ಅಶೋಕಪುರಂನಲ್ಲಿ ಅನ್ನಸಂತರ್ಪಣೆ
ಮೈಸೂರು

ಅಶೋಕಪುರಂನಲ್ಲಿ ಅನ್ನಸಂತರ್ಪಣೆ

April 30, 2019

ಮೈಸೂರು: ಅಶೋಕಪುರಂನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನದ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಇಲ್ಲಿನ ಶ್ರೀ ಮಹದೇಶ್ವರ ಯುವಕರ ಸಂಸ್ಥೆಯು ಕ್ರಿಶ್ಚಿಯನ್, ಮುಸ್ಲಿಂ ಬಾಂಧವ ರೊಂದಿಗೆ ಸೇರಿ ಆಯೋಜಿಸಿದ್ದ ಈ ಅನ್ನಸಂತರ್ಪಣೆಗೆ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ನಂತರ ಸಂಸ್ಥೆಯ ಪದಾಧಿಕಾರಿ ಪಿ.ರಾಜು ಮಾತನಾಡಿ, ಡಾ.ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಕಳೆದ 5 ವರ್ಷದಿಂದ ಏ.15ರಂದೇ ಅನ್ನ ಸಂತರ್ಪಣೆ ಏರ್ಪಡಿಸಿ ಕೊಂಡು ಬಂದಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆ ಎದುರಾದ್ದರಿಂದ ಸಾಧ್ಯ ವಾಗದೇ ಇಂದು ಏರ್ಪಡಿಸಿದ್ದೇವೆ. ಇದಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರು ನಮ್ಮೊಂ ದಿಗೆ ಕೈಜೋಡಿಸಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲೂ ಇನ್ನು ದೊಡ್ಡ ಮಟ್ಟದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗುವುದು ಎಂದರು. ಸಂಸ್ಥೆಯ ಗೌರವಾಧ್ಯಕ್ಷ ಗೋವಿಂದರಾಜು, ಪದಾಧಿಕಾರಿಗಳಾದ ಪುಟ್ಟರಾಜು, ಆರ್.ಪಿ.ರಜನಿ, ಹರೀಶ್, ಹರಿದಾಸ್, ಚಂದ್ರ, ಜವರಪ್ಪ, ಕುಮಾರ್, ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Translate »