ನೈಜ ಸುದ್ದಿಗಳಿಂದ ಪತ್ರಿಕೆಗಳ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ
ಮೈಸೂರು

ನೈಜ ಸುದ್ದಿಗಳಿಂದ ಪತ್ರಿಕೆಗಳ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ

July 22, 2019

ಮೈಸೂರು, ಜು.21 (ಆರ್‍ಕೆಬಿ)- ಜನರು ಪತ್ರಿಕೆಗಳಲ್ಲಿ ಬರುವುದೆಲ್ಲವೂ ನಿಜ ಎಂಬ ನಂಬಿಕೆಯಿಂದ ಪತ್ರಿಕೆಗಳನ್ನು ಕೊಂಡು ಓದು ತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪತ್ರಿಕೆ ಗಳಲ್ಲಿ ಬರುವ ಸುದ್ದಿಗಳು ಸ್ಪಷ್ಪ ಮತ್ತು ಶುದ್ಧ ವಾಗಿರಬೇಕು ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ತಿಳಿಸಿದರು.

ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಮೈಸೂರಿನ ಕೆ.ಟಿ. ಸ್ಟ್ರೀಟ್ ಮಂಡಿ ಪೊಲೀಸ್ ಠಾಣೆ ಬಳಿ ರಾಗಿ ಮಂಡಿ ಚೌಕದಲ್ಲಿ ಏರ್ಪಡಿಸಿದ್ದ `ಕನ್ನಡ ಪತ್ರಿಕೆ ಕೊಂಡು ಓದಿ ಅಭಿಯಾನ-08’ ಕಾರ್ಯ ಕ್ರಮದಲ್ಲಿ ಅವರು `ಕನ್ನಡ ಪತ್ರಿಕೆ ನಡೆದು ಬಂದ ದಾರಿ’ ಕುರಿತು ಮಾತನಾಡಿದರು.

ಸುದ್ದಿ, ವರದಿಗಳು ಸತ್ಯಕ್ಕೆ ಹತ್ತಿರವಾಗಿ ರಬೇಕು. ಊಹಾಪೋಹದ ಸುದ್ದಿಗಳನ್ನು ಬರೆದು ಜನರನ್ನು ದಿಕ್ಕು ತಪ್ಪಿಸುವ ಬದಲು, ಕಣ್ಣಿಗೆ ಕಂಡಿದ್ದನ್ನು, ನಡೆದ ಘಟನಾವಳಿ ಗಳನ್ನು ಬರೆಯಬೇಕು. ಪತ್ರಿಕೆಗಳಲ್ಲಿ ಬರುವ ನೈಜ ಸುದ್ದಿಗಳು ಜನರನ್ನು ಪತ್ರಿಕೆಗಳನ್ನು ಕೊಂಡು ಓದುವಂತೆ ಮಾಡುತ್ತವೆ. ಜನರೂ ಪತ್ರಿಕೆಗಳ ಬಗ್ಗೆ ನಂಬಿಕೆ ಇಡು ತ್ತಾರೆ. ಇದರಿಂದ ಪತ್ರಿಕೆಗಳ ವಿಶ್ವಾಸಾ ರ್ಹತೆ ಉಳಿಯುತ್ತದೆ ಎಂದು ಹೇಳಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಲಿಕೆ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ರಮಣಿ), ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ನಟರಾಜ್ ಜೋಯಿಸ್, ಅಲ್ಪಸಂಖ್ಯಾತ ಮುಖಂಡ ಇಲಿಯಾಜ್ ಅಹ್ಮದ್, ಮೂಗೂರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್, ರಾಜಶೇಖರ ಕದಂಬ, ಪಾಶ್ರ್ವನಾಥ್ ಎಸ್.ಕೆ. ಜೈನ್ ಇನ್ನಿತರರು ಉಪಸ್ಥಿತರಿದ್ದರು.

Translate »