ಪೆಟ್ರೋಲ್ ಬಂಕ್‍ನಲ್ಲಿ ಡೀಸೆಲ್ ತುಂಬಿಸುವಾಗ ಹೃದಯಾಘಾತದಿಂದ ಕಾರು ಚಾಲಕ ಸಾವು
ಮೈಸೂರು

ಪೆಟ್ರೋಲ್ ಬಂಕ್‍ನಲ್ಲಿ ಡೀಸೆಲ್ ತುಂಬಿಸುವಾಗ ಹೃದಯಾಘಾತದಿಂದ ಕಾರು ಚಾಲಕ ಸಾವು

May 3, 2019

ಮೈಸೂರು: ಕಾರಿಗೆ ಡೀಸೆಲ್ ತುಂಬಿಸುತ್ತಿ ದ್ದಾಗ ತೀವ್ರ ಹೃದಯಾಘಾತವಾಗಿ ಚಾಲಕ ಮೃತಪಟ್ಟಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ಬುಧವಾರ ಸಂಭ ವಿಸಿದೆ. ಬೆಂಗಳೂರಿನ ಜೆ.ಸಿ.ನಗರ ನಿವಾಸಿ ಎಂ.ವಿ.ಕೃಷ್ಣ ಕುಮಾರ್ (54) ಸಾವನ್ನಪ್ಪಿದವರು. ಕಾರು ಚಾಲಕರಾದ ಅವರು ಮೈಸೂರಿಗೆ ಬಂದು ಬೋಗಾದಿಯ ರಿಂಗ್ ರೋಡ್ ಜಂಕ್ಷನ್‍ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಕಾರಿಗೆ ಡೀಸೆಲ್ ತುಂಬಿಸುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು, ಕುಸಿದರು.

ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆ ದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ದೃಢಪಡಿಸಿದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೃಷ್ಣಕುಮಾರ್ ಅವರಿಗೆ ಆಗಿಂದಾಗ್ಗೆ ಎದೆ ನೋವು ಕಾಣಿಸಿಕೊಳ್ಳುತ್ತಿತ್ತಾದರೂ ಗ್ಯಾಸ್ಟ್ರಿಕ್ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಿದ್ದರೆಂದು ಕುಟುಂಬದವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದರು.

Translate »