ಮಹಾಜನ, ಕಾವೇರಿ ಶಾಲೆ ನಿವೃತ್ತ ಪ್ರಾಂಶುಪಾಲೆ ಬಿ.ಟಿ.ಮುತ್ತಮ್ಮ ನಿಧನ
ಕೊಡಗು

ಮಹಾಜನ, ಕಾವೇರಿ ಶಾಲೆ ನಿವೃತ್ತ ಪ್ರಾಂಶುಪಾಲೆ ಬಿ.ಟಿ.ಮುತ್ತಮ್ಮ ನಿಧನ

February 12, 2019

ಮೈಸೂರು: ಮೈಸೂರು ರಾಮಕೃಷ್ಣನಗರ ನಿವಾಸಿ ಪಾರುವಂಗಡ ಪಿ.ಉತ್ತಯ್ಯ (ತಾಮನೆ ಬೊಳ್ಳಚಂಡ) ಅವರ ಧರ್ಮಪತ್ನಿ ಶ್ರೀಮತಿ ಬಿ.ಟಿ. ಮುತ್ತಮ್ಮ ಅವರು ಇಂದು ಮಧ್ಯಾಹ್ನ ನಿಧನರಾದರು.

ಮೃತರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯ ರಾದ ಶುಭ ಅಚ್ಚಯ್ಯ, ಅಶ್ವಿನಿ ಮಾದಪ್ಪ, ಮೊಮ್ಮಕ್ಕಳು, ಅಳಿಯ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರು ಮಹಾಜನ ಎಜುಕೇಷನ್ ಸೊಸೈಟಿ ಹಾಗೂ ಕಾವೇರಿ ಶಾಲೆಯಲ್ಲಿ ಪ್ರಾಂಶುಪಾಲ ರಾಗಿ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ಮೈಸೂರು ಗೋಕುಲಂನಲ್ಲಿರುವ ರುದ್ರಭೂಮಿಯಲ್ಲಿ ನಾಳೆ (ಫೆ.13) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »