ಮೈಸೂರು: ಗೋಕಾಕ್ನ ಗೋ ರಕ್ಷಕ ಶಿವು ಉಪ್ಪಾರ್ ಅವರ ಹತ್ಯೆಯನ್ನು ಖಂಡಿಸಿ ಗಂಧದ ಗುಡಿ ಫೌಂಡೇಷನ್ನ ಕಾರ್ಯಕರ್ತರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಗೋ ರಕ್ಷಕ ಶಿವು ಉಪ್ಪಾರ್ ಅವರನ್ನು ಕಿಡಿಗೇಡಿಗಳು ಹತ್ಯೆ ಮಾಡಿ ದ್ದಾರೆ. ಹತ್ಯೆ ನಡೆದು ಇಷ್ಟು ದಿನವಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಆರೋಪಿಗಳನ್ನು ಪತ್ತೆ ಹೆಚ್ಚಿ, ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹತ್ಯೆ ಗೀಡಾದ ಶಿವು ಉಪ್ಪಾರ್ ಕುಟುಂಬಕ್ಕೆ ಪರಿ ಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಗೋ ರಕ್ಷಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮತ್ತೇ ಇಂತಹ ಘಟನೆ ಗಳು ನಡೆಯದಂತೆ ಸರ್ಕಾರ ಎಚ್ಚ ರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಂಧದಗುಡಿ ಫೌಂಡೇಷನ್ನ ರಾಜ್ಯಾ ಧ್ಯಕ್ಷ ಎನ್.ಎಲ್.ಮೋಹನ್ಕುಮಾರ್, ನಂದೀಶ್, ಸಂತೋóಷ್, ಸಂದೀಪ್, ಸುರೇಶ್, ರವಿ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.