ಮೈಸೂರು,ಜು.21(ಎಂಕೆ)- ಮೈಸೂ ರಿನ ಕ್ಯಾತಮಾರನಹಳ್ಳಿ ಶ್ರೀಕಂಠೇಶ್ವರ ಪ್ರೌಢಶಾಲೆಯಲ್ಲಿ ನಗರಪಾಲಿಕೆ ವತಿ ಯಿಂದ ವಾರ್ಡ್ ನಂ-31, 32ರ ವ್ಯಾಪ್ತಿಯ ಮಹಿಳೆಯರು ಹಾಗೂ ಸ್ವಸ ಹಾಯ ಗುಂಪುಗಳು ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳಿಗೆ ಸರ್ಕಾರ ಹಾಗೂ ನಗರ ಪಾಲಿಕೆಯಿಂದ ದೊರೆಯುವ ಸವಲತ್ತು ಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ಡೇ-ನಲ್ಮ್ ಯೋಜನೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ. ಟಿ.ಎಸ್.ಬೈರಲಿಂಗಯ್ಯ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ಹಣದ ಉಳಿ ತಾಯಕ್ಕೆ ಮಾತ್ರ ಸೀಮಿತವಾಗದೆ ಆರ್ಥಿಕ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕು ಎಂದರು. ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಾದ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸಿದ್ದು, ಮಹಿಳೆಯರು ಇದರ ಸದುಪ ಯೋಗವನ್ನು ಪಡೆದುಕೊಳ್ಳಬಹುದು. ಇದ ರಿಂದ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿ ದಂತಾಗುತ್ತದೆ. ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದಲೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು. ಡೇ-ನಲ್ಮ್ ಯೋಜನೆಯಡಿ ಸ್ವಸಹಾಯ ಗುಂಪುಗಳ ರಚನೆ, ಬ್ಯಾಂಕಿನ ಸಂಪರ್ಕ, ಸುತ್ತು ನಿಧಿ, ಧನ ಸಹಾಯ, ಆರ್ಥಿಕ ಉತ್ಪನ್ನಗಳಿಗೆ ತರಬೇತಿ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯವನ್ನು ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ಸ್ವಸಹಾಯ ಗುಂಪುಗಳು ಈ ಎಲ್ಲಾ ಸವಲತ್ತು ಗಳನ್ನು ಬಳಸಿಕೊಳ್ಳಬೇಕು ಎಂದರು. ಪಾಲಿಕೆ ಸದಸ್ಯರಾದ ಶಾಂತಕುಮಾರಿ, ಸತ್ಯಮೂರ್ತಿ, ಸಂತೋಷ್ಕುಮಾರ್ ಇನ್ನಿತರರಿದ್ದರು.