕ್ಕೆ ಜನತೆ ಅನುಭವಿಸಿದ ನೋವು ಈ ಕೃತಿಯಲ್ಲಿ ವ್ಯಕ್ತವಾಗಿದೆ. ಜಾತಿ ಮತ್ತು ಸಮಾಜ ವ್ಯವಸ್ಥೆ, ಧಾರ್ಮಿಕ ಕಟ್ಟುಪಾಡುಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಅನುಭವಿ ಸಿದ ನೋವಿನ ಚಿತ್ರಣವೂ ಇದರಲ್ಲಿದೆ ಎಂದರು.
ಕೃಷ್ಣ ಜನಮನ ಅಂಥವರು ಒಳ್ಳೆಯ ರಂಗತಂಡ ಗಳನ್ನು ಕಟ್ಟಬೇಕು. ಸಾಹಿತ್ಯ ಕೃತಿಗಳು ಜನರಿಗೆ ಮಾನಸಿಕ ಶಕ್ತಿ ನೀಡುವಂತಿರಬೇಕು. ಇಲ್ಲದಿದ್ದರೆ ಅವು ನಿಸ್ಸಾರವಾಗು ತ್ತವೆ ಎಂದು ತಿಳಿಸಿದರು. ಹಿರಿಯ ರಂಗಕರ್ಮಿ ಹೆಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣ ದಲ್ಲಿ `ರಂಗ ನಿರ್ದೇಶಕನಿಗಿರಬೇಕಾದ ಅರ್ಹತೆ’ ಕುರಿತು ರಂಗ ನಿರ್ದೇಶಕ ಪ್ರೊ.ಹೆಚ್.ಎಸ್.ಉಮೇಶ್, `ನಟ ನಟಿಯರಿಗಿರಬೇಕಾದ ಅರ್ಹತೆ’ ಕುರಿತು ರಂಗ ಕಲಾ ವಿದ ಹುಲುಗಪ್ಪ ಕಟ್ಟೀಮನಿ ವಿಚಾರ ಮಂಡಿಸಿದರು.