ಜ. 5-6ರಂದು ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಭಿಷೇಕ
ಮೈಸೂರು

ಜ. 5-6ರಂದು ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಭಿಷೇಕ

December 9, 2018

ಮೈಸೂರು:  ಬಸವ ಮಾಚಿದೇವ ಸ್ವಾಮೀಜಿಗಳ ಪಟ್ಟಾಭಿಷೇಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಮಡಿವಾಳರ ಬೃಹತ್ ಜನಜಾಗೃತಿ ಸಮಾವೇಶ 2019ರ ಜ.5 ಮತ್ತು 6ರಂದು ಚಿತ್ರ ದುರ್ಗದ ಮಡಿವಾಳ ಮಾಚಿ ದೇವರ ಗುರುಪೀಠ ಮಠದ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವರ ಗುರುಪೀಠದ ಬಸವ ಮಾಚಿ ಸ್ವಾಮೀಜಿ ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ತಾಲ್ಲೂಕು ವೀರ ಮಡಿವಾಳರ ಸಂಘ ಪ್ರಕಟಿಸಿರುವ 2019ನೇ ಸಾಲಿನ ಕ್ಯಾಲೆಂಡರ್ ಶನಿವಾರ ಬಿಡುಗಡೆ ಮಾಡಿದ ಅವರು, ಅಂದು ನಡೆಯಲಿರುವ ಪಟ್ಟಾಭಿಷೇಕ ಹಾಗೂ ಮಡಿವಾಳರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಸಮಾವೇಶದಲ್ಲಿ ಸಮಾಜದ 2 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಮಡಿವಾಳ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ವಿವಿಧೆಡೆ ದೋಭಿಘಾಟ್ ನಿರ್ಮಿಸಬೇಕು. ಉಚಿತ ವಿದ್ಯುತ್ ಸೌಲಭ್ಯ, ಪ್ರತ್ಯೇಕ ನಿಗಮ ಮಂಡಳಿ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಶಿವಣ್ಣ ದುದ್ದಗೆರೆ, ಸಿದ್ದಪ್ಪಾಜಿ, ರಾಜು, ಚಂದ್ರಶೇಖರ್ ಭೈರಿ, ಜಯರಾಮು, ಚನ್ನಕೇಶವ, ವಸಂತಕುಮಾರಿ ಇದ್ದರು.

Translate »