ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಅಭಿನಂದನಾ ಸಮಾರಂಭ
ಮೈಸೂರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಅಭಿನಂದನಾ ಸಮಾರಂಭ

March 25, 2019

ಮೈಸೂರು: ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ವತಿಯಿಂದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕ ಮಹಿಳೆಯರಿಗೆ ಅಭಿನಂದನಾ ಸಮಾರಂಭವನ್ನು ಮಾ.28ರಂದು ಸಂಜೆ 4 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸ ಲಾಗಿದೆ. ವೈದ್ಯ ವಾರ್ತಾ ಆಯುರ್ವೇದ ಕನ್ನಡ ಮಾಸ ಪತ್ರಿಕೆ ಸಂಪಾದಕಿ ಅಂಬಾ ಎಂ.ಜಿ.ಆರ್. ಅರಸ್, ಬೆಂಗಳೂರು ಸೆಂಟರ್ ವಿವಿಯ ಗ್ಲೋಬಲ್ ಲಾಂಗ್ವೇಜಸ್ ವಿಭಾಗದ ಕೋ-ಆರ್ಡಿನೇಟರ್ ಡಾ.ಜ್ಯೋತಿ ವೆಂಕಟೇಶ್, ಬೆಂಗಳೂರು ಸೆಂಟ್ರಲ್ ವಿವಿ ಫ್ರೆಂಚ್ ಫ್ಯಾಕಲ್ಟಿ ಸೆಂಟರ್‍ನ ಉಪನ್ಯಾಸಕಿ ಸುಜಾತ ಸ್ವಾಮಿ, ಮಂಗಳೂರು ತುಳು ಟಿವಿ ಕೂಡ್ಲ ವರದಿಗಾರ ರೇಖಾ ಹರೀಶ್, ಮುದ್ರಣ ವಿಭಾಗದಿಂದ ಪಿ.ಶೀಲಾ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ಭೂಮಿ ಶಿವಾನಂದ ಅವರನ್ನು ಹಿರಿಯ ಸಾಹಿತಿ ತಾರಿಣಿ ಚಿದಾನಂದ ಸನ್ಮಾನಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಚುಟುಕು ಸಿರಿ ರತ್ನಾ ಹಾಲಪ್ಪಗೌಡ ವಹಿಸುವರು. ಮೈಸೂರು ಪೊಲೀಸ್ ಅಕಾಡೆಮಿ ಡೆಪ್ಯೂಟಿ ಡೈರೆಕ್ಟರ್ ಡಿ.ಸುಜಾತ ಅರಸ್ ಮುಖ್ಯ ಭಾಷಣ ಕಾರರಾಗಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಜೆಎಸ್‍ಎಸ್ ಮಹಿಳಾ ಹಾಸ್ಟೆಲ್‍ನ ನಿಲಯ ಪಾಲಕಿ ಮಮತಾ ಸುರೇಶ್, ಪೂರ್ಣ ಚೇತನ ಪಬ್ಲಿಕ್ ಶಾಲೆ ಪ್ರಿನ್ಸಿಪಾಲ್ ಲಾವಣ್ಯ ಅರಸ್ ಮತ್ತು ಕಾರ್ಯದರ್ಶಿ ಗಾಯಿತ್ರಿ ಕದಂಬ ಭಾಗವಹಿಸುವರು.

Translate »