ಹಿಟ್ ಅಂಡ್ ರನ್ ಕೇಸ್‍ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ
ಮೈಸೂರು

ಹಿಟ್ ಅಂಡ್ ರನ್ ಕೇಸ್‍ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ

May 3, 2019

ಮೈಸೂರು: ಹಿಟ್ ಅಂಡ್ ರನ್ ಪ್ರಕ ರಣಕ್ಕೆ ಸಂಬಂಧಿಸಿದಂತೆ ಸೆಲ್ಫೀ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ ನಂತರ ಆಟೋ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕನಕಗಿರಿ ಯಲ್ಲಿ ಮಂಗಳವಾರ ನಡೆದಿದೆ. ಶಿವಕುಮಾರ್(25) ನೇಣಿಗೆ ಶರಣಾದವರು. ಭಾನುವಾರ ಮಧ್ಯಾಹ್ನ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಸರ್ಕಲ್ ಬಳಿ ಎಲೆತೋಟದ ರಸ್ತೆಯಲ್ಲಿ ಪಾದ ಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಶಿವಕುಮಾರ್ ಆಟೋ ನಿಲ್ಲಿ ಸದೇ ಪರಾರಿಯಾಗಿದ್ದ. ಗಾಯಗೊಂಡಿದ್ದ ಪಾದಚಾರಿ ಕಡೆ ಯವರು ನೀಡಿದ ದೂರಿನನ್ವಯ ಕೆ.ಆರ್.ಸಂಚಾರ ಠಾಣೆ ಪೊಲೀಸರು ಸೋಮವಾರ ಆಟೋ ವಶಪಡಿಸಿಕೊಂಡು ಚಾಲಕ ಶಿವಕುಮಾರ್‍ನನ್ನು ವಿಚಾರಣೆಗೊಳಪಡಿಸಿದ್ದರು.

ಅದರಿಂದ ನೊಂದ ಆತ, `ನಾನು ತಪ್ಪು ಮಾಡಿದ್ದೇನೆ. ಗಾಯಗೊಂಡಿರುವ ವ್ಯಕ್ತಿ ಹಾಗೂ ಮನೆಯವರಿಗೆ ಸಾರಿ ಕೇಳುತ್ತೇನೆ’ ಎಂದು ಸೆಲ್ಫೀ ವಿಡಿಯೋ ಮೂಲಕ ಕ್ಷಮೆ ಕೇಳಿದ ಬಳಿಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »