ಅತ್ಯಂತ ಶ್ರೇಷ್ಠ ದಾನ ರಕ್ತದಾನ
ಕೊಡಗು

ಅತ್ಯಂತ ಶ್ರೇಷ್ಠ ದಾನ ರಕ್ತದಾನ

April 4, 2019

ವಿರಾಜಪೇಟೆ: ಇತ್ತೀಚಿನ ದಿನದಲ್ಲಿ ಜನರು ರಕ್ತಹೀನತೆ ಮತ್ತು ಅಪಘಾತದಿಂದ ಗಾಯಗೊಂಡು ಸಕಾಲದಲ್ಲಿ ರಕ್ತದೊರಕದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಮಡಿಕೇರಿಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಹೇಳಿದರು.
ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಇಂದು ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಗೋಣಿಕೊಪ್ಪಲಿನ ಲಯನ್ಸ್ ಸಂಸ್ಥೆಯ ಸಂಯೋಜನೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ಕೆ.ಪಿ.ಕರುಂಬಯ್ಯ ರಕ್ತದಾನದ ಮಹತ್ವ ಕುರಿತು ವಿವರಣೆ ಕೊಟ್ಟರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪುತ್ತಮನೆ ಸ್ಮರಣ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಎಂ.ಕಮಲಾಕ್ಷಿ ಹಾಗೂ ರಾಷ್ಟ್ರೀಯ ಸೇವಾಯೋಜನೆಯ ಅಧಿಕಾರಿಗಳಾದ ಡಾ.ಆನಂದ್ ಕಾರ್ಲ ಹಾಗೂ ಹೆಚ್.ವಿ. ನಾಗರಾಜು ಇತರರು ಹಾಜರಿದ್ದರು.

Translate »