ವಿದ್ಯಾರ್ಥಿಗಳು ಕನಸುಗಳ ಸಾಕಾರಕ್ಕೆ ಇಚ್ಛಾಶಕ್ತಿ ಹೊಂದಿರಬೇಕು
ಮೈಸೂರು

ವಿದ್ಯಾರ್ಥಿಗಳು ಕನಸುಗಳ ಸಾಕಾರಕ್ಕೆ ಇಚ್ಛಾಶಕ್ತಿ ಹೊಂದಿರಬೇಕು

July 22, 2019

ಮೈಸೂರು,ಜು.21(ವೈಡಿಎಸ್)-ವಿದ್ಯಾರ್ಥಿ ಗಳು ದೊಡ್ಡ-ದೊಡ್ಡ ಕನಸು ಕಾಣುವ ಜತೆಗೆ ಅದನ್ನು ಸಾಕಾರ ಮಾಡಿಕೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ವಿದ್ಯಾಶಂಕರ್ ಹೇಳಿದರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ಆವರಣ ದಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಐಎಎಸ್/ಕೆÉಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾ ಗಾರದ ಶುಭÀಹಾರೈಕೆ ಸಮಾರಂಭÀದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಕಲಿತು ಉನ್ನತ ಹುದ್ದೆ ಅಲಂಕರಿಸಬೇಕೆಂಬ ಆಸೆ ಇರುತ್ತದೆ. ಈ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಯಾವುದನ್ನು ಸಾಧಿಸಬೇಕಾದರೂ ಪ್ರೇರಣೆ ಬಹಳ ಮುಖ್ಯ. ಇಲ್ಲವಾದರೆ ಸಾಧನೆ ಸಾಧ್ಯ ವಿಲ್ಲ. ನಮ್ಮ ಎದುರು ಸಾಕಷ್ಟು ನಕಾರಾತ್ಮಕ ಅಂಶಗಳಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ಗುರಿಯತ್ತ ಗಮನಹರಿಸ ಬೇಕು. ಹಾಗೆಯೇ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಎದುರಿಸಲು ತರಬೇತಿಗಾಗಿ ದೆಹಲಿಗೆ ಹೋಗಬೇಕಿಲ್ಲ. ಓದುವ ಛಲ, ಪರಿಶ್ರಮವಿದ್ದರೆ ಎಲ್ಲಿಯಾದರೂ ಕುಳಿತು ಓದಬಹುದು. ಸಾಕಷ್ಟು ಮಂದಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ಕೋಚಿಂಗ್ ಸೆಂಟರ್‍ಗಳಲ್ಲಿ ಓದಿ ಯಶಸ್ಸು ಗಳಿಸಿದ್ದಾರೆ ಎಂದು ಹೇಳಿದರು.

ವಾಗ್ಮಿ ಪೆÇ್ರ.ಎಂ.ಕೃಷ್ಣೇಗೌಡ ಮಾತ ನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೆ ಶಿಕ್ಷಣ ತಲುಪಬೇಕಾದ ಎತ್ತರ ವನ್ನು ತಲುಪಿಲ್ಲ. ಹಣ ಮತ್ತು ಅಧಿಕಾರ ಕ್ಕಿಂತ ಜ್ಞಾನ ದೊಡ್ಡದು ಎಂಬ ಮನೋ ಭಾವ ಜನರಲ್ಲಿ ಬರಬೇಕಿದೆ. ಆಗ ಮಾತ್ರ ಶಿಕ್ಷಣ ಕ್ರಾಂತಿಯಾದಂತಾಗುತ್ತದೆ ಎಂದರು.ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ದೇವ ರಾಜ್, ಕೆಎಎಸ್ ಅಧಿಕಾರಿ ಬಲ್ಲೇನಳ್ಳಿ ಶಂಕರ್, ಪ್ರೊ.ವಿಜಯ್ ಮತ್ತು ಪ್ರೊ. ಕೃ.ಪಾ.ಗಣೇಶ್, ಜ್ಞಾನಬುತ್ತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯ ನಾರಾಯಣಗೌಡ, ಹೆಚ್.ಬಾಲಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »