ಪುಕ್ಕಟೆ ಪ್ರಚಾರ ಸಲ್ಲ: ಶಾಸಕರಿಗೆ ಮಾಜಿ ಮೇಯರ್ ಅಣಕ
ಮೈಸೂರು

ಪುಕ್ಕಟೆ ಪ್ರಚಾರ ಸಲ್ಲ: ಶಾಸಕರಿಗೆ ಮಾಜಿ ಮೇಯರ್ ಅಣಕ

December 9, 2018

ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಬಿಡುಗಡೆಯಾದ ಅನುದಾನವನ್ನು ತಾನು ತಂದಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜೆ.ಪಿ.ನಗರದ ವಿವಿಧ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಅವರು ಚಾಲನೆ ನೀಡಿ, ಬಡಾ ವಣೆಯ ಅಭಿವೃದ್ಧಿಗೆ ತನ್ನ ಶ್ರಮದಿಂದ ಅನುಧಾನ ತಂದಿರುವು ದಾಗಿ ಹೇಳಿ ಕೊಂಡಿದ್ದಾರೆ. ಜೆ.ಪಿ.ನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೇ ಹಲವು ಕಾಮಗಾರಿ ಗಳಿಗೆ ಅನುಮೋದನೆ ಸಿಕ್ಕಿತ್ತು.

ಆದರೆ ಶಾಸಕರು ಈಗ ಗುದ್ದಲಿ ಪೂಜೆ ನೆರವೇರಿಸುತ್ತಾ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕಳೆದ 30 ವರ್ಷಗಳಿಂದ ಜೆ.ಪಿ.ನಗರ ಬಡಾವಣೆ ಅಭಿವೃದ್ಧಿ ಕಂಡಿರಲಿಲ್ಲ. ಸ್ಯೂವೇಜ್ ಫಾರಂ ಸಮಸ್ಯೆ ಇಂದಿಗೂ ಜೀವಂತವಾಗಿದೆ. ಅದನ್ನು ಸ್ಥಳಾಂತರಗೊಳಿಲು ಸಾಧ್ಯವಾಗಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಉದ್ದೇಶ ವಾಗಿದ್ದು, ಶಾಸಕರು ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಕೈಜೋಡಿಸುತ್ತೇವೆ. ಆದರೆ ತಾವು ಸುಳ್ಳು ಪ್ರಚಾರ ನಡೆಸುವುದನ್ನು ಶಾಸಕರು ಕೈಬಿಡಬೇಕು ಎಂದು ಗಮನ ಸೆಳೆದರು. ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಮಾಜಿ ಸದಸ್ಯೆ ಉಮಾಮಣಿ ಇದ್ದರು.

Translate »