ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದ ಯುವಕ ಬೈಕ್‍ನಿಂದ ಬಿದ್ದು ಸಾವು
ಮೈಸೂರು

ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದ ಯುವಕ ಬೈಕ್‍ನಿಂದ ಬಿದ್ದು ಸಾವು

November 30, 2018

ಮೈಸೂರು: ಸ್ನೇಹಿತನ ಹುಟ್ಟು ಹಬ್ಬ ಆಚರಿಸಲು ಕೇಕ್ ತರಲೆಂದು ತೆರಳಿದ್ದ ಯುವಕ ಬೈಕಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

ಮೈಸೂರಿನ ಶಾರದಾದೇವಿನಗರ ನಿವಾಸಿ ಹರ್ಷಕುಮಾರ ಸಿಂಗ್ (28) ಸಾವನ್ನಪ್ಪಿದ ಯುವಕ ನವೆಂಬರ್ 25ರಂದು ಸಂಜೆ ತನ್ನ ಬೈಕಿನಲ್ಲಿ ಸ್ನೇಹಿತನ ಬರ್ತ್‍ಡೇಗೆ ಕೇಕ್ ತರಲೆಂದು ಹೋಗುತ್ತಿದ್ದಾಗ ಕೆ.ಆರ್. ಆಸ್ಪತ್ರೆ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಆಯ ತಪ್ಪಿ ಬಿದ್ದಿದ್ದರು.

ತಲೆಗೆ ತೀವ್ರ ಗಾಯಗಳಾಗಿದ್ದ ಹರ್ಷಕುಮಾರ ಸಿಂಗ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದರು. ಅವರು ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »